ಆ್ಯಪ್ನಗರ

ಜೈವಿಕ ಇಂಧನ ಬಳಸಿ ಪರಿಸರ ರಕ್ಷಿಸಿ

ಗದಗ : ಜೈವಿಕ ಇಂಧನ ಹೆಚ್ಚು ಬಳಸಿ ಪರಿಸರ ರಕ್ಷಿಸಬೇಕು, ಜನರು ಪರಿಸರ ಪೂರಕವಾದ ಜೈವಿಕ ಇಂಧನ ಬಳಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟುವುದರ ಜತೆಗೆ ಡಿಸೇಲ್‌ ಕೊರತೆ ನೀಗಿಸಬಹುದು ಎಂದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಡಾ.ಡಿ.ಎಂ.ಗೌಡರ ಹೇಳಿದರು.

Vijaya Karnataka 3 Mar 2019, 5:00 am
ಗದಗ : ಜೈವಿಕ ಇಂಧನ ಹೆಚ್ಚು ಬಳಸಿ ಪರಿಸರ ರಕ್ಷಿಸಬೇಕು, ಜನರು ಪರಿಸರ ಪೂರಕವಾದ ಜೈವಿಕ ಇಂಧನ ಬಳಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟುವುದರ ಜತೆಗೆ ಡಿಸೇಲ್‌ ಕೊರತೆ ನೀಗಿಸಬಹುದು ಎಂದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಡಾ.ಡಿ.ಎಂ.ಗೌಡರ ಹೇಳಿದರು.
Vijaya Karnataka Web GDG-2RUDRAGOUD10
ಗದಗನ ತೋಂಟದಾಶ್ರೀ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಬಯೋಡಿಸೇಲ್‌ ಬಳಕೆಯ ಕುರಿತು ನಡೆದ ಕಾರ್ಯಾಗಾರವನ್ನು ಡಾ.ಡಿ.ಎಂ.ಗೌಡರ ಉದ್ಘಾಟಿಸಿದರು.


ನಗರದ ತೋಂಟದಾಶ್ರೀ ಎಂಜಿನೀಯರಿಂಗ್‌ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಜೈವಿಕ-ಇಂಧನ ಅಭಿವೃದ್ಧಿ ಮಂಡಳಿ, ಜಿಪಂ ಸಹಯೋಗದಲ್ಲಿ ಜಿಪಂ ಅಧೀನದಲ್ಲಿ ಬರುವ ಸರಕಾರಿ ಇಲಾಖೆ ವಾಹನಗಳಲ್ಲಿ ಬಯೋಡಿಜೆಲ್‌ ಬಳಕೆ ಬಗ್ಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಹೊಂಗೆ, ಬೇವು, ಜಟ್ರೋಪಾ, ಸಿಮುರುಭಾ, ಪುಂಡಿ, ಔಡಲು, ಕುಸುಬಿ ಇಂತಹ ಬೆಳೆಗಳನ್ನು ಉಪಬೆಳೆಯಾಗಿ ಬೆಳೆದು ಆರ್ಥಿಕವಾಗಿ ಸಧೃಡರಾಗಲು ಸಾಧ್ಯವಾಗಿದೆ. ದಿನದಿಂದ ದಿನಕ್ಕೆ ನಮ್ಮಲ್ಲಿರುವ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದ್ದು ಇಂತಹ ಗಿಡಗಳನ್ನು ನೆಡುವುದರಿಂದ ಪರಿಸರ ಸಂರಕ್ಷ ಣೆಯಾಗುವುದರ ಜತೆಗೆ ಜಾಗತಿಕ ತಾಪಮಾನ ತಗ್ಗಿಸುವಲ್ಲಿ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಸದುಪಯೊಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರೊ.ವಿಜಯಕುಮಾರ ಮಾಲಗಿತ್ತಿ ಮಾತನಾಡಿ, ಜೈವಿಕ ಇಂಧನ ಬಳಕೆಯಿಂದ ಸಾಕಷ್ಟು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಪ್ರಾಯೋಜಕತ್ವ ಹಾಗೂ ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರದ ವತಿಯಿಂದ ಅತೀ ಕಡಿಮೆ ದರದಲ್ಲಿ ಅಟೋ, ಟಂಟಂ, ಬಸ್‌ ಇತರೆ ವಾಹನಗಳಿಗೆ ಜೈವಿಕ ಇಂಧನ ಬಳಸಿ ವಾಯುಮಾಲಿನ್ಯ ತಡೆಗಟ್ಟುವುದರ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಹಕಾರಿಯಾಗಿದೆ ಎಂದರು.

ಸಂಯೋಜಕ ಪ್ರೊ.ನಿಂಗಪ್ಪ ಪೂಜಾರ ಅವರು ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಜೈವಿಕ ಇಂಧನ ತಯಾರಿ ಮತ್ತು ಬಳಕೆ ಬಗ್ಗೆ ತಿಳಿಸಿಕೊಟ್ಟರು.

ಪ್ರಾಂಶುಪಾಲ ಡಾ.ಎಂ.ಎಂ.ಅವಟಿ ಮಾತನಾಡಿ, ಇಂದಿನ ದಿನಗಳಲ್ಲಿ ಡಿಸೇಲ್‌ ಬೆಲೆ ಹೆಚ್ಚಾಗಿ ಹೋಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಅದಕ್ಕೆ ಕಾರಣ ಕಚ್ಚಾ ತೈಲದ ಅಭಾವ, ಹೆಚ್ಚು ತೈಲ ಬಳಸಿದಂತೆ ಅದು ಬರಿದಾಗುತ್ತ ಹೋಗುತ್ತದೆ. ಪರಿಸರ ಸ್ನೇಹಿಯಾದ ಜೈವಿಕ ಇಂಧನದಿಂದ ಹಲವು ಪ್ರಯೋಜನಗಳಿದ್ದು ಅದರ ಬಳಕೆ ಮತ್ತು ಅರಿವು ಮೂಡಿಸುವಲ್ಲಿ ಚಾಲಕರು ಬಹಳ ಮುಖ್ಯವಾದ ಪಾತ್ರವಿದೆ. ಆದ್ದರಿಂದ ಜೈವಿಕ ಇಂಧನದ ಬಗ್ಗೆ ಆಶಕ್ತಿ ವಹಿಸಿ,ಅದನ್ನು ಬಳಕೆಗೆ ತರಲು ಶ್ರಮಿಸಬೇಕೇಂದರು.

ಎ.ಎ.ಕುಂಬಾರ, ಮನೋಉಲ್ಲಾಸಿನಿ, ಎಂ.ಎಸ್‌. ಪಾಟೀಲ್‌, ಸುನೀಲ ಆದಿ , ಭರಮಗೌಡರ, ಸರಕಾರಿ ವಾಹನಗಳ ಚಾಲಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ