ಆ್ಯಪ್ನಗರ

ಎಸ್‌ಸಿ ಪಟ್ಟಿಯಿಂದ ಕೈ ಬಿಡದಿರಲು ಆಗ್ರಹ

ಗಜೇಂದ್ರಗಡ: ಹಿಂದುಳಿದ ಬಡ ದಲಿತ ಸಮುದಾಯವಾದ ಲಂಬಾಣಿ, ಕೊರಮ, ಕೊರಚ, ಭೋವಿ ಜನಾಂವನ್ನು ಪಜಾ ಯಿಂದ ಕೈ ಬಿಡುವಂತೆ ಸುಪ್ರಿಂ ಕೋರ್ಟ್‌ ರಾಷ್ಟ್ರೀಯ ಎಸ್‌ಸಿ ಆಯೋಗಕ್ಕೆ ನೀಡಿದ ನಿರ್ದೇಶನ ಕೈಬಿಡಬೇಕೆಂದು ಲಂಬಾಣಿ ಜನಾಂಗದ ಮುಖಂಡರು ಆಗ್ರಹಿಸಿದರು.

Vijaya Karnataka 11 Jun 2020, 5:00 am
ಗಜೇಂದ್ರಗಡ: ಹಿಂದುಳಿದ ಬಡ ದಲಿತ ಸಮುದಾಯವಾದ ಲಂಬಾಣಿ, ಕೊರಮ, ಕೊರಚ, ಭೋವಿ ಜನಾಂವನ್ನು ಪಜಾ ಯಿಂದ ಕೈ ಬಿಡುವಂತೆ ಸುಪ್ರಿಂ ಕೋರ್ಟ್‌ ರಾಷ್ಟ್ರೀಯ ಎಸ್‌ಸಿ ಆಯೋಗಕ್ಕೆ ನೀಡಿದ ನಿರ್ದೇಶನ ಕೈಬಿಡಬೇಕೆಂದು ಲಂಬಾಣಿ ಜನಾಂಗದ ಮುಖಂಡರು ಆಗ್ರಹಿಸಿದರು.
Vijaya Karnataka Web orders not to drop hands from sc list
ಎಸ್‌ಸಿ ಪಟ್ಟಿಯಿಂದ ಕೈ ಬಿಡದಿರಲು ಆಗ್ರಹ


ಸೇವಾಲಾಲ ದೇವಸ್ಥಾನದಿಂದ ಮೆರವಣಿಗೆ ನಡೆಸಿ, ಬಳಿಕ ತಹಸೀಲ್ದಾರರ ಮೂಲಕ ಬುಧವಾರ ಸರಕಾರಕ್ಕೆ ಮನವಿ ಸಲ್ಲಿಸಿದರು. ಲಾಲಪ್ಪ ರಾಠೋಡ ಮಾತನಾಡಿ, ತುಳಿತಕ್ಕೆ ಒಳಗಾದ ಸಮಾಜದವರಿಗೆ ಇತರೆ ಮೂಲಗಳ ಆದಾಯವಿಲ್ಲ. ಸರಕಾರದಿಂದ ಈಗ ಪರಿಶಿಷ್ಟ ಜಾತಿಯಿಂದ ಸಹಾಯ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದು, ನಮ್ಮ ಜನಾಂಗದವರನ್ನು ಎಸ್‌ಸಿ ಪಟ್ಟಿಯಿಂದ ಕೈಬಿಟ್ಟರೆ ಬೀದಿಗೆ ಬರುವಂತಾಗುತ್ತದೆ ಎಂದರು.

ಸರಕಾರ ರಾಷ್ಟ್ರೀಯ ಆಯೋಗಕ್ಕೆ ಸೂಕ್ತ ಮಾಹಿತಿ ನೀಡದೆ ನಮ್ಮ ಜನಾಂಗಗಳಿಗೆ ಅನ್ಯಾಯ ಮಾಡಿದರೆ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿಎಚ್ಚರಿಸಲಾಗಿದೆ.

ಪ್ರಶಾಂತ ರಾಠೋಡ, ಈಶಣ್ಣ ರಾಠೋಡ, ಮಾರುತಿ ರಾಠೋಡ, ಕೆ.ಎಲ್‌. ಅಜ್ಮೀರ, ಎ.ಆರ್‌. ಸಂತೋಶ, ಮಹಾಂತೇಶ ಮಾಳೋತ್ತರ ಇತರರು ಪ್ರತಿಭಟನೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ