ಆ್ಯಪ್ನಗರ

ಸೌಲಭ್ಯ ತಲುಪಿಸುವ ಕಾರ್ಯ ಮಾಡಿ

ಶಿರಹಟ್ಟಿ : ತಾಲೂಕಿನ ಅಧಿಕಾರಿಗಳು ಸಭೆಗೆ ಬರುವಾಗ ಬರಿಗೈಯಲಿ ಬರಬೇಡಿ. ನಿಮ್ಮ ಇಲಾಖೆ ಮಾಹಿತಿಯನ್ನು ಕಡ್ಡಾಯವಾಗಿ ತರಬೇಕು. ಸರಕಾರ ಎಸ್‌ಸಿ,ಎಸ್‌ಟಿ ಸಮುದಾಯಕ್ಕೆ ನೀಡುವ ಪ್ರತಿಯೊಂದು ಸೌಲಭ್ಯ ಅರ್ಹರಿಗೆ ಸಿಗುವಂತಾಗಬೇಕು ಎಂದು ಪಜಾ,ಪಪಂ ದೌರ್ಜನ್ಯ ನಿಯಂತ್ರಣ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಹೇಳಿದರು.

Vijaya Karnataka 30 Nov 2019, 5:00 am
ಶಿರಹಟ್ಟಿ : ತಾಲೂಕಿನ ಅಧಿಕಾರಿಗಳು ಸಭೆಗೆ ಬರುವಾಗ ಬರಿಗೈಯಲಿ ಬರಬೇಡಿ. ನಿಮ್ಮ ಇಲಾಖೆ ಮಾಹಿತಿಯನ್ನು ಕಡ್ಡಾಯವಾಗಿ ತರಬೇಕು. ಸರಕಾರ ಎಸ್‌ಸಿ,ಎಸ್‌ಟಿ ಸಮುದಾಯಕ್ಕೆ ನೀಡುವ ಪ್ರತಿಯೊಂದು ಸೌಲಭ್ಯ ಅರ್ಹರಿಗೆ ಸಿಗುವಂತಾಗಬೇಕು ಎಂದು ಪಜಾ,ಪಪಂ ದೌರ್ಜನ್ಯ ನಿಯಂತ್ರಣ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಹೇಳಿದರು.
Vijaya Karnataka Web perform facility delivery
ಸೌಲಭ್ಯ ತಲುಪಿಸುವ ಕಾರ್ಯ ಮಾಡಿ


ಅವರು ಶುಕ್ರವಾರ ತಾಲೂಕು ಮಟ್ಟದ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿಯ ಮೂರನೇ ತ್ರೆತ್ರೖಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮುದಾಯಕ್ಕೆ ಸರಕಾರ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್ಲಇಲಾಖೆಗಳ ಮುಖ್ಯಸ್ಥರು ತಮ್ಮ ಕಚೇರಿಯ ನಾಮಫಲಕಗಳಲ್ಲಿಡಿಸ್‌ಪ್ಲೇ ಮಾಡಬೇಕು. ಇದು ಮುಂಬರುವ ದಿನಗಳಲ್ಲಿಕಡ್ಡಾಯವಾಗಲಿದೆ. ಪ್ರತಿ 3ತಿಂಗಳಿಗೊಮ್ಮೆ ಈ ಸಭೆ ನಡೆಸಲಾಗುವುದು. ಮುಂದಿನ ಸಭೆಗೆ ಬರುವಾಗ ಎಲ್ಲಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬರಬೇಕೆಂದರು.

ಸಮುದಾಯಕ್ಕೆ ದೌರ್ಜನ್ಯ :
ಅನ್ಯ ಸಮಾಜದಿಂದ ಸಮುದಾಯಕ್ಕೆ ಯಾವುದೇ ದೌರ್ಜನ್ಯವಾಗುತ್ತಿಲ್ಲ, ಬದಲಾಗಿ ಅಧಿಕಾರಿಗಳಿಂದಲೇ ನಮಗೆ ದೌರ್ಜನ್ಯವಾಗುತ್ತಿದೆ ಎಂದು ಮಾದಿಗ ಜಾಗೃತಿ ಜನಾಂದೋಲನ ವೇದಿಕೆ ರಾಜ್ಯಾಧ್ಯಕ್ಷ ಮುತ್ತುರಾಜ ಭಾವಿಮನಿ ಸಭೆಯಲ್ಲಿಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನಮ್ಮ ಸಮುದಾಯಕ್ಕೆ ಸಾಲ ನೀಡುತ್ತಿಲ್ಲ, ಶ್ಯೂರಿಟಿ ಬೇಕು, ಬ್ಯಾಂಕಿನಲ್ಲಿವಹಿವಾಟು ಇರಬೇಕು ಅಂದರಷ್ಟೇ ಸಾಲ ನೀಡುವುದಾಗಿ ಹೇಳುತ್ತಿದ್ದು, ನಮ್ಮಲ್ಲಿಹಣ ಇದ್ದರೆ ನಾವು ಏಕೆ ಸಾಲ ಕೇಳಲು ಹೋಗುತ್ತೇವೆ ? ಸರಕಾರ ನಮಗೆ ಎಲ್ಲಸೌಲಭ್ಯ ನೀಡಲು ಮುಂದಾಗಿದೆ ಆದರೆ ಅಧಿಕಾರಿಗಳ ನಿರ್ಲಕ್ಷತ್ರ್ಯದಿಂದ ನಮಗೆ ಸಮರ್ಪಕವಾಗಿ ಸಿಗುತ್ತಿಲ್ಲಎಂದು ದೂರಿದರು. ಪಿಎಂಜಿಎಸ್‌ವೈ ಯೋಜನೆಯಡಿ ಸಮುದಾಯದ ಕಾಲೊನಿಗಳಲ್ಲಿಮಾಡಬೇಕಾದ ಕೆಲಸಗಳು ಬೇರೆ ಸಾಮಾನ್ಯ ಕಾಲೊನಿಗಳಲ್ಲಿನಡೆದಿವೆ. ಈ ಬಗ್ಗೆ ಇಲ್ಲಿಯವರೆಗೂ ಈ ಅಧಿಕಾರಿಗಳ ಮೇಲೆ ಕ್ರಮ ಕೈಕೊಂಡಿಲ್ಲ. ಹೀಗಾದರೆ ಸಭೆಯನ್ನು ಕಾಟಾಚಾರಕ್ಕೆ ನಡೆಸುವುದು ಬೇಡಾ, ನೀವೆ ಸಭೆ ನಡೆಸಿಕೊಳ್ಳಿ ಎಂದು ಸಭೆಯ ಮಧ್ಯದಲ್ಲಿಯೇ ಹೊರನಡೆದರು.

4 ತಿಂಗಳು ಗತಿಸಿದರೂ ಚಾಜ್‌ರ್‍ಸೀಟ್‌ ಸಲ್ಲಿಸಿಲ್ಲ:
ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ24-8-2019ರಂದೇ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ತಕ್ಷಣವೇ ಬಂಧಿಸಬೇಕೆಂಬ ನಿಯಮ ಇದ್ದರೂ ಇಲ್ಲಿಉಲ್ಲಂಘನೆಯಾಗಿದೆ. ಈವರೆಗೂ ನ್ಯಾಯಾಲಯಕ್ಕೆ ಚಾಜ್‌ರ್‍ಸೀಟ್‌ ಸಹ ಸಲ್ಲಿಸಿಲ್ಲಎಂದು ಸಮಿತಿ ಸದಸ್ಯ ಜಾನು ಲಮಾಣಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿ ಪಿಎಸ್‌ಐ ಬಸವರಾಜ ತಿಪರೆಡ್ಡಿ, ಈ ಪ್ರಕರಣ ಡಿಎಸ್‌ಪಿ ಅವರ ಹಂತದಲ್ಲಿಬರುತ್ತದೆ.ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಹಾಲಪ್ಪ ಸೂರಣಗಿ, ಹೊನ್ನಪ್ಪ ಶಿರಹಟ್ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಪಂನಲ್ಲೂಮಾಹಿತಿ ಅಳವಡಿಕೆ :
ತಾಲೂಕಿನ 28 ಗ್ರಾಪಂಗಳಲ್ಲೂಒಂದು ವಾರದಲ್ಲಿಸಮುದಾಯದ ವಿವಿಧ ಯೋಜನೆಗಳ ಕುರಿತು ಆಯಾ ಗ್ರಾಪಂಗಳ ನೊಟೀಸ್‌ ಫಲಕದಲ್ಲಿಮಾಹಿತಿ ಅಳವಡಿಸಲು ಎಲ್ಲಪಿಡಿಒಗಳಿಗೆ ಸೂಚಿಸಲಾಗುವುದು. ಇತ್ತೀಚೆಗೆ ಜರುಗಿದ ಎಸ್‌ಸಿಪಿ,ಟಿಎಸ್‌ಪಿ ಪ್ರಗತಿ ಪರಿಶೀಲನೆಯಲ್ಲಿಅಪೂರ್ಣ ಮಾಹಿತಿ ನೀಡಿದ್ದು, ಸಮರ್ಪಕ ಮಾಹಿತಿ ನೀಡದೇ ಇದ್ದರೆ ಸಭೆಯಲ್ಲಿಮುಜುಗರಕ್ಕೆ ಒಳಗಾಗಬೇಕಾದಂತಹ ಪರಿಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ಸಂಪೂರ್ಣ ಮಾಹಿತಿಯನ್ನು ಸಭೆಗೆ ನೀಡಬೇಕೆಂದು ತಾಪಂ ಇಒ ಡಾ. ನಿಂಗಪ್ಪ ಓಲೇಕಾರ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ