ಆ್ಯಪ್ನಗರ

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ; ಶಾಸಕ ಲಮಾಣಿ

ಮುಂಡರಗಿ: ಬಹು ವರ್ಷಗಳ ಜನರ ಬೇಡಿಕೆ ಮತ್ತು ಅಗತ್ಯವಾದ ಸಿಸಿ ರಸ್ತೆಯಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.

Vijaya Karnataka 12 Sep 2020, 5:00 am
ಮುಂಡರಗಿ: ಬಹು ವರ್ಷಗಳ ಜನರ ಬೇಡಿಕೆ ಮತ್ತು ಅಗತ್ಯವಾದ ಸಿಸಿ ರಸ್ತೆಯಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
Vijaya Karnataka Web 11MDR1 KORL CC RASTE_25
ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಹಮ್ಮಿಗಿ (640 ಮೀಟರ್‌) ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಶುಕ್ರವಾರ ಶಾಸಕ ರಾಮಣ್ಣ ಲಮಾಣಿ ಭೂಮಿಪೂಜೆ ನೆರವೇರಿಸಿದರು.


ತಾಲೂಕಿನ ಕೊರ್ಲಹಳ್ಳಿ ಬಳಿಯ ಮದ್ಲಗಟ್ಟೆ ಸೇತುವ ಹತ್ತಿರದ 1 ಕೋಟಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕೊರ್ಲಹಳ್ಳಿ ಹಮ್ಮಿಗಿ ಪ್ರಮುಖ ರಸ್ತೆಯಾಗಿದ್ದು, ಈ ಭಾಗ ಸಿಂಗಟಾಲೂರು ಇತರ ಗ್ರಾಮಗಳನ್ನು ಸಂಪರ್ಕ ಮಾಡುತ್ತದೆ. ಮಳೆ ಬಂದರೆ ತುಂಗಭದ್ರ ನದಿ ನೀರು (ಮದ್ಲಗಟ್ಟಿ) ನಿಂತು ಈ ಭಾಗದ ರಸ್ತೆ ಸ್ಥಗಿತಗೊಂಡು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತಿದೆ. ಇದನ್ನು ತಪ್ಪಿಸಲು ಉತ್ತಮ ಸಿಸಿ ರಸ್ತೆ ನಿರ್ಮಾಣವಾಗುತ್ತದೆ. 640 ಮೀಟರ್‌ ರಸ್ತೆ ಮಾತ್ರ ಈಗ ನಿರ್ಮಾಣವಾಗುತ್ತಿದ್ದು, ಮುಂದಿನ ಹಂತಗಳಲ್ಲಿಮುಂದಿನ ರಸ್ತೆಗೆ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಸಿಂಗಟಾಲೂರು ಗ್ರಾಮದಲ್ಲಿಪಿಎಂಜಿಎಸ್‌ವೈ ಯೋಜನೆಯಲ್ಲಿ60 ಲಕ್ಷದ ಕಾಮಗಾರಿಗೆ ಕೂಡಾ ಶಾಸಕ ರಾಮಣ್ಣ ಲಮಾಣಿ ಚಾಲನೆ ನೀಡಿದರು. ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಎಸ್‌.ವಿ.ಪಾಟೀಲ, ಸೀತಾರಾಮ ರಾಜು, ಪ್ರಶಾಂತ ಗುಡದಪ್ಪನವರ, ಆರ್‌.ಎಂ.ತಪ್ಪಡಿ, ಬುಟ್ಟು ಹೊಸಮನಿ, ಈರಣ್ಣ ಗುತ್ತಲ ಶೆಟ್ಟರ, ಕೊರ್ಲಹಳ್ಳಿ, ಶಿಂಗಟಾಲೂರು ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ