ಮಾಳಿಂಗರಾಯ ಪೂಜಾರ
ಲಕ್ಷ್ಮೇಶ್ವರ : ಮುಂಗಾರು ಮಳೆಗೆ ಅಲ್ಪ-ಸ್ವಲ್ಪ ಬಂದ ಶೇಂಗಾ ಬೆಳೆ ಮರಾಟ ಮಾಡಲು ರೈತರಿಗೆ ಸರಕಾರ ಬೆಲೆ ಖರೀದಿ ಕೇಂದ್ರ ತೆರೆಯಲಾಗಿದ್ದು, ಆದರೆ ಬೆಂಬಲ ಬೆಲೆಯಲ್ಲಿರೈತರು ಶೇಂಗಾ ಮಾರಾಟ ಮಾಡಿದ ಬಂದ ಹಣವನ್ನು ಬೆಳೆ ಸಾಲಗಳಿಗೆ ಜಮಾ ಮಾಡುತ್ತಾರೆಂದು ರೈತರು ಖರೀದಿ ಕೇಂದ್ರದಲ್ಲಿಮಾರಾಟ ಮಾಡದೇ ಮುಕ್ತ ಮಾರುಕಟ್ಟೆಗೆ ಹೋಗುತ್ತಿದ್ದಾರೆ.
ರೈತರ ಶೇಂಗಾ ಮಾರಾಟ ಮಾಡಲು ತಾಲೂಕಿನ ಶಿಗ್ಲಿ, ಮಾಗಡಿ, ರಣತೂರದಲ್ಲಿಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲಾಗಿದೆ. ಇಗಾಗಲೇ ಸುಮಾರು 2400 ರೈತರು ಮಾರಾಟ ಮಾಡಲು ನೋಂದಣಿ ಮಾಡಿಸಿದ್ದಾರೆ. ಇನ್ನೂ ಕೆಲವು ರೈತರು ಸರಕಾರದಿಂದ ಬಂದ ಬೆಳೆವಿಮೆ ಹಾಗೂ ಬೆಳೆ ಹಾನಿಗಳನ್ನು ರೈತರ ಸಾಲ ಖಾತೆ ಜಮೆ ಮಾಡಿಕೊಂಡು ಹಾಗೂ ಖಾತೆ ತಡೆ ಹಿಡಿದಿರುವುನ್ನು ಕಂಡು ಶೇಂಗಾ ಮಾರಾಟ ಮಾಡಿ ಬಂದ ಹಣವನ್ನು ಸಾಲ ಖಾತೆಗೆ ಜಮೆ ಮಾಡಿಕೊಳ್ಳುತ್ತಾರೆ ಎಂಬ ಭೀತಿಯಿಂದ ಬೆಂಬಲ ಖರೀದಿ ಕೇಂದ್ರದಲ್ಲಿಶೇಂಗಾ ಮಾರಾಟ ಮಾಡದೇ ಮುಕ್ತ ಮಾರುಕಟ್ಟೆಯಲ್ಲಿಮಾರಾಟ ಮಾಡುವುದು ಕಂಡು ಬರುತ್ತಿದೆ.
ಖರೀದಿಗೆ ಮಾನದಂಡ :
ಪ್ಯಾರಾ ಮೀಟರ್ ಅನ್ವಯ ಹಬ್ಬು ಶೇಂಗಾ ಹಾಗೂ ಗೆಜ್ಜೆ ಶೇಂಗಾ ಕಸ-ಕಡ್ಡಿ-ಮಣ್ಣು ಗರಿಷ್ಟ ಶೇ.2 ಮೀರಬಾರದು. ಒಡೆದ ಕಾಯಿ ಶೇ.2 ರಷ್ಟು, ಎಳೆಯ ಮತ್ತು ನೀರುಗಟ್ಟಿದ ಕಾಯಿ ಶೇ.4 ರಷ್ಟು, ಇತರೆ ತಳಿಯ ತೂಕ ಗರಿಷ್ಟ ಶೇ.4 ರಷ್ಟು, ಶೇಕಡಾ ಕಾಳಿನ ತೂಕ ಹಬ್ಬು ಶೇಂಗಾ ಗರಿಷ್ಟ ಶೇ.65 ಹಾಗೂ ಗೆಜ್ಜೆ ಶೇಂಗಾ ಗರಿಷ್ಟ 70 ರಷ್ಟು, ತೇವಾಂಶ ಗರಿಷ್ಟ ಶೇ.8 ರಷ್ಟು, ಮೊಳಕೆ ಕಾಳು ಮತ್ತು ಕೆಟ್ಟ ಕಾಳು ಗರಿಷ್ಟ ಶೇ. 2 ರಷ್ಟು, ಮೀರಬಾರದು. ಅದಲ್ಲದೇ ಕೃಷಿ ಇಲಾಖೆಯಿಂದ ಫ್ರುಟ್ಸ್ ಆಯ್ಡಿ ನಂಬರ್ ಸಮೇತ ಶೇಂಗಾ ಬೆಳೆ ದೃಢಿಕರಣ ಪ್ರತಿ, ಆಧಾರ ಕಾರ್ಡ್, ಪಹಣಿ ಅಥವಾ ಉತಾರ ಹಾಗೂ ಆಧಾರ ಕಾರ್ಡ ಬ್ಯಾಂಕ ಖಾತೆ ಜೊಡಣೆಯಾಗಿರುವ ಬ್ಯಾಂಕ ಪಾಸ್ಬುಕ್ ಪ್ರತಿ ತರಬೇಕು ಅದಲ್ಲದೇ ಸಂಘದ ಷರತ್ತುಗಳು ಅನ್ವಯಿಸುತ್ತದೆ. ಇವುಗಳ ಯಾವುದೇ ಒಂದು ಇರದಿದ್ದರೇ ಶೇಂಗಾ ಖರೀದಿ ಮಾಡಿಕೊಳ್ಳವುದಿಲ್ಲಇದರಿಂದ ರೈತರು ಮುಕ್ತ ಮಾರುಕಟ್ಟೆಯಲ್ಲಿಮಾರಾಟ ಮಾಡುತ್ತಿದ್ದಾರೆ.
ಸತತ ನಾಲೈದು ವರ್ಷಗಳ ಬರಗಾಲದಿಂದ ಹಾಗೂ ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಬೆಳೆ ಹಾಳಾಗಿ ಹೋಗಿದ್ದು ಅಲ್ಪ-ಸ್ವಲ್ಪ ಬಂದ ಬೆಳೆಗೂ ಬೆಲೆ ಇಲ್ಲಸರಕಾರದ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿಮಾರಾಟ ಮಾಡಬೇಕೆಂದರೆ ಅನೇಕ ಷರತ್ತುಗಳು ಹಾಗೂ ಮಾರಾಟ ಮಾಡಿ ಬಂದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುವುದರಿಂದ ಎಲ್ಲಿಬೆಳೆ ಸಾಲದ ಖಾತೆಗೆ ಜಮೆ ಮಾಡುತ್ತಾರೋ ಎಂಬ ಭೀತಿ ಎದುರಾಗಿದೆ. ಮಳೆ ರೈತರ ಜೀವನೊಡನೆ ಚೆಲ್ಲಾಟವಾಡುತ್ತಿರುವುದರಿಂದ ಬೆಳೆ ಕೈಕೊಡುತ್ತಿರುವುದರಿಂದ ಮಾಡಿದ ಸಾಲ ತಿರಿಸಲು ಆಗದೇ ಸಾಲ ದುಪ್ಪಟ್ಟು ಆಗುತ್ತ ಹೋಗುತ್ತಿದ್ದು ಸಂಸಾರದ ದೋಣಿ ಹೇಗೆ ಸಾಗಿಸಬೇಕು ಎಂದು ರೈತರು ತೆರೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಬೆಳೆ ಧೃಡೀಕರಣ ಅಗತ್ಯ :
ಖರೀದಿ ಕೇಂದ್ರದಲ್ಲಿಶೇಂಗಾ ಮಾರಾಟ ಮಾಡಬೇಕಾದರೇ ಜಮೀನಿನ ಪಹಣಿ ಪತ್ರಿಕೆಯಲ್ಲಿಶೇಂಗಾ ಬೆಳೆ ಇರಬೇಕು ಇಲ್ಲವಾದರೇ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಾಗೂ ನಾಡಕಚೇರಿಯಲ್ಲಿಬೆಳೆ ಧೃಡಿಕರಣ ಮಾಡಿಕೊಂಡು ಬರಬೇಕು. ಅದಲ್ಲದೇ ಪ್ರತಿ ರೈತರಿಗೆ 14 ಕ್ವೀಂಟಲ್ ಮಾತ್ರ ಶೇಂಗಾ ಖರೀದಿ ಮಾಡಲಾಗುತ್ತಿದ್ದು, ಅದಲ್ಲದೇ ಖರೀದಿ ಕೇಂದ್ರಗಳಲ್ಲಿಅನೇಕ ನಿಯಾಮವಳಿ ಹಾಕಲಾಗಿದೆ. ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿಶೇಂಗಾ ಖರೀದಿ ಮತ್ತು ನಿಗದಿ ಪಡಿಸಿದ ಗುಣಮಟ್ಟಗಳು ಖರೀದಿ ದರ 5090 ರೂ.ನೀಡಲಾಗುತ್ತದೆ.
ಲಕ್ಷ್ಮೇಶ್ವರ : ಮುಂಗಾರು ಮಳೆಗೆ ಅಲ್ಪ-ಸ್ವಲ್ಪ ಬಂದ ಶೇಂಗಾ ಬೆಳೆ ಮರಾಟ ಮಾಡಲು ರೈತರಿಗೆ ಸರಕಾರ ಬೆಲೆ ಖರೀದಿ ಕೇಂದ್ರ ತೆರೆಯಲಾಗಿದ್ದು, ಆದರೆ ಬೆಂಬಲ ಬೆಲೆಯಲ್ಲಿರೈತರು ಶೇಂಗಾ ಮಾರಾಟ ಮಾಡಿದ ಬಂದ ಹಣವನ್ನು ಬೆಳೆ ಸಾಲಗಳಿಗೆ ಜಮಾ ಮಾಡುತ್ತಾರೆಂದು ರೈತರು ಖರೀದಿ ಕೇಂದ್ರದಲ್ಲಿಮಾರಾಟ ಮಾಡದೇ ಮುಕ್ತ ಮಾರುಕಟ್ಟೆಗೆ ಹೋಗುತ್ತಿದ್ದಾರೆ.
ರೈತರ ಶೇಂಗಾ ಮಾರಾಟ ಮಾಡಲು ತಾಲೂಕಿನ ಶಿಗ್ಲಿ, ಮಾಗಡಿ, ರಣತೂರದಲ್ಲಿಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲಾಗಿದೆ. ಇಗಾಗಲೇ ಸುಮಾರು 2400 ರೈತರು ಮಾರಾಟ ಮಾಡಲು ನೋಂದಣಿ ಮಾಡಿಸಿದ್ದಾರೆ. ಇನ್ನೂ ಕೆಲವು ರೈತರು ಸರಕಾರದಿಂದ ಬಂದ ಬೆಳೆವಿಮೆ ಹಾಗೂ ಬೆಳೆ ಹಾನಿಗಳನ್ನು ರೈತರ ಸಾಲ ಖಾತೆ ಜಮೆ ಮಾಡಿಕೊಂಡು ಹಾಗೂ ಖಾತೆ ತಡೆ ಹಿಡಿದಿರುವುನ್ನು ಕಂಡು ಶೇಂಗಾ ಮಾರಾಟ ಮಾಡಿ ಬಂದ ಹಣವನ್ನು ಸಾಲ ಖಾತೆಗೆ ಜಮೆ ಮಾಡಿಕೊಳ್ಳುತ್ತಾರೆ ಎಂಬ ಭೀತಿಯಿಂದ ಬೆಂಬಲ ಖರೀದಿ ಕೇಂದ್ರದಲ್ಲಿಶೇಂಗಾ ಮಾರಾಟ ಮಾಡದೇ ಮುಕ್ತ ಮಾರುಕಟ್ಟೆಯಲ್ಲಿಮಾರಾಟ ಮಾಡುವುದು ಕಂಡು ಬರುತ್ತಿದೆ.
ಖರೀದಿಗೆ ಮಾನದಂಡ :
ಪ್ಯಾರಾ ಮೀಟರ್ ಅನ್ವಯ ಹಬ್ಬು ಶೇಂಗಾ ಹಾಗೂ ಗೆಜ್ಜೆ ಶೇಂಗಾ ಕಸ-ಕಡ್ಡಿ-ಮಣ್ಣು ಗರಿಷ್ಟ ಶೇ.2 ಮೀರಬಾರದು. ಒಡೆದ ಕಾಯಿ ಶೇ.2 ರಷ್ಟು, ಎಳೆಯ ಮತ್ತು ನೀರುಗಟ್ಟಿದ ಕಾಯಿ ಶೇ.4 ರಷ್ಟು, ಇತರೆ ತಳಿಯ ತೂಕ ಗರಿಷ್ಟ ಶೇ.4 ರಷ್ಟು, ಶೇಕಡಾ ಕಾಳಿನ ತೂಕ ಹಬ್ಬು ಶೇಂಗಾ ಗರಿಷ್ಟ ಶೇ.65 ಹಾಗೂ ಗೆಜ್ಜೆ ಶೇಂಗಾ ಗರಿಷ್ಟ 70 ರಷ್ಟು, ತೇವಾಂಶ ಗರಿಷ್ಟ ಶೇ.8 ರಷ್ಟು, ಮೊಳಕೆ ಕಾಳು ಮತ್ತು ಕೆಟ್ಟ ಕಾಳು ಗರಿಷ್ಟ ಶೇ. 2 ರಷ್ಟು, ಮೀರಬಾರದು. ಅದಲ್ಲದೇ ಕೃಷಿ ಇಲಾಖೆಯಿಂದ ಫ್ರುಟ್ಸ್ ಆಯ್ಡಿ ನಂಬರ್ ಸಮೇತ ಶೇಂಗಾ ಬೆಳೆ ದೃಢಿಕರಣ ಪ್ರತಿ, ಆಧಾರ ಕಾರ್ಡ್, ಪಹಣಿ ಅಥವಾ ಉತಾರ ಹಾಗೂ ಆಧಾರ ಕಾರ್ಡ ಬ್ಯಾಂಕ ಖಾತೆ ಜೊಡಣೆಯಾಗಿರುವ ಬ್ಯಾಂಕ ಪಾಸ್ಬುಕ್ ಪ್ರತಿ ತರಬೇಕು ಅದಲ್ಲದೇ ಸಂಘದ ಷರತ್ತುಗಳು ಅನ್ವಯಿಸುತ್ತದೆ. ಇವುಗಳ ಯಾವುದೇ ಒಂದು ಇರದಿದ್ದರೇ ಶೇಂಗಾ ಖರೀದಿ ಮಾಡಿಕೊಳ್ಳವುದಿಲ್ಲಇದರಿಂದ ರೈತರು ಮುಕ್ತ ಮಾರುಕಟ್ಟೆಯಲ್ಲಿಮಾರಾಟ ಮಾಡುತ್ತಿದ್ದಾರೆ.
ಸತತ ನಾಲೈದು ವರ್ಷಗಳ ಬರಗಾಲದಿಂದ ಹಾಗೂ ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಬೆಳೆ ಹಾಳಾಗಿ ಹೋಗಿದ್ದು ಅಲ್ಪ-ಸ್ವಲ್ಪ ಬಂದ ಬೆಳೆಗೂ ಬೆಲೆ ಇಲ್ಲಸರಕಾರದ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿಮಾರಾಟ ಮಾಡಬೇಕೆಂದರೆ ಅನೇಕ ಷರತ್ತುಗಳು ಹಾಗೂ ಮಾರಾಟ ಮಾಡಿ ಬಂದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುವುದರಿಂದ ಎಲ್ಲಿಬೆಳೆ ಸಾಲದ ಖಾತೆಗೆ ಜಮೆ ಮಾಡುತ್ತಾರೋ ಎಂಬ ಭೀತಿ ಎದುರಾಗಿದೆ. ಮಳೆ ರೈತರ ಜೀವನೊಡನೆ ಚೆಲ್ಲಾಟವಾಡುತ್ತಿರುವುದರಿಂದ ಬೆಳೆ ಕೈಕೊಡುತ್ತಿರುವುದರಿಂದ ಮಾಡಿದ ಸಾಲ ತಿರಿಸಲು ಆಗದೇ ಸಾಲ ದುಪ್ಪಟ್ಟು ಆಗುತ್ತ ಹೋಗುತ್ತಿದ್ದು ಸಂಸಾರದ ದೋಣಿ ಹೇಗೆ ಸಾಗಿಸಬೇಕು ಎಂದು ರೈತರು ತೆರೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಬೆಳೆ ಧೃಡೀಕರಣ ಅಗತ್ಯ :
ಖರೀದಿ ಕೇಂದ್ರದಲ್ಲಿಶೇಂಗಾ ಮಾರಾಟ ಮಾಡಬೇಕಾದರೇ ಜಮೀನಿನ ಪಹಣಿ ಪತ್ರಿಕೆಯಲ್ಲಿಶೇಂಗಾ ಬೆಳೆ ಇರಬೇಕು ಇಲ್ಲವಾದರೇ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಾಗೂ ನಾಡಕಚೇರಿಯಲ್ಲಿಬೆಳೆ ಧೃಡಿಕರಣ ಮಾಡಿಕೊಂಡು ಬರಬೇಕು. ಅದಲ್ಲದೇ ಪ್ರತಿ ರೈತರಿಗೆ 14 ಕ್ವೀಂಟಲ್ ಮಾತ್ರ ಶೇಂಗಾ ಖರೀದಿ ಮಾಡಲಾಗುತ್ತಿದ್ದು, ಅದಲ್ಲದೇ ಖರೀದಿ ಕೇಂದ್ರಗಳಲ್ಲಿಅನೇಕ ನಿಯಾಮವಳಿ ಹಾಕಲಾಗಿದೆ. ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿಶೇಂಗಾ ಖರೀದಿ ಮತ್ತು ನಿಗದಿ ಪಡಿಸಿದ ಗುಣಮಟ್ಟಗಳು ಖರೀದಿ ದರ 5090 ರೂ.ನೀಡಲಾಗುತ್ತದೆ.