ಆ್ಯಪ್ನಗರ

ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘ : ಪ್ರಮುಖ ಬೇಡಿಕೆ ಈಡೇರಿಸಿ

ಗದಗ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಕರೆಯ ಮೇರೆಗೆ ಜಿಲ್ಲಾ ಸಂಘವು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಜಿಲ್ಲಾ ಕೇಂದ್ರದಲ್ಲಿ ಬೃಹತ್‌ ಪ್ರತಿಭಟನಾ ರಾರ‍ಯಲಿ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 17 Feb 2019, 5:00 am
ಗದಗ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಕರೆಯ ಮೇರೆಗೆ ಜಿಲ್ಲಾ ಸಂಘವು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಜಿಲ್ಲಾ ಕೇಂದ್ರದಲ್ಲಿ ಬೃಹತ್‌ ಪ್ರತಿಭಟನಾ ರಾರ‍ಯಲಿ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web GDG-16RUDRAGOUD13
ಶಿಕ್ಷ ಕರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗನಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.


ಶಿಕ್ಷ ಕರ ವರ್ಗಾವಣೆ ಕಾಯಿದೆ 2017 ರನ್ವಯ ಶಿಕ್ಷ ಕರ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿ ವರ್ಷ ಮಾರ್ಚ್‌ ಅಥವಾ ಏಪ್ರೀಲ್‌ ತಿಂಗಳಲ್ಲೇ ಕೈಗೊಳ್ಳಬೇಕು. ಹಲವು ಕಾರಣಗಳಿಂದ ಮುಂದೂಡುತ್ತ ಬಂದಿರುವ ಶಿಕ್ಷ ಕರ ವರ್ಗಾವಣೆ ಪ್ರಕ್ರಿಯೆಯನ್ನು 3 ವರ್ಷಗಳಿಂದ ಕೈಗೊಂಡಿಲ್ಲ ಇದರಿಂದ ವರ್ಗಾವಣೆ ಬಯಸುತ್ತಿರುವ ಶಿಕ್ಷ ಕ ಸಮುದಾಯಕ್ಕೆ ತೀವ್ರ ತೊಂದರೆಯಾಗಿದೆ. ನವೆಂಬರ್‌ದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷ ಣಿಕ ಸಮ್ಮೇಳನದಲ್ಲಿ ಫೆಬ್ರವರಿಯಲ್ಲೇ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವುದಾಗಿ ಹೇಳಿದ್ದರೂ ಯಾವ ಕ್ರಮವನ್ನೂ ಜರುಗಿಸಿಲ್ಲ ಆದ್ದರಿಂದ ಶೇಕಡಾ ಮಿತಿ ಪರಿಗಣಿಸಿ, ಪ್ರಸಕ್ತ ವರ್ಗಾವಣೆ ಪ್ರಕ್ರಿಯೆ ಜೂನ್‌ ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ಸಂಘವು ಮನವಿ ಮಾಡಿಕೊಂಡಿದೆ.

ಸೇವಾನಿರತ ಪದವೀಧರ ಶಿಕ್ಷ ಕರಿಗೆ ಬಡ್ತಿ ನೀಡುವುದು ಅತೀ ಅವಶ್ಯಕವಾಗಿದ್ದು ಈಗಾಗಲೇ 2 ಬಾರಿ ನೇರ ನೇಮಕಾತಿ ಮೂಲಕ ಪದವೀಧರ ಶಿಕ್ಷ ಕರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಇದರಿಂದ ಸೇವಾನಿರತ ಶಿಕ್ಷ ಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಬಡ್ತಿ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತವಾಗಿದ್ದು ಎಲ್ಲದಕ್ಕೂ ಪವಿತ್ರಾ ಪ್ರಕರಣವನ್ನು ಕಾರಣ ನೀಡುತ್ತಿರುವುದು ವಿಷಾದನೀಯವಾಗಿದೆ. ಕನಿಷ್ಠ ಷರತ್ತುಬದ್ಧ ಬಡ್ತಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮಿತಿ ವರದಿ ಪಡೆದು ತಕ್ಷ ಣ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಗ್ರಾಮೀಣ ಕೃಪಾಂಕ ಸೌಲಭ್ಯ ಪಡೆದುಕೊಂಡು ಸೇವೆಯಿಂದ ವಜಾಗೊಂಡಿರುವ ಶಿಕ್ಷ ಕರ ಪೂರ್ಣ ಸೇವೆ ಪರಿಗಣಿಸಿ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಶಿಕ್ಷ ಕರನ್ನು ಬಿಎಲ್‌ಒ ಹಾಗೂ ಇನ್ನಿತರ ಶಿಕ್ಷ ಣೇತರ ಕಾರ್ಯಗಳಿಂದ ಮುಕ್ತಗೊಳಿಸಿ ಮಕ್ಕಳಿಗೆ ಪಾಠ ಹೇಳಲು ಗುಣಾತ್ಮಕ ಶಿಕ್ಷ ಣ ನೀಡಲು ಅವಕಾಶ ಕಲ್ಪಿಸಬೇಕು.

6ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಆಯೋಗದ ಶಿಫಾರಸ್ಸಿನನ್ವಯ ಹಲವು ಆದೇಶಗಳನ್ನು ಹೊರಡಿಸಿದ್ದು ಮುಖ್ಯ ಗುರುಗಳಿಗೆ ಹಾಗೂ ಬಡ್ತಿ ಹೊಂದುವವರಿಗೆ ಅವರ ಸೇವಾ ಜೇಷ್ಠತೆ ಆಧಾರದ ಮೇಲೆ 10, 15, 20, 25 ವರ್ಷಗಳ ಕಾಲಮಿತಿ ವೇತನ ಬಡ್ತಿ ನೀಡದೇ ಸೇವಾ ಹಿರಿತನದ ಮೂಲಕ ಬಡ್ತಿ ಹೊಂದಿದವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಆದೇಶ ಹೊರಡಿಸಿ ಬಡ್ತಿ ಹೊಂದಿದ ಮುಖ್ಯ ಗುರುಗಳಿಗೆ 10, 15, 20, 25 ವರ್ಷಗಳ ಆರ್ಥಿಕ ಸೌಲಭ್ಯ ನೀಡಬೇಕು ಮನವಿ ಮೂಲಕ ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಸ್ವೀಕರಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಂ.ಹಿರೇಮಠ, ಎಸ್‌.ಎಚ್‌.ನೈನಾಪೂರ, ಬಿ.ಎಸ್‌.ಹರ್ಲಾಪೂರ, ಎಸ್‌.ಎಲ್‌.ಶಿವಪ್ಪಗೌಡ್ರ, ಆರ್‌.ಎಚ್‌.ಖಾನಾಪೂರ, ಎಚ್‌.ಆರ್‌.ಕೋಣಿಮನಿ, ಎಸ್‌.ಎನ್‌.ಅತಡಕರ, ಎಸ್‌.ಎಂ.ಪಾಟೀಲ, ಕೆ.ಎಂ.ನರಗುಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ