ಆ್ಯಪ್ನಗರ

ಶ್ರೀಗಳಿಂದ ಸಚಿವ ಸ್ಥಾನದ ಒತ್ತಡ ಸರಿಯಲ್ಲ: ಹೊರಟ್ಟಿ

ಗದಗ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾರ್ಯಕ್ರಮಕ್ಕೆ ಕರೆದ ಹರಿಹರ ಪಂಚಮಸಾಲಿ ಶ್ರೀಗಳು ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಡುವುದು ಸರಿಯಲ್ಲಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Vijaya Karnataka 17 Jan 2020, 6:39 pm
ಗದಗ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾರ್ಯಕ್ರಮಕ್ಕೆ ಕರೆದ ಹರಿಹರ ಪಂಚಮಸಾಲಿ ಶ್ರೀಗಳು ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಡುವುದು ಸರಿಯಲ್ಲಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
Vijaya Karnataka Web pressure on ministerial position by horatti
ಶ್ರೀಗಳಿಂದ ಸಚಿವ ಸ್ಥಾನದ ಒತ್ತಡ ಸರಿಯಲ್ಲ: ಹೊರಟ್ಟಿ


ಗುರುವಾರ ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪಂಚಮಸಾಲಿ ಸಮಾಜಕ್ಕೆ ಸೇರಿದ 15 ಜನ ಶಾಸಕರಿದ್ದಾರೆ. ಅವರಲ್ಲಿಒಬ್ಬರನ್ನೆ ಉಲ್ಲೇಖಿಸಿ ಸಚಿವರನ್ನಾಗಿ ಮಾಡಿ ಎಂದು ಬಹಿರಂಗವಾಗಿ ಒತ್ತಡ ಹಾಕುವುದು ಸಮಂಜಸವಲ್ಲ. ಒಂದು ವೇಳೆ ಹೇಳಬೇಕಾಗಿದ್ದರೆ ಮಠಕ್ಕೆ ಕರೆದು ಖಾಸಗಿಯಾಗಿ ಹೇಳಬಹುದಿತ್ತು. ಶ್ರೀಗಳ ಹೇಳಿಕೆಯಿಂದಾಗಿ ಯಡಿಯೂರಪ್ಪ ಅವರು ನಿರಾಣಿಯನ್ನು ಮಂತ್ರಿಯೇ ಮಾಡುವುದಿಲ್ಲಎಂದರು.

ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಬರೆದ ಪತ್ರದ ಕುರಿತು 'ವೀರಶೈವ ಲಿಂಗಾಯತ ಅಂತಾ ಪತ್ರವನ್ನು ಬರೆದಿದ್ದೀರಾ' ಎಂಬ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ನಾನು ಲಿಂಗಾಯತ ಎಂದು ಪತ್ರ ಬರೆದಿದ್ದೇನೆ. ಲಿಂಗಾಯತ ಎಂದರೆ ಎಲ್ಲರೂ ಬರುತ್ತಾರೆ.

ಈ ಹಕ್ಕೊತ್ತಾಯಕ್ಕೆ ವೀರಶೈವರು ಬೆಂಬಲ ನೀಡುತ್ತಾರೊ ಇಲ್ಲವೊ ಗೊತ್ತಿಲ್ಲ. ಅದು ಅವರಿಗೆ ಬಿಟ್ಟ ವಿಷಯ. ನಾವು ಯಾರನ್ನೂ ವಿರೋಧಿಸಿಲ್ಲ. ನನ್ನ ಪ್ರಕಾರ ನಾನು ಲಿಂಗಾಯತ ಅಂತಾ ಕೊಟ್ಟಿದ್ದೇನೆ. ಮುಂದಿನ ನಿರ್ಧಾರ ಸರಕಾರಕ್ಕೆ ಬಿಟ್ಟದ್ದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ