ಆ್ಯಪ್ನಗರ

ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ

ಗದಗ: ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುವ ಮೂಲಕ ವ್ಯಕ್ತಿ ಶಿಕ್ಷಣದಿಂದ ಜೀವನದಲ್ಲಿ ಉನ್ನತ ಹಂತಕ್ಕೇರಬಲ್ಲನು ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್‌ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಅಭಿಪ್ರಾಯಪಟ್ಟರು.

Vijaya Karnataka 21 Nov 2019, 5:00 am
ಗದಗ: ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುವ ಮೂಲಕ ವ್ಯಕ್ತಿ ಶಿಕ್ಷಣದಿಂದ ಜೀವನದಲ್ಲಿಉನ್ನತ ಹಂತಕ್ಕೇರಬಲ್ಲನು ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್‌ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಅಭಿಪ್ರಾಯಪಟ್ಟರು.
Vijaya Karnataka Web personality evolution from education
ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ


ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್‌ದಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ನಾವಿಂದು ಮಕ್ಕಳ ಕೈಗೆ ಮೊಬೈಲ್‌ ಕೊಡುವ ಬದಲು ಓದಲು ಪುಸ್ತಕ, ಜ್ಞಾನಾರ್ಜನೆಗೆ ಪತ್ರಿಕೆಗಳನ್ನು, ಬರೆಯಲು ನೋಟ್‌ ಬುಕ್‌, ಪೆನ್ಸಿಲ್‌, ಪೆನ್ನು ನೀಡುವ ಮೂಲಕ ಅವರಲ್ಲಿಅಕ್ಕರೆಯ ಅಕ್ಷರಜ್ಞಾನ ನೀಡಿ ಸುಜ್ಞಾನಿಗಳನ್ನಾಗಿ ಮಾಡಲು ಪಾಲಕರು ಮುಂದಾಗಬೇಕಿದೆ ಎಂದರು.

ಸಾಮಾಜಿಕ ಕಾರ್ಯಗಳಿಗೆ ತನ್ನನ್ನು ತೊಡಗಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್‌ ಗದಗ-ಬೆಟಗೇರಿ ಅವಳಿ ನಗರದಲ್ಲಿತನ್ನದೇ ಆದ ಇತಿಮಿತಿಯಲ್ಲಿಕಾರ್ಯಚಟುವಟಿಕೆ ಮಾಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರೋಟರಿ ಕ್ಲಬ್‌ ಕಾರ್ಯದರ್ಶಿ ನರೇಶ ಜೈನ್‌, ಮಾಜಿ ಅಧ್ಯಕ್ಷ ಮಹಾಂತೇಶ ಬಾತಾಖಾನಿ, ಡಾ.ರಾಜೇಂದ್ರ ಗಚ್ಚಿನಮಠ, ಶ್ರೀಧರ ಸುಲ್ತಾನಪೂರ, ವೀರೇಂದ್ರಸಿಂಗ್‌ ರಜಪೂತ, ಎಚ್‌.ಟಿ.ಕೊಪ್ಪದ, ಎಂ.ಎಚ್‌.ಓಲೇಕಾರ, ಆರ್‌.ಎ.ಹಿರೇಮಠ, ಎಸ್‌.ಬಿ.ಕೊತಬಾಳ, ಐ.ಸಿ.ಪಲ್ಲೇದ, ಎನ್‌.ಆರ್‌.ಸಿನ್ನೂರ, ಎಸ್‌.ಎಂ.ಧಡೇದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ