ಆ್ಯಪ್ನಗರ

ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ

ನರೇಗಲ್ಲ : ಜನಗಳ ಹಿತದೃಷ್ಟಿಗಾಗಿ ಊರಿನ ಮೂಲ ಸೌಲಭ್ಯಗಳಗೆ ಆದ್ಯತೆ ನೀಡಲಾಗುತ್ತಿದೆ ಎಂದು ರೋಣ ಶಾಸಕ ಕೆ. ಜಿ. ಬಂಡಿ ಹೇಳಿದರು. ಅವರು ನರೇಗಲ್ಲ ಸಮೀಪದ ಜಕ್ಕಲಿ-ಅಬ್ಬಿಗೇರಿ ಗ್ರಾಮಗಳ ನಡುವಿನ ಹಳ್ಳಗಳ ಸೇತುವೆ ನಿರ್ಮಾಣದ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ನಂತರ ಗ್ರಾಮದ

Vijaya Karnataka 4 Jun 2019, 5:00 am
ನರೇಗಲ್ಲ : ಜನಗಳ ಹಿತದೃಷ್ಟಿಗಾಗಿ ಊರಿನ ಮೂಲ ಸೌಲಭ್ಯಗಳಗೆ ಆದ್ಯತೆ ನೀಡಲಾಗುತ್ತಿದೆ ಎಂದು ರೋಣ ಶಾಸಕ ಕೆ. ಜಿ. ಬಂಡಿ ಹೇಳಿದರು.
Vijaya Karnataka Web GDG-3nrgl1
ಜಕ್ಕಲಿ ಬಸ್‌ ನಿಲ್ದಾಣ ಛಾವಣಿ ಶಿಥಿಲಗೊಂಡಿರುವುದನ್ನು ಶಾಸಕ ಕಳಕಪ್ಪ ಬಂಡಿ ಪರಿಶೀಲಿಸಿದರು.

ಅವರು ನರೇಗಲ್ಲ ಸಮೀಪದ ಜಕ್ಕಲಿ-ಅಬ್ಬಿಗೇರಿ ಗ್ರಾಮಗಳ ನಡುವಿನ ಹಳ್ಳಗಳ ಸೇತುವೆ ನಿರ್ಮಾಣದ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ನಂತರ ಗ್ರಾಮದ ಬಸ್‌ ನಿಲ್ದಾಣ ಛಾವಣಿ ಶಿಥಿಲಗೊಂಡಿರುವುದನ್ನು ಪರಿಶೀಲಿಸಿ ಮಾತನಾಡಿದರು. ನೀರು, ಶೌಚಾಲಯ, ರಸ್ತೆ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಮೂಲ ಸೌಲಭ್ಯಗಳ ಬಗ್ಗೆ ಆದ್ಯತೆ ನೀಡಲಾಗುತ್ತಿದೆ. ಸ್ಥಳೀಕರು ನಮ್ಮ ಗಮನಕ್ಕೆ ತಂದಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ. ಜಕ್ಕಲಿ ಗ್ರಾಮದ ಬಸ್‌ ನಿಲ್ದಾಣ ಬಹಳ ಹಳೆ ಕಟ್ಟಡವಾಗಿದ್ದು ತಾಪಂ ಅಧಿಕಾರಿಗಳೊಂದಿಗೆ ಚರ್ಚಿಸಿ ಶಿಥಿಲಗೊಂಡ ಬಸ್‌ ನಿಲ್ದಾಣ ಛಾವಣಿ ನಿರ್ಮಾಣ ಅಥವಾ ತೆಗೆದುಹಾಕಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲು ಸೂಚಿಸುವುದಾಗಿ ಹೇಳಿದರು. ನಂತರ ಜನರು ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಮುತ್ತು ಕಡಗದ, ತಾಪಂ ಸದಸ್ಯ ಸಂದೇಶ ದೊಡ್ಡಮೇಟಿ, ಶೇಖಪ್ಪ ಮಾರನಬಸರಿ, ನಾಗರಾಜ ಸೋಮನಕಟ್ಟಿ, ಮುದಿಯಪ್ಪ ಜಂಗಣ್ಣವರ, ಹರ್ಶವರ್ಧನ ದೊಡ್ಡಮೇಟಿ, ಶರಣಪ್ಪ ಕೋರಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ