ಆ್ಯಪ್ನಗರ

ಮಾರಾಟ ಮಳಿಗೆ ಲೀಲಾವು ಮುಂದೂಡಿಕೆ

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಇರುವ 25 ಮಾರಾಟ ಮಳಿಗೆಗಳು ಹಾಗೂ ಎರಡು ಕೆರೆಗಳಲ್ಲಿಮೀನು ಬಿಡುವ ಬಗ್ಗೆ ಕರೆದಿದ್ದ ಲೀಲಾವು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

Vijaya Karnataka 10 Jan 2020, 5:00 am
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ 25 ಮಾರಾಟ ಮಳಿಗೆಗಳು ಹಾಗೂ ಎರಡು ಕೆರೆಗಳಲ್ಲಿಮೀನು ಬಿಡುವ ಬಗ್ಗೆ ಕರೆದಿದ್ದ ಲೀಲಾವು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
Vijaya Karnataka Web postponed by leela
ಮಾರಾಟ ಮಳಿಗೆ ಲೀಲಾವು ಮುಂದೂಡಿಕೆ


ಗ್ರಾಮ ಪಂಚಾಯಿತಿಯು ಲೀಲಾವು ಅವಧಿ ಮುಗಿದ ವಾಣಿಜ್ಯ ಮಳಿಗೆಗಳನ್ನು ಜ.8 ರಂದು ಲೀಲಾವು ಮಾಡುವ ಕುರಿತು ಜಾಹೀರಾತು ನೀಡಿತ್ತು. ಆದರೆ ಲೀಲಾವು ಮಾಡುವ ರೀತಿ, ನೀತಿಯಲ್ಲಿಲೋಪ ದೋಷಗಳಿದ್ದ ಕಾರಣ ಗ್ರಾಮಸ್ಥರು ಮತ್ತು ಭಾಡಿಗೆದಾರರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಸಾಮಾನ್ಯ ಸಭೆಯಲ್ಲಿಪಾಲ್ಗೊಂಡ ಜಿಪಂ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ತಾಪಂ ಉಪಾಧ್ಯಕ್ಷೆ ಸುಜಾತಾ ಖಂಡು, ಗ್ರಾಪಂ ಅಧ್ಯಕ್ಷ ಎಸ್‌.ಎಮ್‌. ಬೂದಿಹಾಳ ಅವರ ನೇತೃತ್ವದಲ್ಲಿಅಧಿಕಾರಗಳು ಚರ್ಚಿಸಿ ಲೀಲಾವು ಪ್ರಕ್ರಿಯೆ ಮುಂದೂಡಿದ್ದಾರೆ. ಈ ಕುರಿತು ಗ್ರಾಮದಲ್ಲಿಡಂಗುರ ಸಾರಲಾಗಿದೆ.

ವಾಗ್ವಾದ: ಸಾಮಾನ್ಯ ಸಭೆಗೂ ಮೊದಲು ಮನವಿ ಸಲ್ಲಿಸಲು ಬಂದಿದ್ದ ಬಾಡಿಗೆದಾರರು, ಗ್ರಾಮಸ್ಥರು ಹಾಗೂ ಲೀಲಾವು ಮಾಡಬೇಕೆಂದು ಬಂದಿದ್ದವರ ನಡುವೆ ತೀವ್ರ ವಾಗ್ವಾದ ನಡೆದು ಪಂಚಾಯಿತಿ ಆವರಣದಲ್ಲಿಸಂಜೆವರೆಗೂ ತ್ವೇಷಮಯ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಬಾಡಿಗೆದಾರರ ಮನವಿ: 25 ವಾಣಿಜ್ಯ ಮಳಿಗೆ ಬಾಡಿಗೆದಾರರ ಅವಧಿಯು ಕಳೆದ 2018 ಕ್ಕೆ ಮುಗಿದಿದ್ದು ಮತ್ತೆ ಕೆಲವರ ಬಾಡಿಗೆ ಹಣವನ್ನು ಇದೇ ಮಾ.31 ರವರೆಗೂ ಪಾವತಿಸಿಕೊಳ್ಳಲಾಗಿದೆ. ಇನ್ನುಳಿದವರು ಬಾಡಿಗೆ ತುಂಬಲು ಹೋದರೆ ಪಾವತಿ ಮಾಡದೇ ಮರಳಿ ಕಳಿಸಲಾಗಿದೆ. ಇದರಲ್ಲಿಗ್ರಾಪಂ ತಾರತಮ್ಯ ನೀತಿ ಅನುಸರಿಸುತ್ತಿದೆ. ಇನ್ನು ಬ್ಯಾಂಕ್‌, ಫೈನಾನ್ಸ್‌ ಸೇರಿದಂತೆ ಲಕ್ಷಾಂತರ ರೂ. ಬಂಡವಾಳ ಹಾಕಲಾಗಿದೆ. ಲಕ್ಷಾಂತರ ರೂ. ಉದ್ರಿ ನೀಡಲಾಗಿದೆ. ಈಗ ದಿಢಿರನೇ ಲೀಲಾವು ಮಾಡಿ ಹೊರಗೆ ಹಾಕಿದರೆ ನಮ್ಮ ಕುಟುಂಬವು ಬೀದಿ ಪಾಲಾಗುತ್ತದೆ. ಆದ್ದರಿಂದ ನಮನ್ನೇ ಮುಂದುವರಿಸಬೇಕೆಂದು ಬಾಡಿಗೆದಾರರು ಗ್ರಾಪಂಗೆ ಮನವಿ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ