ಆ್ಯಪ್ನಗರ

ನಿತ್ಯ ಯೋಗದಿಂದ ವ್ಯಕ್ತಿತ್ವ ವಿಕಸನ

ಗಜೇಂದ್ರಗಡ : ಮಕ್ಕಳು ನಿತ್ಯ ಯೋಗ ಮಾಡುವುದರಿಂದ ಓದಿನಲ್ಲಿಮುಂದೆ ಬರುತ್ತಾರೆ. ವ್ಯಕ್ತಿತ್ವ ವಿಕಸನವಾಗಲಿದೆ. ಮನಸ್ಸು ಕೇಂದ್ರಿಕೃತವಾಗಲಿದೆ. ಆರೋಗ್ಯ ವೃದ್ಧಿಸಲಿದೆ. ಜತೆಗೆ ಏಕಾಗ್ರತೆ ಹೆಚ್ಚಳವಾಗಲಿದೆ ಎಂದು ಧಾರವಾಡ ಯೋಗತಜ್ಞೆ ಡಾ. ಶೋಭಾ ಹುಲಿಕಟ್ಟಿ ಹೇಳಿದರು.

Vijaya Karnataka 17 Nov 2019, 5:00 am
ಗಜೇಂದ್ರಗಡ : ಮಕ್ಕಳು ನಿತ್ಯ ಯೋಗ ಮಾಡುವುದರಿಂದ ಓದಿನಲ್ಲಿಮುಂದೆ ಬರುತ್ತಾರೆ. ವ್ಯಕ್ತಿತ್ವ ವಿಕಸನವಾಗಲಿದೆ. ಮನಸ್ಸು ಕೇಂದ್ರಿಕೃತವಾಗಲಿದೆ. ಆರೋಗ್ಯ ವೃದ್ಧಿಸಲಿದೆ. ಜತೆಗೆ ಏಕಾಗ್ರತೆ ಹೆಚ್ಚಳವಾಗಲಿದೆ ಎಂದು ಧಾರವಾಡ ಯೋಗತಜ್ಞೆ ಡಾ. ಶೋಭಾ ಹುಲಿಕಟ್ಟಿ ಹೇಳಿದರು.
Vijaya Karnataka Web personality evolution from nitya yoga
ನಿತ್ಯ ಯೋಗದಿಂದ ವ್ಯಕ್ತಿತ್ವ ವಿಕಸನ


ಸ್ಥಳೀಯ ಜ. ತೋಂಟದಾರ್ಯ ವಿದ್ಯಾಪೀಠ ಸಿಬಿಎಸ್‌ಇ ಶಾಲೆಯಲ್ಲಿಶನಿವಾರ ಮಕ್ಕಳ ದಿನಾಚರಣೆ ನಿಮಿತ್ತ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿಅವರು ಮಾತನಾಡಿದರು.

ಆರೋಗ್ಯಪೂರ್ಣ ಜೀನವಕ್ಕೆ ಯೋಗ ದಿಕ್ಸೂಚಿಯಾಗಿದೆ. ದೈಹಿಕ ಸದೃಢತೆ, ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ. ಯೋಗಾಸನ ಮತ್ತು ಧ್ಯಾನ ಮನಸ್ಸಿನ ಚಾಂಚಲ್ಯ ಕಡಿಮೆಗೊಳಿಸುತ್ತದೆ. ಯೋಗವನ್ನು ಜೀವನದ ಭಾಗವಾಗಿ ಅಳವಡಿಸಿಕೊಂಡರೆ ಹೆಚ್ಚಿನ ಲಾಭವಾಗಲಿದೆ. ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಅಧ್ಯಾತ್ಮಿಕ, ಅವಶ್ಯಕತೆಗಳನ್ನು ಪೂರೈಸುವ ದಿವ್ಯ ಔಷಧಿಯಾಗಿದೆ ಎಂದರು.

ಪ್ರಾ. ರಶ್ಮಿ ದೇಶಪಾಂಡೆ ಮಾತನಾಡಿ, ಯೋಗದಲ್ಲಿಪಿ.ಎಚ್‌ಡಿ ಪದವಿ ಪಡೆದಿರುವ ಡಾ. ಶೋಭಾ ಹುಲಿಕಟ್ಟಿ ಮಾರ್ಗದರ್ಶನ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಮಕ್ಕಳ ದಿನಾಚರಣೆ ವಿಶಿಷ್ಟವಾಗಿ ಆಚರಿಸುವ ಹಿನ್ನೆಲೆಯಿಂದ ಯೋಗ, ವ್ಯಕ್ತಿತ್ವ ವಿಕಸನ, ಏಕಾಗ್ರತೆ ಕುರಿತು ಮಕ್ಕಳ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಿ ಬಿಂಬಿಸಿದ ಅವರಿಗೆ ಸಂಸ್ಥೆಯಿಂದ ಕೃತಜ್ಞತೆ ಸಲ್ಲಿಸಿದರು.

ಶಿಕ್ಷಕರಾದ ವಿರೇಶ ಅಂಗಡಿ, ಶಿವಕುಮಾರ ಕೋಶಗಿ, ಎಮ್‌. ಬಿ. ಭೀಮೇಶ ಮಂಜುನಾಥ ರಾಟೋಡ, ಪಿ.ಜಿ. ಪೂಜಾ, ಪರವೀನ ನಧಾಫ, ನಾಗರತ್ನ ಕಟ್ಟಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ