ಆ್ಯಪ್ನಗರ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

ಶಿರಹಟ್ಟಿ: ಮತಕ್ಷೇತ್ರದಲ್ಲಿಬರುವ ಶಿರಹಟ್ಟಿ-ಮುಂಡರಗಿ ಹಾಗೂ ಲಕ್ಷೆತ್ರ್ಮೕಶ್ವರ ತಾಲೂಕು ಸೇರಿದಂತೆ ಎಲ್ಲಗ್ರಾಮೀಣ ಪ್ರದೇಶಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Vijaya Karnataka 15 Nov 2019, 5:00 am
ಶಿರಹಟ್ಟಿ: ಮತಕ್ಷೇತ್ರದಲ್ಲಿಬರುವ ಶಿರಹಟ್ಟಿ-ಮುಂಡರಗಿ ಹಾಗೂ ಲಕ್ಷೆತ್ರ್ಮೕಶ್ವರ ತಾಲೂಕು ಸೇರಿದಂತೆ ಎಲ್ಲಗ್ರಾಮೀಣ ಪ್ರದೇಶಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
Vijaya Karnataka Web priority for the overall development of the sector
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ


ಅವರು ಗುರುವಾರ ತಾಲೂಕಿನ ಮಜ್ಜೂರ ಗ್ರಾಮದಲ್ಲಿ40ಲಕ್ಷ ರೂ. ವೆಚ್ಚದಲ್ಲಿನೂತನ ಗ್ರಾಪಂ ಕಟ್ಟಡ ಹಾಗೂ ಮಜ್ಜೂರ ತಾಂಡಾದಲ್ಲಿ18ಲಕ್ಷ ರೂ. ವೆಚ್ಚದಲ್ಲಿಸಿಸಿ ಗಟಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿಬಿಜೆಪಿ ಸರಕಾರ ಆಡಳಿತ ನಡೆಸುತ್ತಿದ್ದು, ಇದು ಮತಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಮಳೆಯಿಂದ ಹಾನಿಗೀಡಾದಂತಹ ರಸ್ತೆಗಳ ದುರಸ್ತಿಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಈ ಎಲ್ಲಕೆಲಸಗಳನ್ನು ಸಹ ಮಾಡಲಾಗುವುದು. ಹಾಗೂ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಸಹ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿಮನವಿ ಮಾಡಲಾಗಿದ್ದು, ಅವರು ಸಹ ನೀಡಲು ಭರವಸೆಯನ್ನು ನೀಡಿದ್ದಾರೆ. ಇದರಿಂದ ಮತಕ್ಷೇತ್ರವು ಮಾದರಿ ಮತಕ್ಷೇತ್ರವಾಗುವುದರಲ್ಲಿಸಂದೇಹವಿಲ್ಲಎಂದರು.

ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ತಾಪಂ ಇಒ ಡಾ. ಎನ್‌.ಎಚ್‌. ಓಲೇಕಾರ, ತಾಪಂ ಮಾಜಿ ಸದಸ್ಯ ತಿಮ್ಮರಡ್ಡಿ ಅಳವಂಡಿ, ಮಲ್ಲೇಶ ಲಮಾಣಿ, ರಮೇಶ ಲಮಾಣಿ, ಪಾಂಡಪ್ಪ ಲಮಾಣಿ, ಲಕ್ಷತ್ರ್ಮಪ್ಪ ಲಮಾಣಿ, ಫಕ್ಕೀರೇಶ ಪೂಜಾರ, ನೀಲೇಶ ಲಮಾಣಿ, ಕೆಆರ್‌ಐಡಿಎಲ್‌ ಎಇಇ ಎಲ್‌.ವೈ.ಮಾಳದಕರ, ಮಂಜುನಾಥ ದಳವಿ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ನೀಡದೇ ನಿರ್ಲಕ್ಷತ್ರ್ಯ: ಮಜ್ಜೂರ ಗ್ರಾಮದಲ್ಲಿಇಂದು ನಡೆದಂತಹ ಗ್ರಾಮ ಪಂಚಾಯತ ಕಟ್ಟಡ ನಿರ್ಮಾಣದ ಭೂಮಿಪೂಜೆಗೆ ತಮಗೆ ಯಾವುದೇ ಮಾಹಿತಿ ನೀಡದೇ ನಿರ್ಲಕ್ಷಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ವಸಂತ ಸೋಮಲಪ್ಪ ಲಮಾಣಿ ಗ್ರಾಮದಲ್ಲಿಪತ್ರಿಕಾಗೋಷ್ಠಿಯಲ್ಲಿತಿಳಿಸಿದ್ದಾರೆ.

ಈ ಹಿಂದೆಯೇ ಈ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ವತಿಯಿಂದ ಚಾಲನೆ ನೀಡಲಾಗಿತ್ತು. ಇದೀಗ ಶಾಸಕರು ತಮ್ಮ ಅಧಿಕಾರ ಬಳಸಿಕೊಂಡು ಪುನಃ ಚಾಲನೆ ನೀಡಿದ್ದಾರೆಂದರು.

ಯಂಕಪ್ಪ ಲಮಾಣಿ, ಫಕ್ಕೀರೇಶ, ಲಮಾಣಿ, ತಿಪ್ಪಣ್ಣ ಲಮಾಣಿ, ಮಂಜು ಲಮಾಣಿ, ಬಸವರಾಜ ಮುಂಡವಾಡ, ದೇವಪ್ಪ ಲಮಾಣಿ, ಜಗದೀಶ ಲಮಾಣಿ, ಹನುಮಂತ ಕಿಳ್ಳಿಕ್ಯಾತರ, ಶೇಖಪ್ಪ ಲಮಾಣಿ, ಕಾಳಪ್ಪ ಲಮಾಣಿ, ಜೆಡಿಎಸ್‌ ಮುಖಂಡ ಶಿವು ಲಮಾಣಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ