ಆ್ಯಪ್ನಗರ

ರಸ್ತೆಯಲ್ಲಿ ಮಲಗಿದ ರೈತರು

ಗದಗ: ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯದ ಆದೇಶ ಹಿಂಪಡೆಯುವುದು ಸೇರಿ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿಎರಡೂ ನೂರಕ್ಕೂ ಹೆಚ್ಚು ರೈತರು ಜಿಲ್ಲಾಡಳಿತ ಭವನದ ಮುಂದೆ ಬೃಹತ್‌ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Vijaya Karnataka 14 Sep 2019, 5:00 am
ಗದಗ: ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯದ ಆದೇಶ ಹಿಂಪಡೆಯುವುದು ಸೇರಿ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿಎರಡೂ ನೂರಕ್ಕೂ ಹೆಚ್ಚು ರೈತರು ಜಿಲ್ಲಾಡಳಿತ ಭವನದ ಮುಂದೆ ಬೃಹತ್‌ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
Vijaya Karnataka Web peasants lying on the road
ರಸ್ತೆಯಲ್ಲಿ ಮಲಗಿದ ರೈತರು


ರಾಜ್ಯ ಸರಕಾರ ಘೋಷಿಸಿರುವ ಕಪ್ಪತಗುಡ್ಡ ವನ್ಯಜೀವಿಧಾಮವನ್ನು ಕೂಡಲೇ ಹಿಂಪಡೆಯಬೇಕು. ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿನ ಬರಡು ಭೂಮಿಯನ್ನು ಹಸನಮಾಡಿರುವ ರೈತರಿಗೆ ಉಳಿಮೆ ಮಾಡಲು ಅವಕಾಶ ನೀಡಬೇಕು. ಈ ಭೂಮಿಯೇ ಈ ಭಾಗದ ರೈತರ ಜೀವನಾಧಾರವಾಗಿದೆ. ಕಾಡಿನೊಂದಿಗೆ ರೈತರು ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂದು ಮನವಿಯಲ್ಲಿತಿಳಿಸಿದ್ದಾರೆ.

ಬೃಹತ್‌ ಪ್ರತಿಭಟನೆ:
ಇದಕ್ಕೂ ಮೊದಲು ಜಿಲ್ಲೆಯ ಕಪ್ಪತಗುಡ್ಡ ವ್ಯಾಪ್ತಿಯ 30ಕ್ಕೂ ಹೆಚ್ಚು ಗ್ರಾಮದ ರೈತರು ನಗರದ ಚನ್ನಮ್ಮ ವೃತ್ತದಲ್ಲಿಜಮಾಗೊಂಡಿದ್ದರು. ರೈತ ಮಹಿಳೆಯರು, ಜಾನಪದ ಕಲಾತಂಡಗಳೊಂದಿಗೆ ಚನ್ನಮ್ಮ ವೃತ್ತದಿಂದ ಆರಂಭವಾಗಿ ಮುಳಗುಂದ ನಾಕಾದಲ್ಲಿಪ್ರತಿಭಟನೆಕಾರರು ರಸ್ತೆ ತಡೆ ಮಾಡಿ ರಸ್ತೆಯಲ್ಲಿಮಲಗುವ ಮೂಲಕ ಸರಕಾರದ ಕ್ರಮ ಖಂಡಿಸಿದರು. ನಂತರ ಮುಳಗುಂದ ನಾಕಾದ ಮೂಲಕ ನೂರಾರು ರೈತರು ಜಿಲ್ಲಾಡಳಿತ ಭವನದ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಿದರು.

ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ಸಾವಿರಾರು ರೈತರು ತಲತಲಾಂತರಿಂದ ಕಪ್ಪತಗುಡ್ಡ ವ್ಯಾಪ್ತಿಯಲ್ಲಿನ ಬರಡು ಭೂಮಿಯನ್ನು ಹಸನು ಮಾಡಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತ ಬಂದಿದ್ದಾರೆ. 33 ಸಾವಿರ ಹೆಕ್ಟೇರ್‌ ವಿಸ್ತಾರ ಹೊಂದಿರುವ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ30ಕ್ಕೂ ಹೆಚ್ಚು ಹಳ್ಳಿಗಳಿವೆ. ಅರಣ್ಯ ಇಲಾಖೆ ಸರ್ವೇಯಂತೆ 2,250 ಎಕರೆ ಭೂಮಿಯಲ್ಲಿ1,187 ರೈತರು ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಪ್ಪತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಘೋಷಿಸುವುದರಿಂದ ಈ ಭಾಗದ ರೈತರು ನಿರ್ಗತಿಕರಾಗಲಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಪ್ಪತಗುಡ್ಡ ವ್ಯಾಪ್ತಿಯಲ್ಲಿತಲತಲಾಂತರಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತ ಬಂದಿರುವ ರೈತರು ಹಕ್ಕುಪತ್ರಗಳಿಲ್ಲದೇ, ಅತಂತ್ರರಾಗಿದ್ದಾರೆ. ಯಾವಾಗ ಒಕ್ಕಲೆಬ್ಬಿಸುತ್ತಾರೆ ಎಂಬ ಭೀತಿಯಲ್ಲಿಜೀವನ ಕಳೆಯುತ್ತಿದ್ದಾರೆ. ಆದ್ದರಿಂದ ರಾಜ್ಯ ಸರಕಾರ, ಜಿಲ್ಲಾಡಳಿತ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಮತಿಶ್ರೀ ನವಲಿಹಿರೇಮಠ, ಉಪಾಧ್ಯಕ್ಷೆ ಲೀಲಾವತಿ ಚಿತ್ರಗಾರ, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ, ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ, ಬಸವಣ್ಣೆಯ್ಯ ಹಿರೇಮಠ, ಮಹೇಶ ದಾಸರ, ರಾಮಣ್ಣ ಕಮ್ಮಾರ, ಮಲ್ಲಮ್ಮ ಹೆಬಸೂರ, ಭದ್ರೇಶ ಕುಸಲಾಪೂರ, ಮಲ್ಲೇಶ ನಡುವಿನಮನಿ, ಯಲ್ಲಪ್ಪ ದೊಡ್ಡಮನಿ, ಜಿಲ್ಲೆಯ ನಾನಾ ಭಾಗದ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.

ಒಕ್ಕಲೆಬ್ಬಿಸುವ ಹುನ್ನಾರ, ಆರೋಪ :
ಕಪ್ಪತಗುಡ್ಡ ಕಾಯ್ದಿಟ್ಟ ಅರಣ್ಯಪ್ರದೇಶವನ್ನು ಕಳೆದ ಸಮ್ಮಿಶ್ರ ಸರಕಾರ ಏಕಾಏಕಿ ವನ್ಯಜೀವಿಧಾಮಯನ್ನಾಗಿ ಘೋಷಿಸಿರುವುದರಿಂದ ಬಗರಹುಕುಂ ಸಾಗುವಳಿದಾರರಿಗೆ ಬರಸಿಡಿಲು ಬಡಿದಂತಾಗಿದೆ. 30ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಕುಟುಂಬಗಳ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ರೈತ ಪರ ಕಾಳಜಿ ಹೊಂದಿರುವ ಸಿಎಂ ಯಡಿಯೂರಪ್ಪ ಅವರು ಕಪ್ಪತಗುಡ್ಡ ವನ್ಯಜೀವಿಧಾಮ ಘೋಷಣೆ ಹಿಂಪಡೆದು, ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ರೈತರು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ