ಆ್ಯಪ್ನಗರ

ಅಂಚೆ ಕಚೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ

ಗದಗ : ಅವಳಿ ನಗರದ ಅಂಚೆ ಕಚೇರಿ ಅಧಿಕಾರಿಗಳು ಸ್ವಾತಂತ್ರ್ಯ ಉತ್ಸವ ಅಂಗವಾಗಿ ಕಚೇರಿಯ ಕಟ್ಟಡದಲ್ಲಿ ಧ್ವಜಾರೋಹಣ ಮಾಡದೆ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

Vijaya Karnataka 17 Aug 2019, 5:00 am
ಗದಗ : ಅವಳಿ ನಗರದ ಅಂಚೆ ಕಚೇರಿ ಅಧಿಕಾರಿಗಳು ಸ್ವಾತಂತ್ರ್ಯ ಉತ್ಸವ ಅಂಗವಾಗಿ ಕಚೇರಿಯ ಕಟ್ಟಡದಲ್ಲಿ ಧ್ವಜಾರೋಹಣ ಮಾಡದೆ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
Vijaya Karnataka Web outrage against post office officers
ಅಂಚೆ ಕಚೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ


ಸಾರ್ವಜನಿಕರು ಈ ಕುರಿತು ಅಂಚೆ ಕಚೇರಿ ಅಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದರೆ ನಮ್ಮ ಕಚೇರಿ ಬಾಡಿಗೆ ಕಟ್ಟಡದಲ್ಲಿ ಇದೆ. ಹೀಗಾಗಿ ನಾವು ಧ್ವಜ ಹಾರಿಸಿಲ್ಲ. ಕೇಂದ್ರ ಕಚೇರಿಯ ಆದೇಶ ಪ್ರಕಾರ ನಡೆಯುತ್ತವೆ. ಈ ಬಗ್ಗೆ ತಾವು ದೂರೂ ಸಲ್ಲಿಸಿದಲ್ಲಿ ನಾವು ಸ್ಪಷ್ಟ ದಾಖಲೆ ಕೋಡುವುದಾಗಿ ತಿಳಿಸಿದರು.

ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಅಧಿಕಾರಿಗಳ ಆಗಮನಕ್ಕೆ ಪಟ್ಟು ಹಿಡಿದು ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ ಡಿ.ಟಿ.ವಾಲ್ಮೀಕಿ ಅವರು ಪ್ರತಿಭಟನಾಕಾರೊಂದಿಗೆ ಚರ್ಚಿಸಿ ಅಂಚೆ ಅಧಿಕಾರಗಳಿಗೆ ಎಚ್ಚರಿಕೆ ನೀಡಿ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ರಾಷ್ಟ್ರ ದ್ವಜ ಗೌರವ ಸಂರಕ್ಷ ಣಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಹುಬ್ಬಳ್ಳಿ ,ಹನುಮಂತಪ್ಪ ಅಳವಂಡಿ, ಮಾಜಿನಗರ ಸಭಾ ಸದಸ್ಯ ರಾಘವೇಂದ್ರ ಯಳವತ್ತಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳದ ರಾಘವೇಂದ್ರ ಹಬೀಬ, ಮಹಾಂತೇಶ ಮಡಿವಾಳರ ಸ್ವರೂಪ ಹುಬ್ಬಳ್ಳಿ ಶಿವು ಪೂಜಾರ, ಯಲ್ಲಪ್ಪ ಬಜಂತ್ರಿ, ಪರಶುರಾಮ ಗಾರವಾಡ, ವೆಂಕಟೇಶ ಮಳೇಕರ ಗೋಪಾಲ ಮಳೇಕರ,ರವಿ ಮಡಿವಾಳ, ಶಂಕರ್‌ ಬದಿ, ರಾಮು ಬಾಲೆಹೊಸೂರ, ಗುರುಸಿದ್ದಪ್ಪ ಕೊಣ್ಣೂರ, ನರಸಿಂಹ ಕಾಮೂರ್ತಿ,ಗಂಗಾವತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ