ಆ್ಯಪ್ನಗರ

ಚುನಾವಣೆ ಬಿಜೆಪಿ ಕಾರ‍್ಯಕರ್ತರ ಪೂರ್ವಭಾವಿ ಸಭೆ

ಗಜೇಂದ್ರಗಡ : ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಮಾಡುವ ಮಹತ್ತರ ಜವಾಬ್ದಾರಿ ಬಿಜೆಪಿ ಕಾರ‍್ಯಕರ್ತರ ಮೇಲಿದ್ದು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುರುಳು ಶ್ರಮಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಸ್ಥಳೀಯ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಭಾನುವಾರ ಲೋಕಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಕಾರ‍್ಯಕರ್ತರ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.

Vijaya Karnataka 18 Mar 2019, 5:00 am
ಗಜೇಂದ್ರಗಡ : ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಮಾಡುವ ಮಹತ್ತರ ಜವಾಬ್ದಾರಿ ಬಿಜೆಪಿ ಕಾರ‍್ಯಕರ್ತರ ಮೇಲಿದ್ದು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುರುಳು ಶ್ರಮಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಸ್ಥಳೀಯ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಭಾನುವಾರ ಲೋಕಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಕಾರ‍್ಯಕರ್ತರ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
Vijaya Karnataka Web GDG-17GJD1
ಗಜೇಂದ್ರಗಡ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ನಡೆದ ಕಾರ‍್ಯಕರ್ತರ ಸಭೆಯನ್ನು ಶಾಸಕ ಕಳಕಪ್ಪ ಬಂಡಿ ಉದ್ಘಾಟಿಸಿದರು.


ಕೇಂದ್ರ ಸರಕಾರ ಸಾಧನೆಗಳನ್ನು ಮತದಾರ ಮನೆಗಳಿಗೆ ತಲುಪಿಸಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಪ್ರತಿಯೊಂದು ಮತವೂ ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಅರಿತು ಪ್ರಚಾರ ನಡೆಸಬೇಕು ಎಂದರು.

ಹಾವೇರಿ ಲೋಕಸಭೆ ಮತಕ್ಷೇತ್ರದಲ್ಲಿ ಕೆಂದ್ರ ಸರಕಾರ ಅಭಿವೃದ್ಧಿ ಸಾಧನೆಗಳು ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿವೆ. ಗಜೇಂದ್ರಗಡ ತಾಲೂಕಿಗೆ ಹೆದ್ದಾರಿ ಜತೆಗೆ ಸಹಸ್ರಾರು ಕುಟುಂಬಕ್ಕೆ ಗ್ಯಾಸ್‌ ವಿತರಣೆ, ಸ್ವಚ್ಛಭಾರತ ಅಭಿಯಾನ್‌, ಪ್ರಧಾನಿ ಜನಧನ್‌ ಖಾತೆ, ಸುಕನ್ಯಾ ಸಂಮೃದ್ಧಿ ಯೋಜನೆ, ಅವಾಸ್‌ ಯೋಜನೆ, ಮುದ್ರಾ ಯೋಜನೆ, ಜೀವನಜ್ಯೋತಿ ಭೀಮಾ ಯೋಜನೆ, ಅಟಲ್‌ ಪಿಂಚನಿ ಯೋಜನೆ, ಸುರಕ್ಷಾ ಭೀಮಾ ಯೋಜನೆ, ಫಸಲ್‌ ಭೀಮಾ ಯೋಜನೆ, ಗರೀಬ ಕಲ್ಯಾಣ ಯೋಜನೆ, ಬೇಟಿ ಬಚಾವ್‌ ಬೇಟಿ ಪಡಾವ್‌, ಮೇಕ್‌ ಇನ್‌ ಇಂಡಿಯಾ ಜನಮನ ಗೆದ್ದಿವೆ ಎಂದರು. ಅನೇಕ ಯೋಜನೆಗಳ ಫಲ ಸಹಸ್ರಾರು ಫಲಾನುಭವಿಗಳಿಗೆ ತಲುಪಿವೆ ಎಂದರು.

ರೋಣ ಮಂಡಳ ಬಿಜೆಪಿ ಸಾಮಾಜಿಕ ಜಾಲ ತಾಣದ ಮುಖಂಡ ರಾಜೇಂದ್ರ ಘೋರ್ಪಡೆ , ಬಿ.ಎಂ. ಸಜ್ಜನ, ಹನುಮಂತರಾವ್‌ ಚವ್ವಾಣ, ತಿಮ್ಮಣ್ಣಾ ವನ್ನಾಲ ಮಾತನಾಡಿದರು. ಹೊನ್ನುಸಾ ದಾನಿ, ಮೋಹನಸಾ ರಾಯಬಾಗಿ, ವಸಂತರಾವ್‌ ಮೋಹಿತೆ, ಶರಣಪ್ಪ ರೇವಡಿ, ವಿಜಯಲಕ್ಷ್ಮಿ ಚೆಟ್ಟೇರ್‌, ಅಂಬರೀಶ ಬಳಿಗೇರ, ಭಾಸ್ಕರ್‌ ರಾಯಬಾಗಿ, ಶರಣಪ್ಪ ದೊಣ್ಣೆಗುಡ್ಡ, ಡಿ.ಕೆ. ಛಾವಣಿ, ಡಾ. ಬಿ.ವಿ. ಕಂಬಳ್ಯಾಳ, ಎಸ್‌. ಎಲ್‌. ಹಿರೇಮನಿ, ಬಸಪ್ಪ ಪಲ್ಲೇದ, ಆರ್‌.ಕೆ. ಚವ್ವಾಣ, ಮುದಿಯಪ್ಪ ಕರಡಿ, ಲಾಲಪ್ಪ ರಾಠೋಡ, ಮುದಿಯಪ್ಪ ಮುಧೋಳ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ