ಗದಗ: ಜಿಲ್ಲೆಯಲ್ಲಿ ಒಟ್ಟು ರೂ. 78,47,130 ಸತ್ಯಾಪನೆ ಶುಲ್ಕ ಸಂಗ್ರಹಿಸಲಾಗಿದ್ದು, ಕಿರಾಣಿ ವ್ಯಾಪಾರಸ್ಥರು, ನ್ಯಾಯಬೆಲೆ ಅಂಗಡಿಗಳು, ಸೀಮೆ ಎಣ್ಣೆ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರ ಹಾಗೂ ಇನ್ನಿತರ ಒಟ್ಟು 1231 ಅಂಗಡಿಗಳ ತಪಾಸಣೆ ಮಾಡಿ ತಪ್ಪಿತಸ್ಥರ ವಿರುದ್ಧ ಒಟ್ಟು 501 ಮೊಕದ್ದಮೆ ಹೂಡಲಾಗಿರುತ್ತದೆ. ಮೊಕದ್ದಮೆಗಳನ್ನು ಅಭಿಸಂಧಾನದ ಮೂಲಕ ಇತ್ಯರ್ಥ ಮಾಡಿ ಡಿಸೆಂಬರ್ ಅಂತ್ಯದವರೆಗೆ ಒಟ್ಟು ರೂ 7,77,000. ಅಭಿಸಂಧಾನ ದಂಡದ ಶುಲ್ಕವನ್ನು ವಸೂಲು ಮಾಡಲಾಗಿದೆ. ಯಾವುದೇ ತೂಕ ಮತ್ತು ಅಳತೆಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಗ್ರಾಹಕರು ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಜಾನುವಾರು ಮಾರುಕಟ್ಟೆ ಹತ್ತಿರ, ದೂ.238975 ಸಂಪರ್ಕಿಸಬಹುದಾಗಿದೆ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ಪ್ರಕಟಣೆ ತಿಳಿಸಿದೆ.
ದಂಡದ ಶುಲ್ಕ ವಸೂಲು
ಗದಗ: ಜಿಲ್ಲೆಯಲ್ಲಿ ಒಟ್ಟು ರೂ. 78,47,130 ಸತ್ಯಾಪನೆ ಶುಲ್ಕ ಸಂಗ್ರಹಿಸಲಾಗಿದ್ದು, ಕಿರಾಣಿ ವ್ಯಾಪಾರಸ್ಥರು, ನ್ಯಾಯಬೆಲೆ ಅಂಗಡಿಗಳು, ಸೀಮೆ ಎಣ್ಣೆ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರ ಹಾಗೂ ಇನ್ನಿತರ ಒಟ್ಟು 1231 ಅಂಗಡಿಗಳ ತಪಾಸಣೆ ಮಾಡಿ ತಪ್ಪಿತಸ್ಥರ ವಿರುದ್ಧ ಒಟ್ಟು 501 ಮೊಕದ್ದಮೆ ಹೂಡಲಾಗಿರುತ್ತದೆ. ಮೊಕದ್ದಮೆಗಳನ್ನು ಅಭಿಸಂಧಾನದ ಮೂಲಕ ಇತ್ಯರ್ಥ ಮಾಡಿ ಡಿಸೆಂಬರ್ ಅಂತ್ಯದವರೆಗೆ ಒಟ್ಟು ರೂ 7,77,000.
Vijaya Karnataka 10 Jan 2019, 5:00 am