ನರಗುಂದ : ಕೇಂದ್ರ ಸರಕಾರದ ಕಾರ್ಮಿಕ ನೀತಿ, ಕನಷ್ಟ ವೇತನ, ಪಿಂಚಣಿ ಹೆಚ್ಚಳ ಸೇರಿದಂತೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಎರಡನೇ ದಿನವಾದ ಬುಧವಾರ ಇಐಟಿಯುಸಿ,ಎಐಟಿಯುಸಿ ಸಂಘಟನೆಗಳು ಶಿವಾಜಿ ಸರ್ಕಲ್ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧ ಪ್ರತಿಭಟನೆ ನಡೆಸಿದರು.
ಸಿಐಟಿಯು ಮತ್ತು ಎಐಟಿಯು ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿ ಮನೆಗೆ ತೆರಳಿದರು. ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು ಯಥಾಸ್ಥಿತಿಯಲ್ಲಿದ್ದವು.
ಎರಡನೇ ದಿನವೂ ಬೆಳಗ್ಗೆ ನಿಲ್ದಾಣ ಬಸ್ಗಳಿಲ್ಲದೆ ಬಣಗುಡತ್ತಿತ್ತು, ಪ್ರಯಾಣಿಕರು ಬಸ್ಗಳಿಗೆ ಕಾದು ನಿಂತಿದ್ದರು. ಬೆಳಿಗ್ಗೆ 10 ಗಂಟೆ ನಂತರ ಘಟಕದಲ್ಲಿ ನಿಂತಿದ್ದ ಗ್ರಾಮೀಣ ಭಾಗದ ಬಸ್ಗಳು ಒಂದೊಂದಾಗಿ ರಸ್ತೆಗೆ ಇಳಿದವು. ಇಂದು ಶಾಲಾ, ಕಾಲೇಜುಗಳು ತೆರೆದುಕೊಂಡಿದ್ದವು, ಬೆಳಗ್ಗೆ ಬಸ್ ಆರಂಭವಾಗದಿರುವ ಕಾರಣ ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿಗಳು ಗೈರು ಉಳಿಯಬೇಕಾಯಿತು.
ಕಾರ್ಯಕರ್ತೆಯರು ಹೈರಾಣು : ಬೆಳಿಗ್ಗೆಯಿಂದ ನಂ.1 ಮಾದರಿ ಶಾಲೆ ಆವರಣದಲ್ಲಿ ಸೇರಿದ ಕಾರ್ಯಕರ್ತೆಯರು ನಂತರ ಶಿವಾಜಿ ಸರ್ಕಲ್ನಿಂದ ಎರಡು ಕಿಮಿ ದೂರದ ಮಿನಿ ವಿಧಾನ ಸೌಧದವರೆಗೆ ಸುಡು ಬಿಸಿಲಿನಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅಲ್ಲದೆ ಎರಡು ಗಂಟೆಗಳ ಕಾಲ ಮಿನಿ ವಿಧಾನ ಸೌಧ ಎದುರು ಧರಣಿ ನಡೆಸಿದ ಕಾರ್ಯಕರ್ತೆಯರು ವಿಶ್ರಾಂತಿ ಪಡೆದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಶರದಾ ಹಳೆಮನಿ, ಎಸ್.ಬಿ.ರೋಣದ, ಚಿ.ಎಂ.ಮುಲ್ಲಾನವರ, ಎಲ್.ಎಸ್.ಗಾಯಕವಾಡ, ದೇವಕ್ಕ ಮಾಮನಿ, ಬಿಸಿಯೂಟದ ಮಂಜುಳಾ ಮುಳ್ಳೂರ, ಸರಸ್ವತಿ ಹಾಲಿಗೇರಿ, ಮಂಜುಳಾ ಬೆಳವಣಕಿ, ವೀರಭದ್ರಪ್ಪ ನಾಗಠಾಣ ಇತರರು ಪಾಲ್ಗೊಂಡಿದ್ದರು.
ಸಿಐಟಿಯು ಮತ್ತು ಎಐಟಿಯು ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿ ಮನೆಗೆ ತೆರಳಿದರು. ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು ಯಥಾಸ್ಥಿತಿಯಲ್ಲಿದ್ದವು.
ಎರಡನೇ ದಿನವೂ ಬೆಳಗ್ಗೆ ನಿಲ್ದಾಣ ಬಸ್ಗಳಿಲ್ಲದೆ ಬಣಗುಡತ್ತಿತ್ತು, ಪ್ರಯಾಣಿಕರು ಬಸ್ಗಳಿಗೆ ಕಾದು ನಿಂತಿದ್ದರು. ಬೆಳಿಗ್ಗೆ 10 ಗಂಟೆ ನಂತರ ಘಟಕದಲ್ಲಿ ನಿಂತಿದ್ದ ಗ್ರಾಮೀಣ ಭಾಗದ ಬಸ್ಗಳು ಒಂದೊಂದಾಗಿ ರಸ್ತೆಗೆ ಇಳಿದವು. ಇಂದು ಶಾಲಾ, ಕಾಲೇಜುಗಳು ತೆರೆದುಕೊಂಡಿದ್ದವು, ಬೆಳಗ್ಗೆ ಬಸ್ ಆರಂಭವಾಗದಿರುವ ಕಾರಣ ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿಗಳು ಗೈರು ಉಳಿಯಬೇಕಾಯಿತು.
ಕಾರ್ಯಕರ್ತೆಯರು ಹೈರಾಣು : ಬೆಳಿಗ್ಗೆಯಿಂದ ನಂ.1 ಮಾದರಿ ಶಾಲೆ ಆವರಣದಲ್ಲಿ ಸೇರಿದ ಕಾರ್ಯಕರ್ತೆಯರು ನಂತರ ಶಿವಾಜಿ ಸರ್ಕಲ್ನಿಂದ ಎರಡು ಕಿಮಿ ದೂರದ ಮಿನಿ ವಿಧಾನ ಸೌಧದವರೆಗೆ ಸುಡು ಬಿಸಿಲಿನಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅಲ್ಲದೆ ಎರಡು ಗಂಟೆಗಳ ಕಾಲ ಮಿನಿ ವಿಧಾನ ಸೌಧ ಎದುರು ಧರಣಿ ನಡೆಸಿದ ಕಾರ್ಯಕರ್ತೆಯರು ವಿಶ್ರಾಂತಿ ಪಡೆದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಶರದಾ ಹಳೆಮನಿ, ಎಸ್.ಬಿ.ರೋಣದ, ಚಿ.ಎಂ.ಮುಲ್ಲಾನವರ, ಎಲ್.ಎಸ್.ಗಾಯಕವಾಡ, ದೇವಕ್ಕ ಮಾಮನಿ, ಬಿಸಿಯೂಟದ ಮಂಜುಳಾ ಮುಳ್ಳೂರ, ಸರಸ್ವತಿ ಹಾಲಿಗೇರಿ, ಮಂಜುಳಾ ಬೆಳವಣಕಿ, ವೀರಭದ್ರಪ್ಪ ನಾಗಠಾಣ ಇತರರು ಪಾಲ್ಗೊಂಡಿದ್ದರು.