ಆ್ಯಪ್ನಗರ

ರಸ್ತೆಗೆ ಕಲ್ಲು, ಮುಳ್ಳು ಹಚ್ಚಿ ಪ್ರತಿಭಟನೆ

ಗಜೇಂದ್ರಗಡ: ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ 2ನೇ ವಾರ್ಡ್‌ ನಿವಾಸಿಗಳು ಗುರುವಾರ ರಸ್ತೆಗೆ ಅಡ್ಡಲಾಗಿ ಕಲ್ಲು, ಮುಳ್ಳು ಹಚ್ಚಿ ಪ್ರತಿಭಟನೆ ನಡೆಸಿದರು.

Vijaya Karnataka 29 Mar 2019, 5:00 am
ಗಜೇಂದ್ರಗಡ: ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ 2ನೇ ವಾರ್ಡ್‌ ನಿವಾಸಿಗಳು ಗುರುವಾರ ರಸ್ತೆಗೆ ಅಡ್ಡಲಾಗಿ ಕಲ್ಲು, ಮುಳ್ಳು ಹಚ್ಚಿ ಪ್ರತಿಭಟನೆ ನಡೆಸಿದರು.
Vijaya Karnataka Web GDG-28GJD2


ಬೇಸಿಗೆ ಬವಣೆಯಿಂದ ತತ್ತರಿಸಿರುವ ಜನತೆ ಇದೀಗ ನೀರಿಗಾಗಿ ರಸ್ತೆ ತಡೆದು ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ ನಡೆಸಿದ ನಿವಾಸಿಗಳು ಪುರಸಭೆ ತಿಂಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ.ಎಲ್ಲ ವಾರ್ಡ್‌ಗಳಿಗೆ ನೀರು ಬಿಡುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಶಿವಾಜಿ ಪೇಟೆಯ 2 ನೇ ವಾರ್ಡ್‌ನಲ್ಲಿ ಪೈಪ್‌ಲೈನ್‌ ಅವೈಜ್ಞಾನಿಕ ಜೋಡಣೆಯಿಂದ ನೀರು ಪೂರೈಕೆಯಾಗುತ್ತಿಲ್ಲ. ಜತೆಗೆ ಇಲ್ಲಿನ ವಾಲ್ವಗಳು ಜಖಂಗೊಂಡಿದ್ದು ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ನಿರ್ಲಕ್ಷ ್ಯ ತೋರುತ್ತಿದ್ದಾರೆ. ಕೂಡಲೇ ವಾಲ್ವಗಳನ್ನು ದುರಸ್ತಿಗೊಳಿಸಿ ನೀರು ಪೂರೈಸಬೇಕು ಎಂದು ಜನರು ಒತ್ತಾಯಿಸಿದರು. ಬುಧವಾರ ತಡರಾತ್ರಿಯೆ ರಸ್ತೆ ತಡೆ ನಡೆಸಿ ಖಾಲಿ ಕೊಡ ಹಿಡಿದು ಪ್ರತಿಭಟನೆಗೆ ಇಳಿದ ನಿವಾಸಿಗಳು ನೀರು ಪೂರೈಕೆ ಮಾಡುವವರಿಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎನ್ನುವ ಕಡಕ್‌ಆಗಿ ಎಚ್ಚರಿಸಿದರು.

ವಾರ್ಡ್‌ ಸದಸ್ಯ ಯಮನಪ್ಪ ತಿರಕೋಜಿ, ಪುರಸಭೆ ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ಕಾರರ ಮನವೊಲಿಸಲು ಯತ್ನಿಸಿದರು ಪ್ರಯೋಜನವಾಗಲಿಲ್ಲ. ಗುರುವಾರ ಪ್ರತಿಭಟನೆ ನಡೆದ ಪರಿಣಾಮವಾಗಿ ಪುರಸಭೆ ಅಧಿಕಾರಿಗಳು ವಾರ್ಡಿಗೆ ಇಂದು ನೀರನ್ನು ಬಿಡಲಾಗಿದ್ದು ಪ್ರತಿಭಟನೆಯನ್ನು ಹಿಂಪಡೆ ಯಲಾಯಿತು.

ಕಳಕಪ್ಪ ಹೂಗಾರ ಬಸವರಾಜ ಎಲಿಗಾರ, ಕಳಕಪ್ಪ ಪೋತಾ, ರಮೇಶ ಮಡಿವಾಳರ, ರಾಜು ಹೂಗಾರ, ಮುತ್ತು ಹೂಗಾರ, ಚೆನ್ನಪ್ಪ ಎಲಿಗಾರ, ಚಂದ್ರು ಹೂಗಾರ, ಅನ್ನಪೂರ್ಣ ಬಾಗೋಜಿ, ಶಿವಮ್ಮ ಎಲಿಗಾರ, ಕಳಕಮ್ಮ ಹೂಗಾರ ಅಲ್ಲಾಭಕ್ಷಿ ಆನಿ, ಗಂಗಮ್ಮ ಮಡಿವಾಳರ, ದ್ರಾಕ್ಷ ಯಿಣಿ, ಬಸಮ್ಮ ಹೂಗಾರ ಇತರರು ಉಪಸ್ಥಿತರಿದ್ದರು.

ವಾರ್ಡಿನಲ್ಲಿರುವ ವಾಲ್ವಗಳು ಜಖಂಗೊಂಡಿರುವ ಅವನ್ನು ಸರಿಪಡಿಸಿ 2-3 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ