ಆ್ಯಪ್ನಗರ

ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿ:ತೋಂಟದ ಶ್ರೀ

ಗದಗ : ಸಾಧನೆ ಸಾಧಕನ ಸ್ವತ್ತು, ಸೋಮಾರಿಯ ಸ್ವತ್ತಲ್ಲ, ಎಲ್ಲಿ ವಿದ್ಯೆ, ಚಾರಿತ್ರ್ಯವಿರುತ್ತದೆಯೋ ಸಮಾಜ ಅವರನ್ನು ಗೌರವಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆಗೈದು ಮುಖ್ಯವಾಹಿನಿಗೆ ಬರಬೇಕು ಎಂದು ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

Vijaya Karnataka 31 Jul 2019, 5:00 am
ಗದಗ : ಸಾಧನೆ ಸಾಧಕನ ಸ್ವತ್ತು, ಸೋಮಾರಿಯ ಸ್ವತ್ತಲ್ಲ, ಎಲ್ಲಿ ವಿದ್ಯೆ, ಚಾರಿತ್ರ್ಯವಿರುತ್ತದೆಯೋ ಸಮಾಜ ಅವರನ್ನು ಗೌರವಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆಗೈದು ಮುಖ್ಯವಾಹಿನಿಗೆ ಬರಬೇಕು ಎಂದು ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
Vijaya Karnataka Web performance in the field of interest tontada shir
ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿ:ತೋಂಟದ ಶ್ರೀ


ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅರುಂಧತಿ ಪದವಿಧರರ ವೇದಿಕೆ ಸಹಯೋಗದೊಂದಿಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ವರ್ಗದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಶಿಸಿ ನೌಕರರ ಸಂಘ ಹಾಗೂ ಪದವೀಧರರ ಸಂಘದ ಕಾರ್ಯಗಳು ವಿದ್ಯಾರ್ಥಿಗಳಿಗೆ ನಿವೃತ್ತರಿಗೆ ಸನ್ಮಾನಿಸಿ ಹಿರಿಯರನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾಗಿದ್ದು ತಮ್ಮ ಒಳ್ಳೆಯ ಕಾರ್ಯಕ್ಕೆ ಸದಾ ನಮ್ಮ ಬೆಂಬಲವಿದ್ದು ಉತ್ತಮ ಕಾರ್ಯಗಳು ಹೀಗೆಯೇ ಮುಂದುವರಿಯಲಿ ಎಂದರು.

ಉಪನ್ಯಾಸಕ ಆರ್‌. ಎಸ್‌.ಬುರಡಿ, ಮಕ್ಕಳ ತಜ್ಞ ಡಾ.ಡಿ.ಎಚ್‌. ಕಡದಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸಮಸ್ಯೆಗಳನ್ನು ನೆಪ ಮಾಡಿಕೊಳ್ಳದೆ ಮೆಟ್ಟಿನಿಂತು ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕೆಂದರು.

ಡಾ.ಬಸವರಾಜ ಬೀರಣ್ಣವರ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗಿರುವ ಮುಂದಿನ ಅವಕಾಶ ವಿವರಿಸಿದರು. ಪೊ›.ಜಿ.ಬಿ.ಗುಡಿಮನಿ, ಮೋಹನ ಆಲಮೇಲಕರ, ಸುಜಾತಾ ದೊಡ್ಡಮನಿ, ಎಸ್‌.ಎನ್‌. ಬಳ್ಳಾರಿ, ರಮೇಶ ಮುಂದಿನಮನಿ, ವೆಂಕಟೇಶ ದ್ವಾಸಲಕೇರಿ ಮಾತನಾಡಿದರು.

ನೌಕರ ಸಂಘದ ಅಧ್ಯಕ್ಷ ವಾಸುದೇವ ಪೂಜಾರ, ಚಂದ್ರಶೇಖರ ಕೊಟ್ನಿಕಲ್‌, ವಸಂತ ಐಹೊಳಿ, ಜಗದೀಶ ವೀರಾಪೂರ, ಸುರೇಶ ಭರಮಣ್ಣವರ, ಪುನೀತ ಬಳಗೋಡ, ವೀರೇಶ ಹರಿಜನ, ಮಹೇಶ ಬೂದಿಹಾಳ ಇದ್ದರು.

ಹನುಮಂತ ಯಡಿಯಾಪೂರ ಸ್ವಾಗತಿಸಿದರು. ವಿ.ವಿ.ನಡುವಿನಮನಿ ಪರಿಚಯಿಸಿದರು. ಬಸವರಾಜ ಮುಂದಿನಮನಿ ವಂದಿಸಿದರು. ಮಹಾಂತೇಶ ವಡವಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ