ಆ್ಯಪ್ನಗರ

ಕೆರೆ ಹೂಳೆತ್ತುವ ಕಾರ್ಯ ಶ್ಲಾಘನೀಯ: ಅನ್ನದಾನ ಶ್ರೀ

ನರೇಗಲ್ಲ: ನರೇಗಲ್ಲನ ನೆಲ, ಜಲ ಸಂರಕ್ಷ ಣೆ ಸಮೀತಿ ಸಂಘಟನೆ ಹಾಗೂ ರೈತರು ವಡಗೂಡಿ ಸ್ವಯಂ ಪ್ರೇರಣೆಯಿಂದ ಹಿರೇಕೆರೆಯ ಹೂಳು ತೆಗೆಯುವ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿ ಹಂತಕ್ಕೆ ತಂದಿರುವುದು ಶ್ಲಾಘನೀಯವಾಗಿದೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು ಹೇಳಿದರು.

Vijaya Karnataka 19 May 2019, 5:00 am
ನರೇಗಲ್ಲ: ನರೇಗಲ್ಲನ ನೆಲ, ಜಲ ಸಂರಕ್ಷ ಣೆ ಸಮೀತಿ ಸಂಘಟನೆ ಹಾಗೂ ರೈತರು ವಡಗೂಡಿ ಸ್ವಯಂ ಪ್ರೇರಣೆಯಿಂದ ಹಿರೇಕೆರೆಯ ಹೂಳು ತೆಗೆಯುವ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿ ಹಂತಕ್ಕೆ ತಂದಿರುವುದು ಶ್ಲಾಘನೀಯವಾಗಿದೆ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು ಹೇಳಿದರು.
Vijaya Karnataka Web GDG-18NRGL1-44036


ಅವರು ಪಟ್ಟಣದ ಐತಿಹಾಸಿಕ ಹೀರೆಕೆರೆಯ ಹೂಳೆತ್ತುವ ಕಾರ್ಯದ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಈ ರಾಷ್ಟ್ರದ ಆರ್ಥಿಕತೆ ಪ್ರಗತಿಯತ್ತ ಕೊಂಡೊಯ್ಯಲು ರೈತರ ಶ್ರಮವನ್ನೂ ಮರಯುವಂತಿಲ್ಲ. ಎಲ್ಲವೂ ಸರಕಾರದಿಂದಲೇ ಆಗಬೇಕು ಎಂಬ ಮನೋಭಾವ ತೊರೆದು ನಮ್ಮ ಊರಿನ ಮೂಲ ಸೌಲಭ್ಯಗಳಲ್ಲೊಂದಾದ ನೀರಿನ ಕೊರತೆ ಇದೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿರುವುದು ನಮಗೆ ಸಂತವನ್ನುಂಟು ಮಾಡಿದೆ. ಮುಂದಿನ ದಿನಮಾನಗಳಲ್ಲಿ ಬರ ಭೀಕರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಅರಿತು ಇಂದಿನಿಂದಲೇ ಜಲ ಸಂರಕ್ಷ ಣೆಗಾಗಿ ನೀವೆಲ್ಲ ಮುಂದಾಗಿರುವುದು ಮೆಚ್ಚುವಂತದ್ದಾಗಿದೆ. ಮಳೆ ನೀರು ಸಂಗ್ರಹ ಹಾಗೂ ಮರಗಳನ್ನು ಬೆಳೆಸುವ ಕಾರ್ಯ ನಡೆಯಬೇಕು. ನಿಮ್ಮ ಊರಿನ ನೀರಿನ ಅಗತ್ಯವನ್ನು ನೀವಲ್ಲದೇ ಇನ್ನಾರು ನೀಗಿಸಬೇಕು? ಸಕಾರಾತ್ಮಕವಾಗಿ ಆಲೋಚಿಸಿ ಇಂದಿನಿಂದಲೆ ಮಳೆ ಕೊಯ್ಲು, ಕೆರೆ ಪುನರುಜ್ಜೀವನ ಕಾರ್ಯಕ್ಕೆ ಮುಂದಾದಲ್ಲಿ ಬರಗಾಲದಂತ ಜ್ವಲಂತ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿದಂತಾಗುತ್ತದೆ ಎಂದರು.

ರೈತರು ತಮ್ಮ ಜಮೀನುಗಳಿಗೆ ಹಿರೇಕೆರೆಯಲ್ಲಿ ಸಿಗುತ್ತಿರುವ ಫಲವತ್ತತೆಯಿಂದ ಕೂಡಿರುವ ಮಣ್ಣುನ್ನು ಜಮೀನುಗಳಿಗೆ ಹಾಕಿಕೊಳ್ಳುವದರಿಂದ ಜಮಿನು ಫಲವತ್ತತೆ ಕಾಯ್ದುಕೊಂಡಂತಾಗಿದೆ ಎಂದರು.

ಹಾಲಕೆರೆ ಸಂಸ್ಥಾನ ಮಠದ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು, ದರೂರಿನ ಕೊಟ್ಟೂರು ದೇಶಿಕರು, ನೆಲ, ಜಲ ಸಂರಕ್ಷ ಣೆ ಸಮಿತಿ ಅಧ್ಯಕ್ಷ ಗುರುರಾಜ ಕುಲಕರ್ಣಿ, ಜಗದೀಶ ಸಂಕನಗೌಡ್ರ, ಉಮೇಶ ಸಂಗನಾಳಮಠ, ಶಿವನಗೌಡ ಪಾಟೀಲ, ರಾಜೇಂದ್ರ ಗಚ್ಚಿನಮಠ, ನಿಂಗನಗೌಡ ಲಕ್ಕನಗೌಡ್ರ, ಕೃಷ್ಣ ಜುಟ್ಲ,ಬಸವರಾಜ ವಂಕಲಕುಂಟಿ, ಪ್ರಕಾಶ ಹಕ್ಕಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ