ಆ್ಯಪ್ನಗರ

ಗ್ರಾಪಂ ಸಭೆ ನಡೆಸಲು ಆಗ್ರಹಿಸಿ ಪ್ರತಿಭಟನೆ

ಗಜೇಂದ್ರಗಡ : ಸಮೀಪದ ಸೂಡಿ ಗ್ರಾಮ ಪಂಚಾಯಿತಿಯಿಂದ ಗ್ರಾಮಸಭೆ ನಡೆಸಬೇಕು ಎಂದು ಆಗ್ರಹಿಸಿ ಇಬ್ಬರು ಸದಸ್ಯರು ಜತೆಗೆ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

Vijaya Karnataka 29 Nov 2018, 5:00 am
ಗಜೇಂದ್ರಗಡ : ಸಮೀಪದ ಸೂಡಿ ಗ್ರಾಮ ಪಂಚಾಯಿತಿಯಿಂದ ಗ್ರಾಮಸಭೆ ನಡೆಸಬೇಕು ಎಂದು ಆಗ್ರಹಿಸಿ ಇಬ್ಬರು ಸದಸ್ಯರು ಜತೆಗೆ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
Vijaya Karnataka Web protest demand for grapam meeting
ಗ್ರಾಪಂ ಸಭೆ ನಡೆಸಲು ಆಗ್ರಹಿಸಿ ಪ್ರತಿಭಟನೆ


ಗ್ರಾಪಂ ಸದಸ್ಯರಾದ ಸಂಗಮೇಶ ಮಾರನಬಸರಿ, ಬಸವರಾಜ ಕೋನೇರಿ ಮಾತನಾಡಿ ನ. 28 ರಂದು ನಿಗದಿಯಾದ ಗ್ರಾಮಸಭೆ ರದ್ದು ಪಡಿಸಿದ್ದಾರೆ. ಮೂರು ವರ್ಷದಲ್ಲಿ ಎರಡು ಗ್ರಾಮ ಸಭೆ ನಡೆಸಿಲ್ಲ. ವಾರ್ಡ್‌ ಸಭೆಯೂ ನಡೆಸಿಲ್ಲ. ಇದರಿಂದ ಗ್ರಾಮಸ್ಥರು ಸಮಸ್ಯೆ ಬಗೆ ಹರಿಯುವದು ಹೇಗೆ. ಅದಕ್ಕಾಗಿ ಪಿಡಿಒ ಹಿಡಿದು ಕೂಡಿಸಲಾಗಿದೆ ಎಂದರು.

ಪಿಡಿಒ ಮತ್ತು ಗ್ರಾಪಂ ಅಧ್ಯಕ್ಷ ರ ಹೊಂದಾಣಿಕೆ ಕೊರತೆಯಿಂದ ಗ್ರಾಮಸಭೆ, ವಾರ್ಡ್‌ ಸಭೆ ನಡೆಯುತ್ತಿಲ್ಲ. ಪ್ರತಿಭಟನಾ ಸ್ಥಳಕ್ಕೆ ತಾಪಂ ಕಾರ‍್ಯನಿರ್ವಾಹಕ ಅಧಿಕಾರಿ ಅಥವಾ ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ಹಿಂಪಡೆಯುದಿಲ್ಲ ಎಂದು ಪ್ರತಿಭಟನಾಕಾರರು ಸಂಜೆ 6ರವರೆಗೆ ಹೋರಾಟ ಮುಮದುವರಿಸಿದ್ದರು.

ಶಂಕರಗೌಡ ಪಾಟೀಲ, ಈರಣ್ಣ ದೇಸಾಯಿ ಸಿದ್ದಣ್ಣಾ ಮಾರನಬಸರಿ, ಬಸವರಾಜ ಕಾಶಪ್ಪನವರ, ಪ್ರಕಾಶ ಕುಬಸದ, ಬಸವರಾಜ ಕೋನೇರಿ, ರಾಜು ಕರವಳ್ಳಿ, ಸುರೇಶ ನಿಡಗುಂದಿ, ಮಹೇಶ ಹೂಗಾರ, ರಂಗಪ್ಪ ವಡ್ಡರ್‌, ಶ್ರೀಕಾಂತ ಮಾರನಬಸರಿ, ಈರಣ್ಣ ಗುಜಮಾಗಡಿ, ಬಸವರಾಜ ಕುಂಬಾರ, ಬಸವರಾಜ ಕುಬಸದ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ