ಆ್ಯಪ್ನಗರ

ಕಪ್ಪು ಚುಕ್ಕಿ ಇಲ್ಲದ ಪ್ರಧಾನಿ ಮೋದಿ:ಈಶ್ವರಪ್ಪ

ಹೊಳೆಆಲೂರ : ಹಿಂದೆ ಇದ್ದ ಮನಮೋಹನ ಸಿಂಗ್‌ ಸರಕಾರದ 10 ವರ್ಷ ಆಡಳಿತದಲ್ಲಿ ಕಾಂಗ್ರೆಸ್‌ನ ಸೋನಿಯಾ ಅವರು ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆಯಾಗಿ ಆಯ್ಕೆಯಾಗಿದ್ದರು. ಆದರೆ ಮೋದಿಯವರು ಪ್ರಧಾನಿಯಾದ 5 ವರ್ಷಗಳಲ್ಲಿ ವಿಶ್ವದಲ್ಲಿ ಭಾರತ 4 ನೇ ಪ್ರಬಲ ದೇಶವಾಗಿ ಹೊರಹೊಮ್ಮಿದೆ. ಇನ್ನೆಂದೂ ಭಾರತದ ತಂಟೆಗೆ ಬಾರದಂತೆ ಪಾಕಿಸ್ಥಾನಕ್ಕೆ ದಿಟ್ಟ ಉತ್ತರ ನೀಡಿದ ಏಕೈಕ ಪ್ರಧಾನಿ ಮೋದಿ ಎಂದು ರಾಜ್ಯ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Vijaya Karnataka 13 Apr 2019, 5:00 am
ಹೊಳೆಆಲೂರ : ಹಿಂದೆ ಇದ್ದ ಮನಮೋಹನ ಸಿಂಗ್‌ ಸರಕಾರದ 10 ವರ್ಷ ಆಡಳಿತದಲ್ಲಿ ಕಾಂಗ್ರೆಸ್‌ನ ಸೋನಿಯಾ ಅವರು ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆಯಾಗಿ ಆಯ್ಕೆಯಾಗಿದ್ದರು. ಆದರೆ ಮೋದಿಯವರು ಪ್ರಧಾನಿಯಾದ 5 ವರ್ಷಗಳಲ್ಲಿ ವಿಶ್ವದಲ್ಲಿ ಭಾರತ 4 ನೇ ಪ್ರಬಲ ದೇಶವಾಗಿ ಹೊರಹೊಮ್ಮಿದೆ. ಇನ್ನೆಂದೂ ಭಾರತದ ತಂಟೆಗೆ ಬಾರದಂತೆ ಪಾಕಿಸ್ಥಾನಕ್ಕೆ ದಿಟ್ಟ ಉತ್ತರ ನೀಡಿದ ಏಕೈಕ ಪ್ರಧಾನಿ ಮೋದಿ ಎಂದು ರಾಜ್ಯ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.
Vijaya Karnataka Web GDG-12HLR1
ಮೆಣಸಗಿ ಗ್ರಾಮದ ಬಿಜೆಪಿ ಪ್ರಚಾರದ ಸಭೆಯಲ್ಲಿ ಕೆ.ಎಸ್‌. ಈಶ್ವರಪ್ಪ ಮಾತನಾಡಿದರು. ಬಾಗಲಕೋಟ ಕ್ಷೇತ್ರದ ಅಭ್ಯರ್ಥಿ ಗದ್ದಿಗೌಡ್ರ, ನರಗುಂದ ಶಾಸಕ ಸಿ.ಸಿ. ಪಾಟೀಲ , ಶಿವಕುಮಾರ ನೀಲಗುಂದ, ಅಶೋಕ ಹೆಬ್ಬಳಿ ಪಾಲ್ಗೊಂಡಿದ್ದರು.


ಮೆಣಸಗಿಯಲ್ಲಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಸಂಪತ್ತು ಲೂಟಿ ಮಾಡಿದ ಯಾರನ್ನೂ ಬಿಡುವುದಿಲ್ಲ ಎಂಬ ಮೋದಿಯವರ ಮಾತಿಗೆ ಹೆದರಿ ಇಂದು ಮಾಹಾ ಘಟಬಂಧನ್‌ ಮಾಡಿಕೊಂಡು ಜನರ ಹಾದಿ ತಪ್ಪಿಸುವ ಕೆಲಸ ನಡೆದಿದೆ ಎಂದರು.

ಬಿಜೆಪಿ ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಮಾತನಾಡಿ,ವಿರೋಧಿಗಳು ಗದ್ದಿಗೌಡ್ರು ಏನು ಮಾಡಿದ್ದಾರೆ ಎಂದು ಕೇಳುತ್ತಿರುವುದು ಕಂಡು ಬರುತ್ತಿದೆ. ನಾವು ಪ್ರಚಾರ ಪ್ರೀಯರಲ್ಲ ಆದರೂ ನಮ್ಮ ಅಧಿಕಾರಾವಧಿಯಲ್ಲಿ ಕೇಂದ್ರ ಸರಕಾರದಿಂದ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಗಳ ಪಟ್ಟಿ ತಂದಿರುವೆ ಎಂದು ಓದಿಹೇಳಿದರು. ಅನೇಕ ಹಳ್ಳಿಗಳಲ್ಲಿ ರಸ್ತೆ, ಸೇತುವೆ ಮುಂತಾದ ಕಡೆಗಳಲ್ಲಿ ಮಾಡಲಾಗಿರುವ ಕೆಲಸದ ಮಾಹಿತಿ ನೀಡಿದರು.

ನರಗುಂದ ಶಾಸಕ ಮಾಜಿ ಸಚಿವ ಸಿ.ಸಿ. ಪಾಟೀಲ ಯಾವುದೇ ಕಪ್ಪು ಚುಕ್ಕೆಯಿರದ ಸಮರ್ಥ ಪ್ರಧಾನಿ ಮೋದಿಯವರು ಶ್ರಮಯೋಗಿ ಮಾನಧನ್‌, ಆಯುಷ್ಮಾನ ಭಾರತ, ಉಜ್ವಲ ಯೋಜನೆಯಂತಹ ಹಲವು ಯೋಜನೆಗಳ ಮೂಲಕ ಅಭಿವೃದ್ಧಿಗೆ ಮುಂದಾದರು.

ಕೇದಾರಗೌಡ ಭರಮಗೌಡ್ರ ನೀರೂಪಿಸಿದರು. ಜಿಪಂ ಸದಸ್ಯ ಶಿವಕುಮಾರ ನೀಲಗುಂದ, ಹೋಬಳಿ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಡಿ.ಎನ್‌. ಪೋಲಿಸಪಾಟೀಲ ವೇದಿಕೆಯಲ್ಲಿದ್ದರು. ಸುರೇಶ ಗುರಮ್ಮನವರ, ಪ್ರಭುಗೌಡ ಕ್ಯಾಮನಘಡ್ರ, ವಿ.ಟಿ ಕುಲಕರ್ಣಿ, ನಿಂಗಬಸಪ್ಪ ಬಾಣದ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ