ಆ್ಯಪ್ನಗರ

ಶುಚಿತ್ವಕ್ಕೆ ಆದ್ಯತೆ ನೀಡಿ :ಡಾ. ಸಾಮುದಿ

ನರೇಗಲ್ಲ : ಪ್ರಾಥಮಿಕ ಆರೋಗ್ಯ ಕೇಂದ್ರ, ಜ.ಪಂಚಾಚಾರ್ಯ ಗ್ರಾಮಿಣಾಭಿವೃದ್ಧಿ ಶಿಕ್ಷ ಣ ಸಂಸ್ಥೆ ಆಶ್ರಯದಲ್ಲಿ 2019ರ ಮಲೇರಿಯಾ ಮಾಸಾಚರಣೆಯನ್ನು ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ಆಚರಿಸಲಾಯಿತು.

Vijaya Karnataka 23 Jun 2019, 5:00 am
ನರೇಗಲ್ಲ : ಪ್ರಾಥಮಿಕ ಆರೋಗ್ಯ ಕೇಂದ್ರ, ಜ.ಪಂಚಾಚಾರ್ಯ ಗ್ರಾಮಿಣಾಭಿವೃದ್ಧಿ ಶಿಕ್ಷ ಣ ಸಂಸ್ಥೆ ಆಶ್ರಯದಲ್ಲಿ 2019ರ ಮಲೇರಿಯಾ ಮಾಸಾಚರಣೆಯನ್ನು ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ಆಚರಿಸಲಾಯಿತು.
Vijaya Karnataka Web prioritize cleanliness dr samudhi
ಶುಚಿತ್ವಕ್ಕೆ ಆದ್ಯತೆ ನೀಡಿ :ಡಾ. ಸಾಮುದಿ


ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎ. ಡಿ. ಸಾಮುದ್ರಿ ಮಾತನಾಡಿ, ಬೇಸಿಗೆ ಕಾಲ ಕಳೆದು ಮಳೆಗಾಲ ಪ್ರಾರಂಭವಾಗುತ್ತಲೆ ಅನೇಕ ರೋಗಗಳು ಬರತೊಡಗುತ್ತವೆ. ಅವುಗಳನ್ನು ತಡೆಯಲು ಜನಸಾಮಾನ್ಯರು ಆರೋಗ್ಯದತ್ತ ಗಮನ ಹರಿಸಬೇಕು.

ಹಗಲು ಹೊತ್ತಿನಲ್ಲಿ ಕಚ್ಚುವ ಸಾಧ್ಯತೆಗಳು ಹೆಚ್ಚಾಗಿದ್ದು ವಿಪರೀತ ಜ್ವರ, ವಾಂತಿ, ಮತ್ತು ವಾಕರಿಕೆ, ತಲೆಸುತ್ತುವುದು ಹೀಗೆ ಹಲವು ಲಕ್ಷ ಣಗಳು ಕಂಡುಬಂದಲ್ಲಿ ಅದು ಶಂಕಿತ ಮಲೇರಿಯಾ ಇರಬಹುದು. ಅಥವಾ ಗೋವಾ, ಮಂಗಳೂರಿಗೆ ಹೋಗಿ ಬಂದವರಿದ್ದರೆ ತಪ್ಪದೆ ರಕ್ತತಪಾಸಣೆ ಮಾಡಿಸಿಕೊಳ್ಳಬೇಕು. ರಕ್ತ ತಪಾಸಣೆಯಲ್ಲಿ ಮಲೇರಿಯಾ ಎಂದು ಕಂಡುಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆಗಳ ಸುತ್ತಲಿನ ಪ್ರದೇಶಗಳಲ್ಲಿನ ನಿರುಪಯುಕ್ತ ವಸ್ತುಗಳನ್ನು ಸ್ವಚ್ಛಗೊಳಿಸಿ ಶುಚಿತ್ವಕ್ಕೆ ಆದ್ಯತೆ ನೀಡಿ ಈ ರೋಗ ಬರದಂತೆ ಜಾಗೃತಿವಹಿಸುವುದು ಎಲ್ಲರ ಕರ್ತವ್ಯ ಎಂದರು.

ಬಿಎಚ್‌ಇಒ ಲಿಂಗನಗೌಡ್ರ ಪಿ. ಮಾತನಾಡಿ, ದೇಶವನ್ನು ಮಲೇರಿಯಾ ಮುಕ್ತಗೊಳಿಸಲು ಜನರ ಸ್ಪಂದನೆ ಅಗತ್ಯ ಇದ್ದು ರಾತ್ರಿ ಮಲಗುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಸೊಳ್ಳೆಪರದೆ ಕಟ್ಟಿಕೊಳ್ಳಬೇಕು. ಎಂದರು.ಮುಖ್ಯಾದ್ಯಾಪಕಿ ಎನ್‌. ಎ. ಹಿರೇಮಠ ಅಧ್ಯಕ್ಷ ತೆ ವಹಿಸಿದ್ದರು. ಜಕ್ಕಲಿ ಕಿರಿಯ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಆರೋಗ್ಯ ಸಹಾಯಕ ಎಸ್‌. ಎಫ್‌. ಅಂಗಡಿ, ಸಂಗೀತಾ ಮುಚಕಂಡಿ, ಎಸ್‌. ಎನ್‌. ಪಾಟೀಲ, ಪಿ. ಸಿ. ಹಳಗೇರಿ. ವಿ. ಬಿ. ಪೊಲೀಸ್‌ಪಾಟೀಲ್‌, ಭಾಗ್ಯಲಕ್ಷ್ಮೀ ಅರಕೇರಿ, ಸಾವಿತ್ರಿ ಹಿರೇವಡೆಯರ, ಅಕ್ಕಮಹಾದೇವಿ ಬೆಟಗೇರಿ, ಜೈಶ್ರೀ ಗಂಗರಗೊಂಡ, ಈಶ್ವರ ಆದಿ ಉಪಸ್ಥಿತರಿದ್ದರು. ರತ್ನಾ ಕುರ್ತಕೋಟಿ ಸ್ವಾಗತಿಸಿದರು. ವಿಜಯಲಕ್ಷ್ಮೀ ರೇಣುಕಮಠ ನಿರೂಪಿಸಿದರು. ವಿ. ಬಿ. ಬಿಂಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ