ಆ್ಯಪ್ನಗರ

ಮಲಪ್ರಭಾ ನದಿಗೆ ಒಳ ಹರಿವು ಹೆಚ್ಚಳ, ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್‌

ಭಾರಿ ಮಳೆಯ ಕಾರಣ ಗದಗ ಸಮೀಪದ ಮಲಪ್ರಭಾ ನದಿಗೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಹೊರ ಹರಿವು ಪ್ರಮಾಣ ಕೂಡ ಹೆಚ್ಚು ಮಾಡಲಾಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಬಂದ್‌ ಮಾಡಲಾಗಿದೆ.

Vijaya Karnataka Web 7 Sep 2019, 7:32 pm
ಗದಗ: ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ಕೊಣ್ಣೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಚಾರ ಬಂದ್‌ ಮಾಡಲಾಗಿದೆ.
Vijaya Karnataka Web ಮಲಪ್ರಭಾ ನದಿ
ಮಲಪ್ರಭಾ ನದಿ


ಸೇತುವೆ ಮುಳುಗಡೆಯಾಗಲು ಕೆಲವೇ ಅಂಗುಲ ಬಾಕಿಯಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಂಚಾರ ಬಂದ್ ಮಾಡಲು ಗದಗ ಜಿಲ್ಲಾಡಳಿತ ಸೂಚನೆ ನೀಡಿದೆ.

ಹೆದ್ದಾರಿ ಬಂದ್‌ನಿಂದಾಗಿ ಹುಬ್ಬಳ್ಳಿ- ಬಿಜಾಪುರ ಸಂಪರ್ಕ ಕಡಿತಗೊಂಡಿದೆ. ಕಳೆದ ತಿಂಗಳ ಪ್ರವಾಹಕ್ಕೆ‌ ಕೊಚ್ಚಿ ಹೋಗಿದ್ದ ಸೇತುವೆ ಬಳಿಯ ರಸ್ತೆ ಸಂಚಾರ ಬಂದ್ ಮಾಡಲು ಪೊಲೀಸರಿಗೆ ಗದಗ ಜಿಲ್ಲಾಧಿಕಾರಿ ಎಂ ಜಿ‌ ಹಿರೇಮಠ ಸೂಚನೆ ನೀಡಿದರು.

ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಜಲಾಶಯದಿಂದ ಹೊರ ಹರಿವನ್ನು ಹೆಚ್ಚಿಸಿರುವ ಹಿನ್ನಲೆಯಲ್ಲಿ ನದಿ ಪಾತ್ರದಲ್ಲಿ ಬರುವ ಗದಗ ಜಿಲ್ಲೆಯ ಗ್ರಾಮಗಳ ಜನ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ನರಗುಂದ ತಾಲೂಕಿನ ಲಕಮಾಪೂರ, ಕೊಣ್ಣೂರು, ವಾಸನ, ಬೂದಿಹಾಳ ಹಾಗೂ ರೋಣ ತಾಲೂಕಿನ ಕುರುವಿನಕೊಪ್ಪ ಗ್ರಾಮಗಳಲ್ಲಿನ ಜಾನುವಾರುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ