ಆ್ಯಪ್ನಗರ

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಗದಗ: ರೋಟರಿ ಕ್ಲಬ್‌ ತನ್ನ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ವಿಜಯ ಕಾಲೇಜ್‌ ಆಫ್‌ ಫೈನ್‌ ಆರ್ಟ್ಸ್ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ಲಬ್‌ ಸಭಾಂಗಣದಲ್ಲಿನಡೆದ ಸಾಪ್ತಾಹಿಕ ಸಭೆಯಲ್ಲಿಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಲಾಯಿತು.

Vijaya Karnataka 22 Jan 2020, 5:00 am
ಗದಗ: ರೋಟರಿ ಕ್ಲಬ್‌ ತನ್ನ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ವಿಜಯ ಕಾಲೇಜ್‌ ಆಫ್‌ ಫೈನ್‌ ಆರ್ಟ್ಸ್ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ಲಬ್‌ ಸಭಾಂಗಣದಲ್ಲಿನಡೆದ ಸಾಪ್ತಾಹಿಕ ಸಭೆಯಲ್ಲಿಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಲಾಯಿತು.
Vijaya Karnataka Web prize distribution to the contest winners
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ


ಚಿತ್ರಕಲಾ ಸ್ಪರ್ಧೆಯಲ್ಲಿಪ್ರಥಮಸ್ಥಾನ ಎ.ಎಸ್‌.ಎಸ್‌. ಕಾಲೇಜಿನ ಕುಸುಮಾ ಮಾಳೇಕರ, ದ್ವಿತೀಯ ಸ್ಥಾನ ಸನ್ಮಾರ್ಗ ಪಿ.ಯು. ಕಾಲೇಜಿನ ರಿತು ಕಾಡಸಿದ್ದೇಶ್ವರಮಠ, ತೃತೀಯ ಸ್ಥಾನ ಸರಕಾರಿ ಪ.ಪೂ. ಕಾಲೇಜಿನ ಸಂತೋಷ ರಾಯ್ಕರ್‌ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿಪ್ರಥಮಸ್ಥಾನ ಸರಕಾರಿ ಪ್ರೌಢಶಾಲೆ ಶಿರುಂದದ ಗೀತಾ ಹಡಪದ, ದ್ವಿತೀಯ ಸ್ಥಾನ ಶಿವಶಂಕರ ಕುರ್ತಕೋಟಿ, ತೃತೀಯ ಸ್ಥಾನ ಗಾಯತ್ರಿ ಮುರಗೋಡ ಪಡೆದರು. ಜೆ.ಎನ್‌.ಕಲಾ ಶಾಲೆ ಪ್ರಾಚಾರ‍್ಯ ಡಾ.ಬಿ.ಎಲ್‌.ಪಾಟೀಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.

ಕ್ಲಬ್‌ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಅಮೃತ ಮಹೋತ್ಸವ ಸಮಿತಿ ಚೇರಮನ್‌ ಡಾ. ಶೇಖರ ಸಜ್ಜನರ, ಜಂಟಿ ಕಾರ್ಯದರ್ಶಿ ಚಂದ್ರಮೌಳಿ ಜಾಲಿ,ಪರ್ವತಗೌಡರ, ಡಾ. ಶ್ರೀಶೈಲ ಪಡಸಲಗಿ, ಬಾಲಕೃಷ್ಣ ಕಾಮತ, ಡಾ.ಆರ್‌.ಬಿ.ಉಪ್ಪಿನ, ಐ.ಐ.ಪಟ್ಟಣಶೆಟ್ಟಿ, ಎಚ್‌. ಎಸ್‌.ಪಾಟೀಲ, ಡಾ.ಎ.ಡಿ. ಪಾಟೀಲ, ಐ.ಐ.ಪಟ್ಟಣಶೆಟ್ಟಿ, ಸುಭಾಸ ಬಬಲಾದಿ ಇದ್ದರು. ವಿಶ್ವನಾಥ ಯಳಮಲಿ ಪರಿಚಯಿಸಿದರು. ಶ್ರೀಧರ ಸುಲ್ತಾನಪೂರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ