ಆ್ಯಪ್ನಗರ

ಜನರಿಗೆ ಯೋಜನೆಗಳ ಅರಿವು ಅವಶ್ಯ

ಗದಗ: ಸರಕಾರದ ಯೊಜನೆಗಳನ್ನು ಸಮಾನವಾಗಿ ಪಡೆದುಕೊಳ್ಳುವ ಮೂಲಕ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಮುಖ್ಯೋಪಾಧ್ಯಾಯ ಎಂ.ಎಸ್‌.ನಾಸಿಪುಡಿ ಹೇಳಿದರು.

Vijaya Karnataka 22 Jan 2020, 5:00 am
ಗದಗ: ಸರಕಾರದ ಯೊಜನೆಗಳನ್ನು ಸಮಾನವಾಗಿ ಪಡೆದುಕೊಳ್ಳುವ ಮೂಲಕ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಮುಖ್ಯೋಪಾಧ್ಯಾಯ ಎಂ.ಎಸ್‌.ನಾಸಿಪುಡಿ ಹೇಳಿದರು.
Vijaya Karnataka Web people need to be aware of projects
ಜನರಿಗೆ ಯೋಜನೆಗಳ ಅರಿವು ಅವಶ್ಯ


ಶಿರಹಟ್ಟಿ ತಾಲೂಕಿನಯಲ್ಲಾಪುರ ಗ್ರಾಮದ ಸರಕಾರಿ ಪ್ರೌಢಶಾಲೆ ಹಾಗೂ ಸುವರ್ಣಗಿರಿ ಗ್ರಾಮದಲ್ಲಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮ ಸಂಪರ್ಕ ಯೋಜನೆಯಡಿ ನಡೆದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸರಕಾರ ಶ್ರಮಿಸುತ್ತಿದ್ದು, ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಅಲ್ಲದೇ, ಶಿಷ್ಯವೇತನ, ಪ್ರೋತ್ಸಾಹಧನ, ಉಚಿತ ಸೈಕಲ್‌, ಸಮವಸ್ತ್ರ, ಶೂ ಸೇರಿದಂತೆ ಹಲವು ಭಾಗ್ಯಗಳನ್ನು ಜಾರಿಗೆ ತಂದಿದ್ದು ಇವುಗಳ ಸದುಪಯೋಗಕೊಂಡು ವಿದ್ಯಾರ್ಥಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಪೂಜಾ ಕಡಕೋಳ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆ, ಸ್ವಚ್ಛತೆ, ಶಿಕ್ಷಣದ ಕುರಿತು ಅರಿವು ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸರಕಾರದ ಯೋಜನೆಯ ಬಗ್ಗೆ ಮನೆ, ಓಣಿ, ಊರಿನ ಜನರಿಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು.

ಉಮೇಶ್‌ ಹುಚ್ಚಯ್ಯನಮಠ, ಎಂ.ಎಚ್‌.ದಿಂಡವಾಡ, ವಿಠ್ಠಲ ಜೋಗೊಜಿ, ಎಂ.ಎಚ್‌.ಹುಡೇದ, ಎಸ್‌.ಬಿ.ಹಿರೇಮಠ, ಸುನಿತಾ ಕಾರುಬಾರಿ, ಲಕ್ಷ್ಮವ್ವ ಕಾರುಬಾರಿ ಇದ್ದರು.

ಸಿದ್ಧಲಿಂಗೇಶ್ವರ ಜಾನಪದ ಕಲಾತಂಡ ಅಡವಿಸೋಮಾಪುರ ಮತ್ತು ಗುರುಶಿಷ್ಯ ಪರಂಪರೆ ಕಲಾತಂಡ ಲಕ್ಕುಂಡಿ ಕಲಾವಿದರು ಬೀದಿ ನಾಟಕ ಪ್ರಸ್ತುತ ಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ