ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ನೆರವಾದ ಪೇಜಾವರ ಶ್ರೀ

ಗದಗ: ಮಾನವೀಯತೆಯ ಸಾಕಾರ ಮೂರ್ತಿಯಾಗಿದ್ದ ಪೇಜಾವರ ಶ್ರೀಗಳು, 2009ರಲ್ಲಿನೆರೆ ಬಂದ ಸಂದರ್ಭದಲ್ಲಿನಿರಾಶ್ರಿತರಿಗೆ ಪರಿಹಾರ ಸಾಮಗ್ರಿ ನೀಡಿ ಸಹಾಯಹಸ್ತ ಚಾಚಿದ್ದರು.

Vijaya Karnataka 30 Dec 2019, 5:00 am
ಗದಗ: ಮಾನವೀಯತೆಯ ಸಾಕಾರ ಮೂರ್ತಿಯಾಗಿದ್ದ ಪೇಜಾವರ ಶ್ರೀಗಳು, 2009ರಲ್ಲಿನೆರೆ ಬಂದ ಸಂದರ್ಭದಲ್ಲಿನಿರಾಶ್ರಿತರಿಗೆ ಪರಿಹಾರ ಸಾಮಗ್ರಿ ನೀಡಿ ಸಹಾಯಹಸ್ತ ಚಾಚಿದ್ದರು.
Vijaya Karnataka Web pejavar shri helped to flood victims
ನೆರೆ ಸಂತ್ರಸ್ತರಿಗೆ ನೆರವಾದ ಪೇಜಾವರ ಶ್ರೀ


2009ರಲ್ಲಿಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ಜಿಲ್ಲೆಯ ನರಗುಂದ, ರೋಣ ತಾಲೂಕಿನ 13ಕ್ಕೂ ಹೆಚ್ಚು ಹಳ್ಳಿಗಳು ನೆರೆ ಎದುರಿಸಬೇಕಾಯಿತು. ಸಾವಿರಾರು ಜನ ಮನೆ -ಮಠ ಕಳೆದುಕೊಂಡು ಬೀದಿಗೆ ಬರುವಂತಾಯಿತು. ಇದನ್ನರಿತ ಪೇಜಾವರ ಶ್ರೀಗಳು, ಉಡುಪಿಯಿಂದ ಎರಡು ಲಾರಿ ಪರಿಹಾರ ಸಾಮಗ್ರಿ ತೆಗೆದುಕೊಂಡು ಬಂದು ನಿರಾಶ್ರಿತರಿಗೆ ವಿತರಿಸಿ ಮಾನವೀಯತೆ ಮೆರೆದರು.

ಪ್ರಸಕ್ತ ವರ್ಷವೂ ಗದಗ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಪ್ರವಾಹ ಪರಿಸ್ಥಿತಿ ಎದುರಾಯಿತು. ನೆರೆ ಸಂತ್ರಸ್ತರ ಮೇಲೆ ಭಗವಂತ ಕರುಣೆ ತೋರಲಿ ಎಂದು ಪ್ರಾರ್ಥಿಸಿದ್ದರಲ್ಲದೇ, ಸರಕಾರ ಸಂತ್ರಸ್ತರ ನೆರವಿಗೆ ಧಾವಿಸಲಿ ಎಂದು ಆಶಯ ವ್ಯಕ್ತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ