ಫಿಲ್ಟರ್ ವಾಟರ್ ಸಿಗ್ತಿಲ್ಲ!
ಶಿರಹಟ್ಟಿ : ಉತ್ತಮ ಆರೋಗ್ಯಕರ ಜೀವನ ನಡೆಸಬೇಕೆಂದು ಸರಕಾರ ಶುದ್ಧ ನೀರಿನ ಘಟಕಗಳ ನಿರ್ಮಿಸಿದ್ದರೂ ಇಲಾಖೆ, ಎಜೆನ್ಸಿ, ಅಧಿಕಾರಿಗಳ ನಿರ್ಲಕ್ಷತ್ರ್ಯದಿಂದ ಘಟಕಗಳು ಜನತೆಗೆ ಉಪಯೋಗವಾಗಿಲ್ಲ. ಕೇವಲ ಅಂಕಿ-ಅಂಶಗಳಿಗೆ ಸಿಮೀತವಾಗುತ್ತಿದೆ.
Vijaya Karnataka 20 Jan 2020, 5:07 pm
ಚಂದ್ರು ಕೂಸ್ಲಾಪೂರ
ಶಿರಹಟ್ಟಿ : ಉತ್ತಮ ಆರೋಗ್ಯಕರ ಜೀವನ ನಡೆಸಬೇಕೆಂದು ಸರಕಾರ ಶುದ್ಧ ನೀರಿನ ಘಟಕಗಳ ನಿರ್ಮಿಸಿದ್ದರೂ ಇಲಾಖೆ, ಎಜೆನ್ಸಿ, ಅಧಿಕಾರಿಗಳ ನಿರ್ಲಕ್ಷತ್ರ್ಯದಿಂದ ಘಟಕಗಳು ಜನತೆಗೆ ಉಪಯೋಗವಾಗಿಲ್ಲ. ಕೇವಲ ಅಂಕಿ-ಅಂಶಗಳಿಗೆ ಸಿಮೀತವಾಗುತ್ತಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿವಿವಿಧ ಇಲಾಖೆಗಳಿಂದ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭವಾದ ಕೆಲ ದಿನಗಳಲ್ಲಿಸ್ಥಗಿತಗೊಳ್ಳುತ್ತಿರುವುದು, ಇನ್ನೂ ಕೆಲವು ಕಡೆಗಳಲ್ಲಿನಿರ್ಮಾಣ ಮಾಡಿದಾಗಿನಿಂದಲೂ ಕಾರಾರಯರಂಭವಾಗದಿರುವ ಬಗ್ಗೆ ಅನೇಕ ತಾಪಂ ಸಭೆಗಳಲ್ಲಿಚರ್ಚೆಯಾಗುತ್ತಲೇ ಇತ್ತು. ಇದನ್ನು ಅರಿತ ತಾಪಂ ಇಒ ಡಾ.ಎನ್.ಎಚ್.ಓಲೇಕಾರ ತಮ್ಮ ಸಿಬ್ಬಂದಿಯೊಂದಿಗೆ ಹಲವು ಗ್ರಾಮೀಣ ಪ್ರದೇಶಗಳಲ್ಲಿಪರಿಶೀಲನೆ ನಡೆಸಿ ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳ ಮಾಹಿತಿ ಕಲೆ ಹಾಕಿ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಇಲ್ಲಿಯವರೆಗೂ ಪೂರ್ಣ ಪ್ರಮಾಣದಲ್ಲಿಘಟಕಗಳು ಕಾರಾರಯರಂಭವಾಗಿಲ್ಲ. ತಾಲೂಕಿನ ಎಲ್ಲಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವಂತಹ ಇಒ ಸ್ವತಃ ಫೀಲ್ಡ್ಗೆ ಇಳಿದಿದ್ದರೂ ಸಹ ನೋ ಯೂಸ್ ಎಂಬಂತಾಗಿದೆ.
20 ಘಟಕ ಬಂದ್ :
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ ತಾಲೂಕಿನಲ್ಲಿಒಟ್ಟು 109 ಶುದ್ಧ ನೀರಿನ ಘಟಕಗಳಿದ್ದು ಇದರಲ್ಲಿಛಬ್ಬಿ, ಅಡರಕಟ್ಟಿ ತಾಂಡಾ, ಯಲ್ಲಾಪುರ, ದೊಡ್ಡೂರ, ಶಿಗ್ಲಿ, ರಾಮಗೇರಿ, ಸೂರಣಗಿ-4ನೇ ವಾರ್ಡ್, ಸೂರಣಗಿ (ಗ್ರಾಪಂ ಹತ್ತಿರ), ಕುಸಲಾಪುರ, ಮಜ್ಜೂರ, ಶಿವಾಜಿನಗರ, ಜಲ್ಲಿಗೇರಿ, ನಾದಿಗಟ್ಟಿ, ಅಕ್ಕಿಗುಂದ, ಅಕ್ಕಿಗುಂದ ತಾಂಡಾ, ಪರಸಾಪುರ, ಹೊಳಲಾಪುರ, ಚನ್ನಪಟ್ಟಣ, ಆದ್ರಳ್ಳಿ, ಶೆಟ್ಟಿಕೇರಿ ಹೀಗೆ 20 ಗ್ರಾಮಗಳಲ್ಲಿಯ 20 ಘಟಕಗಳು ಕಚ್ಚಾ ನೀರು ಸರಬರಾಜು ಇಲ್ಲದಿರುವುದು, ಹೆಸ್ಕಾಂ ಫ್ಲಕ್ಚುವೇಶನ್ ಸೇರಿದಂತೆ ನಾನಾ ಕಾರಣಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ ಇಲ್ಲಿಸರಕಾರದ ಕೋಟ್ಯಂತರ ಅನುದಾನ ಬಳಸಿದ್ದು ಉಪಯೋಗಕ್ಕಿಲ್ಲದಂತಾಗಿದೆ.
ಶಿರಹಟ್ಟಿ : ಉತ್ತಮ ಆರೋಗ್ಯಕರ ಜೀವನ ನಡೆಸಬೇಕೆಂದು ಸರಕಾರ ಶುದ್ಧ ನೀರಿನ ಘಟಕಗಳ ನಿರ್ಮಿಸಿದ್ದರೂ ಇಲಾಖೆ, ಎಜೆನ್ಸಿ, ಅಧಿಕಾರಿಗಳ ನಿರ್ಲಕ್ಷತ್ರ್ಯದಿಂದ ಘಟಕಗಳು ಜನತೆಗೆ ಉಪಯೋಗವಾಗಿಲ್ಲ. ಕೇವಲ ಅಂಕಿ-ಅಂಶಗಳಿಗೆ ಸಿಮೀತವಾಗುತ್ತಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿವಿವಿಧ ಇಲಾಖೆಗಳಿಂದ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭವಾದ ಕೆಲ ದಿನಗಳಲ್ಲಿಸ್ಥಗಿತಗೊಳ್ಳುತ್ತಿರುವುದು, ಇನ್ನೂ ಕೆಲವು ಕಡೆಗಳಲ್ಲಿನಿರ್ಮಾಣ ಮಾಡಿದಾಗಿನಿಂದಲೂ ಕಾರಾರಯರಂಭವಾಗದಿರುವ ಬಗ್ಗೆ ಅನೇಕ ತಾಪಂ ಸಭೆಗಳಲ್ಲಿಚರ್ಚೆಯಾಗುತ್ತಲೇ ಇತ್ತು. ಇದನ್ನು ಅರಿತ ತಾಪಂ ಇಒ ಡಾ.ಎನ್.ಎಚ್.ಓಲೇಕಾರ ತಮ್ಮ ಸಿಬ್ಬಂದಿಯೊಂದಿಗೆ ಹಲವು ಗ್ರಾಮೀಣ ಪ್ರದೇಶಗಳಲ್ಲಿಪರಿಶೀಲನೆ ನಡೆಸಿ ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳ ಮಾಹಿತಿ ಕಲೆ ಹಾಕಿ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಇಲ್ಲಿಯವರೆಗೂ ಪೂರ್ಣ ಪ್ರಮಾಣದಲ್ಲಿಘಟಕಗಳು ಕಾರಾರಯರಂಭವಾಗಿಲ್ಲ. ತಾಲೂಕಿನ ಎಲ್ಲಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವಂತಹ ಇಒ ಸ್ವತಃ ಫೀಲ್ಡ್ಗೆ ಇಳಿದಿದ್ದರೂ ಸಹ ನೋ ಯೂಸ್ ಎಂಬಂತಾಗಿದೆ.
20 ಘಟಕ ಬಂದ್ :
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ ತಾಲೂಕಿನಲ್ಲಿಒಟ್ಟು 109 ಶುದ್ಧ ನೀರಿನ ಘಟಕಗಳಿದ್ದು ಇದರಲ್ಲಿಛಬ್ಬಿ, ಅಡರಕಟ್ಟಿ ತಾಂಡಾ, ಯಲ್ಲಾಪುರ, ದೊಡ್ಡೂರ, ಶಿಗ್ಲಿ, ರಾಮಗೇರಿ, ಸೂರಣಗಿ-4ನೇ ವಾರ್ಡ್, ಸೂರಣಗಿ (ಗ್ರಾಪಂ ಹತ್ತಿರ), ಕುಸಲಾಪುರ, ಮಜ್ಜೂರ, ಶಿವಾಜಿನಗರ, ಜಲ್ಲಿಗೇರಿ, ನಾದಿಗಟ್ಟಿ, ಅಕ್ಕಿಗುಂದ, ಅಕ್ಕಿಗುಂದ ತಾಂಡಾ, ಪರಸಾಪುರ, ಹೊಳಲಾಪುರ, ಚನ್ನಪಟ್ಟಣ, ಆದ್ರಳ್ಳಿ, ಶೆಟ್ಟಿಕೇರಿ ಹೀಗೆ 20 ಗ್ರಾಮಗಳಲ್ಲಿಯ 20 ಘಟಕಗಳು ಕಚ್ಚಾ ನೀರು ಸರಬರಾಜು ಇಲ್ಲದಿರುವುದು, ಹೆಸ್ಕಾಂ ಫ್ಲಕ್ಚುವೇಶನ್ ಸೇರಿದಂತೆ ನಾನಾ ಕಾರಣಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ ಇಲ್ಲಿಸರಕಾರದ ಕೋಟ್ಯಂತರ ಅನುದಾನ ಬಳಸಿದ್ದು ಉಪಯೋಗಕ್ಕಿಲ್ಲದಂತಾಗಿದೆ.