ಆ್ಯಪ್ನಗರ

ಮಕ್ಕಳ ಆರೋಗ್ಯದತ್ತ ಗಮನ ನೀಡಿ

ನರಗುಂದ: ವಿಶೇಷಚೇತನ ಎನ್ನುವುದು ಪೂರ್ವ ಜನ್ಮದ ಶಾಪವಲ್ಲನಮ್ಮ ನಿಷ್ಕಾಳಜಿಯಿಂದ ಹಲವು ಮಕ್ಕಳು ಈ ರೀತಿಯಾಗಲು ಕಾರಣ ಎಂದು ಎಪಿಡಿ ಸಂಸ್ಥೆ ತರಬೇತುದಾರ ಹರೀಶ್‌ ಶೆಟ್ಟಿ ಹೇಳಿದರು.

Vijaya Karnataka 13 Oct 2019, 5:00 am
ನರಗುಂದ: ವಿಶೇಷಚೇತನ ಎನ್ನುವುದು ಪೂರ್ವ ಜನ್ಮದ ಶಾಪವಲ್ಲನಮ್ಮ ನಿಷ್ಕಾಳಜಿಯಿಂದ ಹಲವು ಮಕ್ಕಳು ಈ ರೀತಿಯಾಗಲು ಕಾರಣ ಎಂದು ಎಪಿಡಿ ಸಂಸ್ಥೆ ತರಬೇತುದಾರ ಹರೀಶ್‌ ಶೆಟ್ಟಿ ಹೇಳಿದರು.
Vijaya Karnataka Web pay attention to child health
ಮಕ್ಕಳ ಆರೋಗ್ಯದತ್ತ ಗಮನ ನೀಡಿ


ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿಚೇತನ ಬಿಎಸ್‌ಡಬ್ಲೂತ್ರ್ಯ ಕಾಲೇಜು ಹಮ್ಮಿಕೊಂಡ ವಿಶೇಷ ಚೇತನರಿಗೆ ಸರಕಾರಿ ಮತ್ತು ಸರಕಾರೇತರ ಸಂಸ್ಥೆ ಹಾಗೂ ಇಲಾಖೆಗಳ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ಪಾಲಕರು ಮೂಢನಂಬಿಕೆ ಬದಿಗಿಟ್ಟು ಮಕ್ಕಳಿಗೆ ಆರೋಗ್ಯದಲ್ಲಿವ್ಯತ್ಯಾಸ ಕಂಡು ಬಂದರೆ ದೇವರ ಮೊರೆ ಹೋಗುವ ಬದಲು ಕಣ್ಣಿಗೆ ಕಾಣುವ ದೇವರಾದ ವೈದ್ಯರ ಬಳಿಹೋಗುವುದರಿಂದ ಇಂತಹ ಅನಾಹುತ ತಪ್ಪಿಸಬಹುದು ಎಂದರು.

ಚೇತನ ಕಾಲೇಜು ಸಂಸ್ಥಾಪಕ ಡಾ. ಕಿರಣ್‌ಕುಮಾರ್‌ ರಾಯರ್‌ ಮಾತನಾಡಿ ವಿಶೇಷ ಚೇತನರಿಗೆ ಎಪಿಡಿ ಸಂಸ್ಥೆಯವರು ತಾಪಂ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿವಿವಿಧ ರೀತಿಯ ತರಬೇತಿ ಕೊಡುವುದರ ಜತೆಗೆ ತರಬೇತುದಾರರಿಗೆ ಉದ್ಯೋಗ ಕಲ್ಪಿಸಿಕೊಡುವ ಕಾರ್ಯ ನಿರ್ವಹಿಸುತ್ತಿದೆ. ಇದರ ಉಪಯೋಗವನ್ನು ಪ್ರತಿಯೊಬ್ಬ ವಿಶೇಷ ಚೇತನರು ಪಡೆದು ಕೊಳ್ಳಬೇಕು ಎಂದರು.

ಜಿಪಂ ಸದಸ್ಯೆ ರೇಣುಕಾ ಅವರಾದಿ ಮಾತನಾಡಿದರು, ಗ್ರಾಪಂ ಸದಸ್ಯೆ ನಾಗರತ್ನ ಹಿರೇಗೌಡರ್‌, ಶಂಕ್ರವ್ವ ದ್ಯಾವನಗೌಡ್ರ, ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಣವ್ವ ಬಿಲ್ಲನವರ, ರೇಣುಕಾ ಮಾದರ, ಸಾವಿತ್ರಿ ತಳವಾರ,ಪ್ರಾ. ಗುರುನಾಥ ಕೆಂಗಾರಕರ್‌, ಅನಸೂಯಾ ಆನೆಗುಂದಿ, ಶಿರಡ್ಡಿ ಪೆಟ್ಲೂರ, ಶೋಭಾ ವಡ್ಡರ, ಮುತ್ತಪ್ಪ ಹಳಕಟ್ಟಿ, ರೂಪಾ ನರಗುಣ್ಣವರ, ಶಿವುಕುಮಾರ ದೊಡ್ಡಮನಿ, ಯಚ್ಚರಪ್ಪ ಗುಡಿಸಲಮನಿ, ಲಕ್ಷಿತ್ರ್ಮೕ ಮುಪ್ಪಯ್ಯನವರ, ಶ್ರೀದೇವಿ ಚೌಡರ್‌, ಮಂಜುನಾಥ ತಳವಾರ, ಚಂದ್ರಿಕಾ ಮಾದರ್‌, ಪದ್ಮಾವತಿ ಗಿರಡ್ಡಿ, , ಭಾಗ್ಯಾಶ್ರೀ ಗಾಣಿಗೇರ, ಸೋಮರಡ್ಡಿ ರಡ್ಡೇರ , ಮಂಜುನಾಥ ಶಿವಳ್ಳಿ, ಸಲ್ಮಾನಖಾನ್‌ ಹುಲ್ಲೂರ, ಮೈಲಾರಪ್ಪ ಮಾದರ್‌ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾಶ್ರೀ ಹೊಸಮನಿ ನಿರೂಪಿಸಿದರು, ದ್ರಾಕ್ಷಾಯನಿ ಜಾಧವ ಸ್ವಾಗತಿಸಿದರು, ಕಿರಣ್‌ ಮಳಲಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ