ಆ್ಯಪ್ನಗರ

ರಾಸುಗಳ ಸಂಖ್ಯೆ ಹೆಚ್ಚಿಸಸಲು ಯೋಜನೆ

ಶಿರಹಟ್ಟಿ: ರಾಷ್ಟ್ರೀಯ ಗೋಕುಲ್‌ ಮಿಷನ್‌ ಯೋಜನೆ ಮೂಲಕ ಕೇಂದ್ರ, ರಾಜ್ಯ ಸರಕಾರ ಉತ್ಕೃಷ್ಟ ತಳಿಯ ದೇಶಿ ಅಥವಾ ಮಿಶ್ರತಳಿಯ ವೀರ್ಯ ಬಳಸಿ ಕೃತಕ ಗರ್ಭಧಾರಣೆ ಪ್ರಮಾಣ ಮತ್ತು ಉತ್ತಮ ತಳಿಗುಣಗಳ ಕರುಗಳ ಜನನದೊಂದಿಗೆ ರಾಸುಗಳ ಸಂಖ್ಯೆ ಹೆಚ್ಚಿಸುವ ಮೂಲಕ ರೈತರ ಆದಾಯ ವೃದ್ಧಿಸಲು ಸರಕಾರಗಳು ಈ ಯೋಜನೆ ಜಾರಿಗೊಳಿಸಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೆಶಕ ಡಾ. ಚನ್ನಕೇಶವಯ್ಯ ಹೇಳಿದರು.

Vijaya Karnataka 11 Jan 2020, 5:00 am
ಶಿರಹಟ್ಟಿ: ರಾಷ್ಟ್ರೀಯ ಗೋಕುಲ್‌ ಮಿಷನ್‌ ಯೋಜನೆ ಮೂಲಕ ಕೇಂದ್ರ, ರಾಜ್ಯ ಸರಕಾರ ಉತ್ಕೃಷ್ಟ ತಳಿಯ ದೇಶಿ ಅಥವಾ ಮಿಶ್ರತಳಿಯ ವೀರ್ಯ ಬಳಸಿ ಕೃತಕ ಗರ್ಭಧಾರಣೆ ಪ್ರಮಾಣ ಮತ್ತು ಉತ್ತಮ ತಳಿಗುಣಗಳ ಕರುಗಳ ಜನನದೊಂದಿಗೆ ರಾಸುಗಳ ಸಂಖ್ಯೆ ಹೆಚ್ಚಿಸುವ ಮೂಲಕ ರೈತರ ಆದಾಯ ವೃದ್ಧಿಸಲು ಸರಕಾರಗಳು ಈ ಯೋಜನೆ ಜಾರಿಗೊಳಿಸಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೆಶಕ ಡಾ. ಚನ್ನಕೇಶವಯ್ಯ ಹೇಳಿದರು.
Vijaya Karnataka Web plan to increase the number of rasas
ರಾಸುಗಳ ಸಂಖ್ಯೆ ಹೆಚ್ಚಿಸಸಲು ಯೋಜನೆ


ಅವರು ಶುಕ್ರವಾರ ಇಲ್ಲಿಯ ಪಶು ಆಸ್ಪತ್ರೆಯಲ್ಲಿಕೃತಕ ಗರ್ಭಧಾರಣೆ ಮಾಡುವಂತಹ ತಾಂತ್ರಿಕ ಸಿಬ್ಬಂದಿ ಹಾಗೂ ಕೆಎಂಎಫ್‌ ಕೃತಕ ಗರ್ಭಧಾರಣ ಸಿಬ್ಬಂದಿ ಸಭೆಯಲ್ಲಿಮಾತನಾಡಿದರು.

ಸರಕಾರ ನಡೆಸಿದಂತಹ ಸಮೀಕ್ಷೆಯಲ್ಲಿಶೇ.30ಕ್ಕಿಂತ ಜನನ ಪ್ರಮಾಣದಲ್ಲಿಕಡಿಮೆ ಇರುವಂತಹ ದೇಶಿಯ ತಳಗಳ ಉನ್ನತೀಕರಿಸುವುದರಲ್ಲಿಗದಗ ಜಿಲ್ಲೆಯು ಸಹ ಒಂದಾಗಿದ್ದು, ಇದಕ್ಕಾಗಿ ಗೀರ, ತರಪಾರಕರ್‌, ಶಾನಿವಾಲ್‌, ಎಚ್‌ಎಫ್‌ ಮತ್ತು ಜೆಆರ್‌ ಹಾಗೂ ಮೂರಾ ತಳಿಗಳಿಂದ ದೇಶಿಯ ತಳಿಗಳಿಗೆ ಕೃತಕ ಗರ್ಭಧಾರಣ ಮಾಡಲು ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಹೈನುಗಾರಿಕೆಯ ಮೂಲಕ ಹೆಚ್ಚಿನ ಆದಾಯ ಲಭಿಸಲಿದೆ.

ಜಿಲ್ಲೆಯ ಆಯ್ದ ಗ್ರಾಮಗಳಲ್ಲಿಆಧಾರ್‌ ಸಂಖ್ಯೆಯಂತೆ ವಿಶಿಷ್ಟ ಗುರುತಿನ ಸಂಖ್ಯೆಯ ಕಿವಿಯೋಲೆಯನ್ನು ಆಯ್ದ ರಾಸುಗಳಿಗೆ ಅಳವಡಿಸುವುದರೊಂದಿಗೆ ಇನಾಫ್‌ ತಂತ್ರಾಂಶದಲ್ಲಿದಾಖಲಿಸಿ ರೈತರ ಮನೆ ಬಾಗಿಲಿಗೆ ತೆರಳಿ ಉಚಿತ ತಾಂತ್ರಿಕ ಸಿಬ್ಬಂದಿ ಕೃತಕ ಗರ್ಭಧಾರಣೆ ಮಾಡಲಿದ್ದಾರೆ ಎಂದರು.

ಮುಖ್ಯ ಪಶುವೈದ್ಯಾಧಿಕಾರಿ ಬಸವರಾಜ ಅಂಗಡಿ, ಲಕ್ಷೆತ್ರ್ಮೕಶ್ವರ ಪಶು ಆಸ್ಪತ್ರೆ ಸಹಾಯಕ ನಿರ್ದೆಶಕ ಎನ್‌.ಎ.ಹವಳದ, ಪ್ರಭಾರಿ ತಾಪಂ ಇಒ , ಶಿರಹಟ್ಟಿ ಪಶು ಆಸ್ಪತ್ರೆ ಸಹಾಯಕ ನಿರ್ದೆಶಕ ಡಾ. ಎನ್‌.ಎಚ್‌. ಓಲೇಕಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ