ಸೌಲಭ್ಯವೇ ಇಲ್ಲ :ವೋಟ್ ಹಾಕಲ್ಲ
ಶಿರಹಟ್ಟಿ : ತಾಲೂಕು ಕೇಂದ್ರದಿಂದ ಸುಮಾರು 8 ಕಿಮೀ ದೂರದಲ್ಲಿರುವ ಚನ್ನಪಟ್ಟಣ ಗ್ರಾಮ ಇಲ್ಲಿಯವರೆಗೂ ಕಂದಾಯ ಗ್ರಾಮವಾಗಿ ಘೋಷಣೆಯಾಗದಿದ್ದುದರಿಂದ ಹಲವು ಸರಕಾರಿ ಸೌಲಭ್ಯದಿಂದ ವಂಚಿತವಾಗಿದ್ದು, ಎಲ್ಲ ಸೌಲಭ್ಯ ಸಿಗುವವರೆಗೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಗುರುವಾರ ಎಚ್ಚರಿಕೆ ನೀಡಿದರು.
Vijaya Karnataka 29 Mar 2019, 5:00 am
ಶಿರಹಟ್ಟಿ : ತಾಲೂಕು ಕೇಂದ್ರದಿಂದ ಸುಮಾರು 8 ಕಿಮೀ ದೂರದಲ್ಲಿರುವ ಚನ್ನಪಟ್ಟಣ ಗ್ರಾಮ ಇಲ್ಲಿಯವರೆಗೂ ಕಂದಾಯ ಗ್ರಾಮವಾಗಿ ಘೋಷಣೆಯಾಗದಿದ್ದುದರಿಂದ ಹಲವು ಸರಕಾರಿ ಸೌಲಭ್ಯದಿಂದ ವಂಚಿತವಾಗಿದ್ದು, ಎಲ್ಲ ಸೌಲಭ್ಯ ಸಿಗುವವರೆಗೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಗುರುವಾರ ಎಚ್ಚರಿಕೆ ನೀಡಿದರು.
ಚುನಾವಣೆ ಬಂದಾಗ ಮಾತ್ರ ನಮ್ಮ ಗ್ರಾಮ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನೆನಪಾಗುತ್ತಿದೆ. ನಮಗೆ ಸೌಲಭ್ಯವಿಲ್ಲವೆಂದಾದರೆ ನಾವೇಕೆ ಮತದಾನ ಮಾಡಬೇಕು ? ನಮ್ಮ ಗೋಳನ್ನು ಕೇಳೋರಾರಯರು ? ಸರಕಾರ ನೀಡುವಂತಹ ಎಲ್ಲ ಸೌಲಭ್ಯಗಳು ನಮಗೆ ಸಿಗುವ ವರೆಗೂ ನಾವು ಚುನಾವಣೆ ಬಹಿಷ್ಕರಿಸುತ್ತೇವೆ ಎಂದರು.
ದಶಕಗಳ ಕನಸು ಸಾಕಾರಗೊಂಡಿಲ್ಲ : ಚನ್ನಪಟ್ಟಣ ಗ್ರಾಮವು ಸುಮಾರು 1200ಜನಸಂಖ್ಯೆಯನ್ನು ಹೊಂದಿದೆ. 1-5ನೇ ತರಗತಿ ವರೆಗೆ ಸರಕಾರಿ ಪ್ರಾಥಮಿಕ ಶಾಲೆ ಇದೆ. ಅಂಗನವಾಡಿ ಕೇಂದ್ರವು ಸಹ ಇಲ್ಲಿದೆ. ಕಂದಾಯ ಗ್ರಾಮ ಮಾಡುವುದಕ್ಕಾಗಿ ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ಫಲಪ್ರದವಾಗದಿರುವುದರಿಂದ ಗ್ರಾಮದ ಜನತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರೇಶನ್ ಕಾರ್ಡ್ ನೀಡಿಲ್ಲ : ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಶಿರಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಕುಟುಂಬದ ಸದಸ್ಯರ ಫೋಟೊಗಳನ್ನು ತೆಗೆಸಿದ್ದರೂ ಸಹ ಇಲ್ಲಿಯವರೆಗೂ ನಮಗೆ ರೇಶನ್ ಕಾರ್ಡ್ ಸಹ ವಿತರಿಸಿಲ್ಲ. ಈ ಬಗ್ಗೆ ಕೇಳಿದರೆ ನಿಮ್ಮ ರೇಶನ್ ಕಾರ್ಡ್ಗಳು ರದ್ದಾಗಿವೆ. ನಾಳೆ ಬನ್ನಿ, ನಾಡದ್ದು ಬನ್ನಿ ಎಂದು ಹೇಳುತ್ತಿದ್ದಾರೆ. ಈ ಹಿಂದೆ ವಿತರಿಸಿದಂತಹ ಕೆಲವು ಪಡಿತರ ಚೀಟಿದಾರರು ಗ್ರಾಮದಿಂದ 5ಕಿಮೀ ದೂರದಲ್ಲಿರುವಂತಹ ಮಾಗಡಿಗೆ ಹೋಗಿ ರೇಶನ್ ತರಬೇಕಾದಂತಹ ದುಃಸ್ಥಿತಿ ಬಂದೊದಗಿದೆ. ಹೇಗಾದರೂ ಮಾಡಿ ರೇಶನ್ ವಿತರಣೆ ನಮ್ಮ ಗ್ರಾಮದಲ್ಲಿಯೇ ಆಗಬೇಕೆಂದು ಗ್ರಾಮದ ವಯೋವೃದ್ದರಾದ ಯಲ್ಲಮ್ಮ ಯತ್ನಳ್ಳಿ ಹಾಗೂ ಶಾಂತವ್ವ ಗೋನಾಳ ತಮ್ಮ ಅಳಲು ತೋಡಿಕೊಂಡರು.
ನರೇಗಾದಲ್ಲಿ ಕೆಲಸವಿಲ್ಲದ್ದರಿಂದ ಗುಳೆ : ಗ್ರಾಮವು ಕಂದಾಯ ಗ್ರಾಮವಾಗಿ ಮಾರ್ಪಡದಿರುವುದರಿಂದ ನರೇಗಾ ಯೋಜನೆಯಡಿ ಕೆಲಸ ನೀಡಲು ಸಹ ಸಾಧ್ಯವಿಲ್ಲವೆಂದು ವಿವಿಧ ತಾಂತ್ರಿಕ ಕಾರಣಗಳನ್ನು ಗ್ರಾಪಂ ಅಧಿಕಾರಿಗಳು ಹೇಳುತ್ತಿರುವುದರಿಂದ ಕುಟುಂಬ ನಿರ್ವಹಣೆಗಾಗಿ ಚನ್ನಪಟ್ಟಣದ ಅನೇಕರು ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಸಹ ಸಾಲಸೌಲಭ್ಯ ಈ ಗ್ರಾಮಕ್ಕೆ ದೊರೆಯುತ್ತಿಲ್ಲ. ಹೊಸದಾಗಿ ಯಾವುದೇ ವಸತಿ ಯೋಜನೆಯಡಿ ಇಲ್ಲಿಯ ಬಡವರಿಗೆ ಆಶ್ರಯ ಮನೆಗಳು ಸಹ ಮಂಜೂರಾಗಿರುವುದಿಲ್ಲ.
ಸ್ಥಗಿತಗೊಂಡ ಶುದ್ಧ ನೀರಿನ ಘಟಕ : ಗ್ರಾಮದ ಶಾಲಾ ಆವರಣಕ್ಕೆ ಹೊಂದಿಕೊಂಡು ನಿರ್ಮಾಣ ಮಾಡಲಾಗಿರುವಂತಹ ಶುದ್ಧ ನೀರಿನ ಘಟಕವು ಸಹ ಕಾರಾರಯರಂಭವಾಗಿಲ್ಲ. ವಿವಿಧ ಯೋಜನೆಗಳಡಿ ಸರಕಾರದ ಅನುದಾನ ಗ್ರಾಮದಲ್ಲಿ ಉಪಯೋಗವಾಗುತ್ತಿದೆ. ಆದರೆ ಕಂದಾಯ ಗ್ರಾಮವಾಗದಿರುವ ನೆಪದಲ್ಲಿ ಅನೇಕ ಸೌಲಭ್ಯಗಳಿಂದ ಇಲ್ಲಿಯ ಜನತೆ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ತಮ್ಮ ಹಂತದಲ್ಲಿ ಕನಿಷ್ಠ ಸೌಲಭ್ಯಗಳನ್ನಾದರೂ ಗ್ರಾಮಸ್ಥರಿಗೆ ನೀಡುವುದು ಅವಶ್ಯವಿದೆ.
ಚುನಾವಣೆ ಬಂದಾಗ ಮಾತ್ರ ನಮ್ಮ ಗ್ರಾಮ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನೆನಪಾಗುತ್ತಿದೆ. ನಮಗೆ ಸೌಲಭ್ಯವಿಲ್ಲವೆಂದಾದರೆ ನಾವೇಕೆ ಮತದಾನ ಮಾಡಬೇಕು ? ನಮ್ಮ ಗೋಳನ್ನು ಕೇಳೋರಾರಯರು ? ಸರಕಾರ ನೀಡುವಂತಹ ಎಲ್ಲ ಸೌಲಭ್ಯಗಳು ನಮಗೆ ಸಿಗುವ ವರೆಗೂ ನಾವು ಚುನಾವಣೆ ಬಹಿಷ್ಕರಿಸುತ್ತೇವೆ ಎಂದರು.
ದಶಕಗಳ ಕನಸು ಸಾಕಾರಗೊಂಡಿಲ್ಲ : ಚನ್ನಪಟ್ಟಣ ಗ್ರಾಮವು ಸುಮಾರು 1200ಜನಸಂಖ್ಯೆಯನ್ನು ಹೊಂದಿದೆ. 1-5ನೇ ತರಗತಿ ವರೆಗೆ ಸರಕಾರಿ ಪ್ರಾಥಮಿಕ ಶಾಲೆ ಇದೆ. ಅಂಗನವಾಡಿ ಕೇಂದ್ರವು ಸಹ ಇಲ್ಲಿದೆ. ಕಂದಾಯ ಗ್ರಾಮ ಮಾಡುವುದಕ್ಕಾಗಿ ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ಫಲಪ್ರದವಾಗದಿರುವುದರಿಂದ ಗ್ರಾಮದ ಜನತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರೇಶನ್ ಕಾರ್ಡ್ ನೀಡಿಲ್ಲ : ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಶಿರಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಕುಟುಂಬದ ಸದಸ್ಯರ ಫೋಟೊಗಳನ್ನು ತೆಗೆಸಿದ್ದರೂ ಸಹ ಇಲ್ಲಿಯವರೆಗೂ ನಮಗೆ ರೇಶನ್ ಕಾರ್ಡ್ ಸಹ ವಿತರಿಸಿಲ್ಲ. ಈ ಬಗ್ಗೆ ಕೇಳಿದರೆ ನಿಮ್ಮ ರೇಶನ್ ಕಾರ್ಡ್ಗಳು ರದ್ದಾಗಿವೆ. ನಾಳೆ ಬನ್ನಿ, ನಾಡದ್ದು ಬನ್ನಿ ಎಂದು ಹೇಳುತ್ತಿದ್ದಾರೆ. ಈ ಹಿಂದೆ ವಿತರಿಸಿದಂತಹ ಕೆಲವು ಪಡಿತರ ಚೀಟಿದಾರರು ಗ್ರಾಮದಿಂದ 5ಕಿಮೀ ದೂರದಲ್ಲಿರುವಂತಹ ಮಾಗಡಿಗೆ ಹೋಗಿ ರೇಶನ್ ತರಬೇಕಾದಂತಹ ದುಃಸ್ಥಿತಿ ಬಂದೊದಗಿದೆ. ಹೇಗಾದರೂ ಮಾಡಿ ರೇಶನ್ ವಿತರಣೆ ನಮ್ಮ ಗ್ರಾಮದಲ್ಲಿಯೇ ಆಗಬೇಕೆಂದು ಗ್ರಾಮದ ವಯೋವೃದ್ದರಾದ ಯಲ್ಲಮ್ಮ ಯತ್ನಳ್ಳಿ ಹಾಗೂ ಶಾಂತವ್ವ ಗೋನಾಳ ತಮ್ಮ ಅಳಲು ತೋಡಿಕೊಂಡರು.
ನರೇಗಾದಲ್ಲಿ ಕೆಲಸವಿಲ್ಲದ್ದರಿಂದ ಗುಳೆ : ಗ್ರಾಮವು ಕಂದಾಯ ಗ್ರಾಮವಾಗಿ ಮಾರ್ಪಡದಿರುವುದರಿಂದ ನರೇಗಾ ಯೋಜನೆಯಡಿ ಕೆಲಸ ನೀಡಲು ಸಹ ಸಾಧ್ಯವಿಲ್ಲವೆಂದು ವಿವಿಧ ತಾಂತ್ರಿಕ ಕಾರಣಗಳನ್ನು ಗ್ರಾಪಂ ಅಧಿಕಾರಿಗಳು ಹೇಳುತ್ತಿರುವುದರಿಂದ ಕುಟುಂಬ ನಿರ್ವಹಣೆಗಾಗಿ ಚನ್ನಪಟ್ಟಣದ ಅನೇಕರು ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಸಹ ಸಾಲಸೌಲಭ್ಯ ಈ ಗ್ರಾಮಕ್ಕೆ ದೊರೆಯುತ್ತಿಲ್ಲ. ಹೊಸದಾಗಿ ಯಾವುದೇ ವಸತಿ ಯೋಜನೆಯಡಿ ಇಲ್ಲಿಯ ಬಡವರಿಗೆ ಆಶ್ರಯ ಮನೆಗಳು ಸಹ ಮಂಜೂರಾಗಿರುವುದಿಲ್ಲ.
ಸ್ಥಗಿತಗೊಂಡ ಶುದ್ಧ ನೀರಿನ ಘಟಕ : ಗ್ರಾಮದ ಶಾಲಾ ಆವರಣಕ್ಕೆ ಹೊಂದಿಕೊಂಡು ನಿರ್ಮಾಣ ಮಾಡಲಾಗಿರುವಂತಹ ಶುದ್ಧ ನೀರಿನ ಘಟಕವು ಸಹ ಕಾರಾರಯರಂಭವಾಗಿಲ್ಲ. ವಿವಿಧ ಯೋಜನೆಗಳಡಿ ಸರಕಾರದ ಅನುದಾನ ಗ್ರಾಮದಲ್ಲಿ ಉಪಯೋಗವಾಗುತ್ತಿದೆ. ಆದರೆ ಕಂದಾಯ ಗ್ರಾಮವಾಗದಿರುವ ನೆಪದಲ್ಲಿ ಅನೇಕ ಸೌಲಭ್ಯಗಳಿಂದ ಇಲ್ಲಿಯ ಜನತೆ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ತಮ್ಮ ಹಂತದಲ್ಲಿ ಕನಿಷ್ಠ ಸೌಲಭ್ಯಗಳನ್ನಾದರೂ ಗ್ರಾಮಸ್ಥರಿಗೆ ನೀಡುವುದು ಅವಶ್ಯವಿದೆ.