ಆ್ಯಪ್ನಗರ

ಲಾಕ್‌ಡೌನ್‌ಗೆ ಹೊಂದಿಕೊಂಡ ಜನ

ನರಗುಂದ: ಲಾಕ್‌ಡೌನ್‌ ನಂತರವೂ ಜನ ಸಂಚಾರ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದ ಪೊಲೀಸರು ಈಗ ಸ್ಪಲ್ಪಮಟ್ಟಿಗೆ ನಿರಾಳರಾಗಿದ್ದಾರೆ.15 ದಿನಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್‌ಗೆ ಹೊಂದಿಕೊಂಡ ನರಗುಂದ ತಾಲೂಕಿನ ಜನ ಆತಂಕದಲ್ಲಿಯೇ ಮನೆಹಿಡಿದು ಕುಳಿತಿದ್ದಾರೆ.

Vijaya Karnataka 6 Apr 2020, 5:00 am
ನರಗುಂದ: ಲಾಕ್‌ಡೌನ್‌ ನಂತರವೂ ಜನ ಸಂಚಾರ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದ ಪೊಲೀಸರು ಈಗ ಸ್ಪಲ್ಪಮಟ್ಟಿಗೆ ನಿರಾಳರಾಗಿದ್ದಾರೆ.
Vijaya Karnataka Web 5NRD2_25
ನರಗುಂದದಲ್ಲಿಹೆದ್ದಾರಿ ಬಿಕೋ ಎನ್ನುತ್ತಿದೆ.

15 ದಿನಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್‌ಗೆ ಹೊಂದಿಕೊಂಡ ನರಗುಂದ ತಾಲೂಕಿನ ಜನ ಆತಂಕದಲ್ಲಿಯೇ ಮನೆಹಿಡಿದು ಕುಳಿತಿದ್ದಾರೆ.
ಲಾಕ್‌ಡೌನ್‌ ಮತ್ತೆ ಮುಂದುವರಿಯುವ ಆತಂಕ ಮೂಡಿದೆ.ಈ ಆತಂಕದ ನಡುವೆ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಮಾಸ್ಕ್‌ಗಳನ್ನು ಧರಿಸಿ ಒಬ್ಬೊಬ್ಬರಾಗಿ ಹೊರಬಂದು ಮನೆ ಸೇರುತ್ತಿದ್ದಾರೆ. ಜನ ಲಾಕ್‌ ಡೌನ್‌ಗೆ ಹೊಂದಿಕೊಂಡಿದ್ದರಿಂದ ಪೊಲೀಸ್‌ ಇಲಾಖೆ ನಾಲ್ಕುಚೆಕ್‌ ಪೋಸ್ಟ್‌ ನಿರ್ಮಿಸಿ ಒಳ ಬರುವವರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.

ಈ ನಡುವೆ ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್‌ ವಿತರಣೆ ಬಂದ್‌ ಮಾಡಿದ್ದರಿಂದ ಬೈಕ್‌ ಭರಾಟೆಗೆ ಕಡಿವಾಣ ಬಿದ್ದಿದೆ. ಸೈರನ್‌ ಹಾಕುತ್ತಲೆ ಪೊಲೀಸರ ವಾಹನ ಬರುತ್ತಿದ್ದಂತೆ ಜನ ದೌಡಾಯಿಸಿ ಮನೆ ಸೇರುತ್ತಿದ್ದು ಇದರಿಂದ ಇಡೀ ನರಗುಂದ ಜನ,ವಾಹನಗಳಿಲ್ಲದ ಬಣಬಣ ಎನ್ನುತ್ತಿದೆ.

ಮನೆ ಬಾಗಿಲಿಗೆ ತರಕಾರಿ, ಎರಡ್ಮೂರು ದಿನಕ್ಕೆ ಸಿಗುತ್ತಿದ್ದ ಕಿರಾಣಿ ನಿತ್ಯ ಬೆಳಗ್ಗೆ 8ರಿಂದ 11 ರವರೆಗೆ ದೊರೆಯುತ್ತದೆ. ಇದರಿಂದ ಜನದಟ್ಟನೆಗೆ ತಡೆಗೆ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.

ಲಾಕ್‌ಡೌನ್‌ನಿಂದಾಗಿ ಸಿಮೆಂಟ್‌ಗೆ ಜನ ಪರದಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದೆ ಮನೆ ಹಿಡಿದು ಕುಳಿತಿದ್ದಾರೆ.ಗುಟ್ಕಾ, ಪಾನ್‌,ಮದ್ಯ ಪ್ರೀಯರನ್ನು ನಿದ್ದೆಗೆಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ