ಗದಗ: ರಾಜ್ಯ ಸರಕಾರ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಎಫ್ಎಕ್ಯೂ ಗುಣಮಟ್ಟದ ಹೆಸರಕಾಳು ಖರೀದಿಸಲು ರೈತರ ನೋಂದಣಿ ಪ್ರಕ್ರಿಯೆಯನ್ನು ಸೆ.25 ರಿಂದ ಗದಗ , ರೋಣ, ನರಗುಂದ, ಮುಂಡರಗಿ ತಾಲೂಕು ಎಪಿಎಂಸಿಗಳಲ್ಲಿ, ಅಡರಕಟ್ಟಿ (ಲಕ್ಷೆತ್ರ್ಮೕಶ್ವರ)ದ ಪಿಎಸಿಎಸ್, ಮುಂಡರಗಿಯ ಟಿಎಪಿಸಿಎಂಎಸ್ಗಳಲ್ಲಿ ಆರಂಭಿಸಿದೆ. ಹೆಸರು ಕಾಳು ಬೆಳೆದ ರೈತರು ಪಹಣಿಯಲ್ಲಿರುವ ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆ ಸಂಖ್ಯೆ, ಆಯ್ಎಫ್ಎಸ್ಸಿ ಕೋಡ್ ಹಾಗೂ ಬ್ಯಾಂಕ್ ಹೆಸರು, ರೈತರ ಗಣಕೀಕೃತ ಪಹಣಿ ಪತ್ರಿಕೆ ದಾಖಲೆಗಳ ಪ್ರತಿ ಸಲ್ಲಿಸಿ ಖರೀದಿಗಾಗಿ ನೋಂದಣಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ. ಪ್ರತಿಯೊಬ್ಬ ರೈತರಿಂದ ಗರಿಷ್ಠ 4 (ನಾಲ್ಕು) ಕ್ವಿಂಟಲ್ ಹೆಸರಕಾಳು ಖರೀದಿಸಲಾಗುವುದು. ಈ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಎಲ್ಲರೈತರು ಪಡೆದುಕೊಳ್ಳಲು ತಿಳಿಸಲಾಗಿದೆ.
ಖರೀದಿ ನೋಂದಣಿಗೆ ರೈತರಿಗೆ ಸೂಚನೆ
ಗದಗ: ರಾಜ್ಯ ಸರಕಾರ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಎಫ್ಎಕ್ಯೂ ಗುಣಮಟ್ಟದ ಹೆಸರಕಾಳು ಖರೀದಿಸಲು ರೈತರ ನೋಂದಣಿ ಪ್ರಕ್ರಿಯೆಯನ್ನು ಸೆ.25 ರಿಂದ ಗದಗ , ರೋಣ, ನರಗುಂದ, ಮುಂಡರಗಿ ತಾಲೂಕು ಎಪಿಎಂಸಿಗಳಲ್ಲಿ, ಅಡರಕಟ್ಟಿ (ಲಕ್ಷೆತ್ರ್ಮೕಶ್ವರ)ದ ಪಿಎಸಿಎಸ್, ಮುಂಡರಗಿಯ ಟಿಎಪಿಸಿಎಂಎಸ್ಗಳಲ್ಲಿ ಆರಂಭಿಸಿದೆ
Vijaya Karnataka 27 Sep 2019, 5:00 am