ಆ್ಯಪ್ನಗರ

ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಾದ

ಮುಂಡರಗಿ : ಬೆಳಗಾವಿ, ಬೀದರ, ದಾವಣಗೆರೆ, ಧಾರವಾಡ, ಮತ್ತು ಹಾವೇರಿ ಲೋಕಸಭೆ ವ್ಯಾಪ್ತಿಯ ಬೂತಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇರ ಸಂವಾದವನ್ನು ಶುಕ್ರವಾರ ಸಂಜೆ ಏರ್ಪಡಿಸಲಾಗಿತ್ತು.

Vijaya Karnataka 29 Dec 2018, 5:00 am
ಮುಂಡರಗಿ : ಬೆಳಗಾವಿ, ಬೀದರ, ದಾವಣಗೆರೆ, ಧಾರವಾಡ, ಮತ್ತು ಹಾವೇರಿ ಲೋಕಸಭೆ ವ್ಯಾಪ್ತಿಯ ಬೂತಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇರ ಸಂವಾದವನ್ನು ಶುಕ್ರವಾರ ಸಂಜೆ ಏರ್ಪಡಿಸಲಾಗಿತ್ತು.
Vijaya Karnataka Web GDG-28MDR1 MODI
ಮುಂಡರಗಿಯ ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ನಿವಾಸದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೂತಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕರ್ತರು ವೀಕ್ಷಿಸಿದರು.


ಬೆಳಗಾವಿ, ದಾವಣಗೆರೆ, ಧಾರವಾಡ, ಬೀದರ, ಹಾವೇರಿ ಕ್ಷೇತ್ರದಲ್ಲಿ ಒಬ್ಬೊಬ್ಬರು ಕ್ಷೇತ್ರ ಸಮಸ್ಯೆ ಕುರಿತು ಮೋದಿ ಅವರಿಗೆ ಹೇಳಿದರು. ಹಾಗೆ ಎಲ್ಲ ಕ್ಷೇತ್ರಗಳಲ್ಲಿ ಸ್ಮಾರ್ಟ್‌ ಸಿಟಿ, ಔದ್ಯೋಗಿಕರಣ, ದಾವಣಗೆರೆ ಅಪರ್‌ ತುಂಗಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಕುರಿತು ಪ್ರಧಾನಿ ಮೋದಿ ಹೇಳಿದರು.

ಸಂವಾದದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ಜಾರಿಗೊಳಿಸಿದ ಫಸಲ್‌ ಬಿಮಾ ಯೋಜನೆ, ಉಜ್ವಲ, ಮುದ್ರಾ ಯೋಜನೆ ಬಗ್ಗೆ ಹೆಮ್ಮೆಯಿಂದ ಹೇಳಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ತಿಳಿಸಿದರು. ಸಂವಾದದಿಂದ ತಮಗೆ ಸಂತೋಷವಾಗಿದ್ದು ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸರಕಾರ ಕೈಗೊಂಡ ಜನಪ್ರಿಯ ಯೋಜನೆ ತಿಳಿಸಿ ಹೇಳಬೇಕು ಎಂದು ಹೇಳಿದರು.ಇದಕ್ಕೆ ಕಾರ್ಯಕರ್ತರಿಂದ ಸಕಾರಾತ್ಮಕ ಉತ್ತರ ಬಂದಾಗ ಹರ್ಷ ಚಿತ್ತರಾದರು.

ಶಾಸಕ ರಾಮಣ್ಣ ಲಮಾಣಿ, ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ, ಶಿವು ನಾಡಗೌಡ್ರ, ಟಿ.ಡಿ.ದಂಡಿನ, ಮಹಾಂತೇಶ ಕೊರಡಕೇರಿ, ದೇವು ಹಡಪದ, ರಮೇಶ ಹುಳಕಣ್ಣವರ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಹಿರಿಯರ ಸ್ಮರಣೆ :

ಗದುಗಿನ ಬಿಜೆಪಿ ಮಂಡಳ ಅಧ್ಯಕ್ಷ ಜಗನ್ನಾಥ್‌ಸಾ ಬಾಂಡಗೆ ಬಿಜೆಪಿ ಪಕ್ಷ ಸಂಘಟನೆಯ ಪೂರ್ವ ಮಾಹಿತಿ ಒದಗಿಸುತ್ತ, ಜಗನ್ನಾಥ ಜೋಶಿ, ದೇಶಪಾಂಡೆ, ಆರ್‌.ಎ.ಜಾಲಿಹಾಳ, ಎಸ್‌,ಎಸ್‌.ಶೆಟ್ಟರ, ಹೊಂಬಾಳಿ ಅವರು ಪಕ್ಷ ಬೆಳೆಸಿರುವುದನ್ನು ಸ್ಮರಿಸಿ ಪ್ರಧಾನಿ ಮೋದಿ ಅವರಿಗೆ ಹೇಳಿದರು. ಬಿಜೆಪಿ ಹಿರಿಯ ಮುಖಂಡರನ್ನು ಸ್ಮರಿಸಿದಕ್ಕಾಗಿ ಧನ್ಯವಾದಗಳನ್ನು ಹೇಳಿ, ಹಾವೇರಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಉಜ್ವಲ ಯೋಜನೆ ಯಶಸ್ವಿಗೊಂಡಿದೆ ಎಂದು ಹೇಳಿದ ಮೋದಿ ಅವರು ಹೆದ್ದಾರಿ ಸೇರಿದಂತೆ ಸ್ಕಿಲ್‌ ತರಬೇತಿ ಬಗ್ಗೆಯೂ ವಿವರಿಸಿದರು. ಹಾವೇರಿ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನರ ಕ್ಷೇತ್ರದಲ್ಲಿ ನೀರಾವರಿಗೆ ಆದ್ಯತೆ ಕೊಡಲು ವಿನಂತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ