ಆ್ಯಪ್ನಗರ

ಪಾಲಕರು ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬಲಿ

ಗಜೇಂದ್ರಗಡ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷ ಣ ಮಹತ್ವ ಪಡೆದಿದೆ. ವಿದ್ಯಾರ್ಥಿಗಳು ವಿದ್ಯೆ ಜತೆಗೆ ವಿನಯ, ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಗಜೇಂದ್ರಗಡ ವಿದ್ಯಾವರ್ಧಕ ಸಂಘ ಕಾರ‍್ಯದರ್ಶಿ ಎ.ಎಫ್‌. ಹಿರೇಮಠ ಹೇಳಿದರು.

Vijaya Karnataka 28 Dec 2018, 5:00 am
ಗಜೇಂದ್ರಗಡ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷ ಣ ಮಹತ್ವ ಪಡೆದಿದೆ. ವಿದ್ಯಾರ್ಥಿಗಳು ವಿದ್ಯೆ ಜತೆಗೆ ವಿನಯ, ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಗಜೇಂದ್ರಗಡ ವಿದ್ಯಾವರ್ಧಕ ಸಂಘ ಕಾರ‍್ಯದರ್ಶಿ ಎ.ಎಫ್‌. ಹಿರೇಮಠ ಹೇಳಿದರು.
Vijaya Karnataka Web parents can fill their hearts with self immorality
ಪಾಲಕರು ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬಲಿ


ಸ್ಥಳೀಯ ಎಸ್‌.ಎಂ. ಭೂಮರೆಡ್ಡಿ ಪ.ಪೂ. ಕಾಲೇಜನಲ್ಲಿ ಬುಧವಾರ ಪಾಲಕರ ಸಭೆಯಲ್ಲಿ ಮಾತನಾಡಿದರು. ಶಿಕ್ಷ ಣದಿಂದ ಸಮಾಜದಲ್ಲಿ ಉನ್ನತ ಹುದ್ದೆಯಂತಹ ಎಲ್ಲ ಸ್ಥಾನ, ಮಾನ ಪಡೆಯುವ ಶಕ್ತಿ ಇದೆ. ಮಕ್ಕಳ ಭವಿಷ್ಯಕ್ಕೆ ಶಿಕ್ಷ ಣ ಅಡಿಪಾಯವಾಗಿದೆ. ಅರಿವು, ಸೃಜನಶೀಲತೆ, ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಲು ಶಿಕ್ಷ ಣ ಪೂರಕವಾಗಿದೆ. ಜೀವನ ಪಾಠ ಕಲಿಯಲು ಓದು ಅವಶ್ಯ ಎಂದರು.

ಪ್ರಾಚಾರ್ಯ ವಿ.ಬಿ. ಮರದ ಮಾತನಾಡಿ, ಪಾಲಕರು ಮಕ್ಕಳನ್ನು ಸ್ನೇಹಿತರಂತೆ ಒಡನಾಟ ಹೊಂದುವ ಮೂಲಕ ಅವರಲ್ಲಿ ಆತ್ಮ ಸ್ಥೈರ್ಯ ತುಂಬಬೇಕು. ಶಿಕ್ಷ ಕರು ಹೇಳಿಕೊಟ್ಟ ಪಾಠಗಳನ್ನು ವಿದ್ಯಾರ್ಥಿಗಳು ಶ್ರದ್ಧೆಯಿಂದ ಮನನ ಮಾಡಿದಾಗ ಪರೀಕ್ಷೆಯಲ್ಲಿ ಯಶಸ್ಸು ಸುಲಭವಾಗಲಿದೆ. ಇದಕ್ಕಾಗಿ ಪೋಷಕರು ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕು ಎಂದರು.

ಪಾಲಕರಾದ ಶಾರದಾ ರಾಠೋಡ, ಎಸ್‌.ಎಂ. ಭಂಡಾರಿಮಠ, ಪ್ರಾ. ಜೆ.ಜಿ.ಕುದರಿ, ಉಪನ್ಯಾಸಕರಾದ ಅರವಿಂದ ವಡ್ಡರ, ಎಸ್‌.ಎಸ್‌.ವಾಲಿಕಾರ, ಜಿ.ಬಿ.ಗುಡಿಮನಿ, ಎಲ್‌.ಕೆ. ಹಿರೇಮಠ ಜ್ಯೋತಿ ಗದಗ, ಎಂ.ಎಲ್‌. ಕ್ವಾಟಿ, ವಿ.ಎಂ. ಜೋಚನಿ, ಎಸ್‌.ಕೆ.ಕಟ್ಟಿಮನಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ