ಆ್ಯಪ್ನಗರ

ಭೂ ಸುಧಾರಣೆ ಕಾಯಿದೆ ತಿದ್ದುಪಡಿಗೆ ವಿರೋಧ

ಗದಗ: ಕೇಂದ್ರ ಸರಕಾರ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ಕಾಯಿದೆ ಖಂಡಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 26 Sep 2020, 5:00 am
ಗದಗ: ಕೇಂದ್ರ ಸರಕಾರ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ಕಾಯಿದೆ ಖಂಡಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web 25RUDRAGOUD5_25
ಕೇಂದ್ರ ಸರಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.


ಕೇಂದ್ರ ಸರಕಾರ ತಿದ್ದುಪಡಿ ಮಾಡುತ್ತಿರುವ ಭೂ ಸುಧಾರಣಾ ಕಾಯಿದೆಯಿಂದ ಕೃಷಿ ಭೂಮಿಯನ್ನು ಯಾರಾದರೂ ಖರೀದಿ ಮಾಡಲು ಅಧಿಕಾರ ನೀಡಿರುವುದು ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಮೋಸ ಮಾಡಿದಂತಾಗುತ್ತದೆ. ಇದಲ್ಲದೇ ಈ ಕಾಯಿದೆ ತಿದ್ದುಪಡಿಗಳು ರೈತರ ಪರವಾಗಿ ಇರದೇ, ಕಾರ್ಪೋರೇಟ್‌ ಪರವಾಗಿ ಇರುತ್ತದೆ. ಎಪಿಎಂಸಿ ಕಾಯಿದೆ ರೈತರ ವಿರೋಧಿಯಾಗಿದ್ದು, ಇದನ್ನು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಹೇರಲು ಒತ್ತಾಯ ಮಾಡಲಾಗುತ್ತಿದೆ. ರಾಜ್ಯ ಸರಕಾರವು ಈ ಕಾಯಿದೆಯನ್ನು ರಾಜ್ಯದಲ್ಲಿಜಾರಿಗೆ ಮಾಡಬಾರದು. ಕೇಂದ್ರ ಸರಕಾರವು ತಿದ್ದುಪಡಿಗಳನ್ನು ಈ ಕೂಡಲೇ ಹಿಂಪಡೆದು ರೈತರಿಗೆ ಅನುಕೂಲವಾಗುವ ಶಾಸನಗಳನ್ನು ಜಾರಿಗೆ ತರಬೇಕು. ಈ ಕೂಡಲೇ ಈ ಎರಡು ತಿದ್ದುಪಡಿಗಳನ್ನು ಕೇಂದ್ರ ಸರಕಾರವು ಹಿಂಪಡೆಯಬೇಕು. ಇಲ್ಲವಾದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ, (ಪ್ರವೀಣ ಶೆಟ್ಟಿ ಬಣ) ಜಿಲ್ಲಾಘಟಕವು ಮುಂದಿನ ದಿನಮಾನಗಳಲ್ಲಿರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಮನವಿಯಲ್ಲಿತಿಳಿಸಲಾಗಿದೆ.

ದಾವಲಸಾಬ ಮುಳಗುಂದ, ವೆಂಕಟೇಶ ಬೇಲೂರ, ಶ್ರೀನಿವಾಸ ಭಂಡಾರಿ, ಇಲಿಯಾಸ ಮೀರಾನಾಯಕ, ಸಿದ್ದಪ್ಪ ಮುದ್ಲಾಪೂರ, ಜಿಲಾಜಿ ಖವಾಸ, ಬಸವರಾಜ ಬೇವೂರ, ಮಣಿಕಂಠ ಭಂಡಾರಿ, ಕಳಸಪ್ಪ ಮಿಟ್ಟಪ್ಪನವರ, ಸತೀಶಕುಮಾರ, ಸುಪ್ರೀತ್‌ ಆರ್‌.ಎಚ್‌., ಆದಿತ್ಯ ನಾಯಕ, ವಿನಾಯಕ ಸೊರಟೂರ, ಪುರುಶೊತ್ತಮ ಪಾಟೀಲ, ಸಚವಿನ್‌ ಬೂದಿಹಾಳ, ರಾಮು ಮಗಜಿ, ಮಂಜು ಎಸ್‌.ಕೆ., ವಿಷ್ಣುವರ್ಧನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ