ಆ್ಯಪ್ನಗರ

ನ. 26ರಂದು ಕಾಗಿನೆಲೆಗೆ ಕನಕಮಾಲಾಧಾರಿಗಳು

ಗದಗ : ಹಾಲುಮತ ಸಮುದಾಯವನ್ನು ಸಂಘಟನೆಗಳ ಮೂಲಕ ಬಲಿಷ್ಠಗೊಳಿಸಲು ಕನಕ ಮಾಲೆ ಧರಿಸುವುದು ಅಗತ್ಯವಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

Vijaya Karnataka 29 Oct 2018, 5:00 am
ಗದಗ : ಹಾಲುಮತ ಸಮುದಾಯವನ್ನು ಸಂಘಟನೆಗಳ ಮೂಲಕ ಬಲಿಷ್ಠಗೊಳಿಸಲು ಕನಕ ಮಾಲೆ ಧರಿಸುವುದು ಅಗತ್ಯವಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
Vijaya Karnataka Web on nov 26 kaginelege kanakamaladharigalu
ನ. 26ರಂದು ಕಾಗಿನೆಲೆಗೆ ಕನಕಮಾಲಾಧಾರಿಗಳು


ಭಾನುವಾರ ನಗರದ ವಿದ್ಯಾನಿಧಿ ಪ್ರಕಾಶನ ಮಂದಿರದಲ್ಲಿ ನಡೆದ ಕನಕ ಮಾಲಾಧಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಾಲುಮತ ಸಮಾಜದಲ್ಲಿ ಅನೇಕ ದಾರ್ಶನಿಕರು ಅಪಾರ ಕೊಡುಗೆ ನೀಡಿದ್ದಾರೆ. ಅಂಥವರ ಇತಿಹಾಸ ತಿಳಿದುಕೊಳ್ಳಲು ಮತ್ತು ಹಾಲುಮತದ ಧಾರ್ಮಿಕ ಶಕ್ತಿ, ಸಂಸ್ಕೃತಿಯನ್ನು ಪ್ರಜ್ವಲಿಸುವಂತೆ ಮಾಡಲು ನಾಡಿನ ಮೂಲೆ ಮೂಲೆಗಳಿಂದ ಕನಕ ಮಾಲಾಧಾರಿಗಳು ನವಂಬರ್‌ 26 ರಂದು ಕಾಗಿನೆಲೆಗೆ ಆಗಮಿಸಲಿದ್ದಾರೆ. ಆದ್ದರಿಂದ ಜಿಲ್ಲಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಕನಕ ಮಾಲಾಧಾರಿಗಳಾಗಿ ಕಾಗಿನೆಲೆಯ ಶ್ರದ್ಧಾ ಕೇಂದ್ರದಲ್ಲಿ ಸೇರಬೇಕಾಗಿದೆ ಎಂದು ಹೇಳಿದರು.

ಸಂಘಟನಾ ಕಾರ್ಯದರ್ಶಿ ಪ್ರಹ್ಲಾದ ಹೊಸಳ್ಳಿ ಮಾತನಾಡಿ, ಸಮಾಜದ ಅಭಿವೃದ್ಧಿಗಳಲ್ಲಿ ಮಠಮಾನ್ಯಗಳ ಕಾರ್ಯ ಪ್ರಮುಖವಾಗಿದೆ. ಕಳೆದ ವರ್ಷ ಕಾಗಿನೆಲೆಯಲ್ಲಿ ನಡೆದ ಕನಕ ಮಾಲಾಧಾರಿಗಳ ಪ್ರಥಮ ಸಮಾಗಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಕನಕಪೀಠದ ಪೂಜ್ಯಗೆ ಗುರುವಂದನೆ ಸಲ್ಲಿಸಲಾಯಿತು. ಅವರ ಸಂಕಲ್ಪದಂತೆ ಈ ವರ್ಷ ಕೂಡ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕನಕ ಮಾಲಾಧಾರಿಗಳು ಜಿಲ್ಲೆಯಿಂದ ಕಾಗಿನೆಲೆಯಲ್ಲಿ ಸೇರುವ ಮೂಲಕ ಕನಕದಾಸರ ಆದರ್ಶ ತತ್ವಗಳನ್ನು ದೇಶಕ್ಕೆ ಮತ್ತೊಮ್ಮೆ ಪ್ರಸ್ತುತಪಡಿಸಬೇಕಿದೆ ಎಂದರು.

ಹಿರಿಯರಾದ ಆರ್‌. ಎಚ್‌. ಬೂದಿಹಾಳ, ಶರಣಪ್ಪ ದೊಣ್ಣೆಗುಡ್ಡ, ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಡಿ. ಎಲ್‌. ಗುರುಕಾರ, ಅಂದಪ್ಪ ಬಿಜ್ಜೂರ, ಶಿರಹಟ್ಟಿ ತಾಲೂಕು ಅಧ್ಯಕ್ಷ ಪ್ರಸಾದ ಆಡಿನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಗೌಡ ಪಾಟೀಲ, ಪ್ರದೇಶ ಕುರುಬರ ಸಂಘ ಯುವ ಘಟಕದ ಜಿಲ್ಲಾಧ್ಯಕ್ಷ ಹೇಮಂತ್‌ ಗಿಡ್ಡಹನುಮಣ್ಣವರ, ರೈತ ಹೋರಾಟಗಾರ ಮುತ್ತಣ್ಣ ಕುರಿ, ನಿವೃತ್ತ ಅಧಿಕಾರಿ ಆರ್‌. ಎಚ್‌. ಬೂದಿಹಾಳ, ನಿವೃತ್ತ ಪಿಎಸ್‌ಐ ಹಾಲಣ್ಣವರ, ರೋಣ ಪುರಸಭೆ ಸದಸ್ಯ ಬಸವರಾಜ ನೀಲಗಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರತಿ ವರ್ಷ ಹಾಲುಮತ ಸಮಾಜದ ಸದಸ್ಯರನ್ನು ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳ ನಂದಗಡ ಹಾಗೂ ಕಾಗಿನೆಲೆಗೆ ಉಚಿತವಾಗಿ ಕರೆದುಕೊಂಡು ಹೋಗುವ ಚಾಲಕ ಪರಶುರಾಮ ಗೊಂದಿ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ