ಆ್ಯಪ್ನಗರ

ಸಂಭ್ರಮದ ಹೊಸ ವರ್ಷಾಚರಣೆ

ಶಿರಹಟ್ಟಿ: ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿಡಿ.31ರ ಮಧ್ಯರಾತ್ರಿ 12ರ ನಂತರ ಹೊಸ ವರ್ಷಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

Vijaya Karnataka 2 Jan 2020, 5:00 am
ಶಿರಹಟ್ಟಿ: ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿಡಿ.31ರ ಮಧ್ಯರಾತ್ರಿ 12ರ ನಂತರ ಹೊಸ ವರ್ಷಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka Web new years eve
ಸಂಭ್ರಮದ ಹೊಸ ವರ್ಷಾಚರಣೆ


ವಿಶೇಷವಾಗಿ ಯುವಕರು ನೂತನ ವರ್ಷವನ್ನು ಸ್ವಾಗತಿಸುವುದಕ್ಕೆ ಸಂಜೆಯಿಂದಲೇ ಎಲ್ಲತಯಾರಿ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಸ್ನೇಹಿತರ,ಬಂಧುಗಳೊಂದಿಗೆ ಒಡಗೂಡಿ ಊಟ ಮಾಡಿ 12ರ ನಂತರ ಕೇಕ್‌ ಕತ್ತರಿಸಿ ಹೊಸ ವರ್ಷ ಬರಮಾಡಿಕೊಂಡರು.

ಇನ್ನೂ ಕೆಲವರು ಮದ್ಯದ ಕಿಕ್‌ನಲ್ಲಿತೇಲುತ್ತ, ರಸ್ತೆಗಳಲ್ಲಿ, ಪ್ರಮುಖ ವೃತ್ತಗಳಲ್ಲಿಹೊಸ ವರ್ಷದ ಶುಭಾಶಯಗಳನ್ನು ಸಹ ಬಿಡಿಸಿ ಸಂಭ್ರಮಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿಸಂಭ್ರಮ :
ಹೊಸ ವರ್ಷಾಚರಣೆಯ ಶುಭಾಶಯವನ್ನು ಕೋರುವುದಕ್ಕಾಗಿ ಫೇಸ್‌ಬುಕ್‌, ವಾಟ್ಸಆ್ಯಪ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿಡಿ.31ರ ಸಂಜೆಯಿದಲೇ ಪೋಸ್ಟ್‌ಗಳು ಹರಿದಾಡುತ್ತಿರುವುದು ಸಾಮಾನ್ಯವಾಗಿತ್ತು.

ಕಸ ಸುಡುವುದರ ಮೂಲಕ ಆಚರಣೆ :
ತಾಲೂಕಿನ ಕನಕವಾಡ ಗ್ರಾಮದಲ್ಲಿಆರ್‌ಎಸ್‌ಎಸ್‌ ಯುವ ಸೇನಾ ವತಿಯಿಂದ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಕಸ ಆರಿಸಿ ಅದನ್ನು ಸುಡುವುದರ ಮೂಲಕ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಹೊಸ ವರ್ಷಾಚರಣೆ ಮಾಡಲಾಯಿತು.

ಬಿಗಿ ಬಂದೋಬಸ್‌್ತ :
ಹೊಸ ವರ್ಷಾಚರಣೆಯ ಸಂದರ್ಭದಲ್ಲಿಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶಿರಹಟ್ಟಿ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿಹೋಮ್‌ಗಾರ್ಡ್ಸ್ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಬಂದೋಬಸ್‌್ತ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ