ಆ್ಯಪ್ನಗರ

ನೇತಾಜಿ ಸುಭಾಸ ಚಂದ್ರ ಬೋಸ್‌ ಜಯಂತಿ

ಗದಗ: ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ವಿದ್ಯಾಭ್ಯಾಸದ ಜತೆಗೆ ದೇಶಭಕ್ತಿಯನ್ನು ತಮ್ಮ ರಕ್ತದಲ್ಲಿಬೆಳೆಸಿಕೊಂಡು ಬಂದ ದೇಶ ಭಕ್ತ ನೇತಾಜಿ ಸುಭಾಸಚಂದ್ರ ಬೋಸ್‌ ಎಂದು ಸಿ.ಎಂ.ಮಾರನಬಸರಿ ಹೇಳಿದರು.

Vijaya Karnataka 24 Jan 2020, 7:12 pm
ಗದಗ: ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ವಿದ್ಯಾಭ್ಯಾಸದ ಜತೆಗೆ ದೇಶಭಕ್ತಿಯನ್ನು ತಮ್ಮ ರಕ್ತದಲ್ಲಿಬೆಳೆಸಿಕೊಂಡು ಬಂದ ದೇಶ ಭಕ್ತ ನೇತಾಜಿ ಸುಭಾಸಚಂದ್ರ ಬೋಸ್‌ ಎಂದು ಸಿ.ಎಂ.ಮಾರನಬಸರಿ ಹೇಳಿದರು.
Vijaya Karnataka Web netaji subhas chandra bose jayanti
ನೇತಾಜಿ ಸುಭಾಸ ಚಂದ್ರ ಬೋಸ್‌ ಜಯಂತಿ


ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿಗುರುವಾರ ನಡೆದ ನೇತಾಜಿ ಸುಭಾಸ ಚಂದ್ರ ಬೋಸ್‌ರವರ ಜಯಂತ್ಯುತ್ಸವದಲ್ಲಿಮಾತನಾಡಿದರು.

ಮನೆಯವರ ಒತ್ತಾಯಕ್ಕೆ ಮಣಿದು ವಿದೇಶದಲ್ಲಿ(ಐಸಿಎಸ್‌) ಇಂಡಿಯನ್‌ ಸಿವಿಲ್‌ ಸರ್ವಿಸ್‌ ಪರೀಕ್ಷೆಯಲ್ಲಿಉತ್ತೀರ್ಣಗೊಂಡು ವಿದೇಶದಲ್ಲಿತಮ್ಮ ಸೇವೆ ಪ್ರಾರಂಭಿಸಿದರು. ಬ್ರಿಟಿಷರ ದಬ್ಬಾಳಿಕೆಯಿಂದ ತಮ್ಮ ನೌಕರಿ ಬಿಟ್ಟು ಮರಳಿ ಭಾರತಕ್ಕೆ ಬಂದು ಸ್ವಾತಂತ್ರ್ಯಕ್ಕಾಗಿ ಮುಂಚೂಣಿಯಲ್ಲಿಮಹಾತ್ಮಾ ಗಾಂಧಿ ಅವರೊಂದಿಗೆ ಹೋರಾಟಕ್ಕೆ ಇಳಿದರು. ಭಾರತೀಯರು ನನಗೆ ಒಂದು ತೊಟ್ಟು ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರತ್ರ್ಯ ನೀಡುತ್ತೇನೆಂದು ಘೋಷಣೆ ಕೂಗಿದರು. ಸ್ವಾತಂತ್ರತ್ರ್ಯ ಹೋರಾಟದಲ್ಲಿತಮ್ಮ ಪ್ರಾಣವನ್ನು ಭಾರತ ಮಾತೆಗೆ ಅರ್ಪಿಸಿದ ಮಹಾನ್‌ ಚೇತನ. ಇವರಲ್ಲಿದ್ದ ಛಲ, ದಿಟ್ಟತನ, ದೇಶಭಕ್ತಿ, ಶಿಸ್ತು ಇವೆಲ್ಲವನ್ನು ಇಂದಿನ ಮಕ್ಕಳು ತಮ್ಮ ಜೀವನದಲ್ಲಿಅಳವಡಿಸಿಕೊಂಡು ಭಾರತ ಮಾತೆಗೆ ಹೆಮ್ಮೆಯ ಪುತ್ರರಾಗ ಬೇಕೆಂದರು.ಮುಖ್ಯಾಧ್ಯಾಪಕ ಕೆ.ಎಂ.ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ