ಆ್ಯಪ್ನಗರ

ಉಗ್ರರ ಅಟ್ಟಹಾಸ ಮಟ್ಟ ಹಾಕಲು ಒತ್ತಾಯಿಸಿ ಪ್ರತಿಭಟನೆ

ಗಜೇಂದ್ರಗಡ : ಕಾಶ್ಮಿರದಲ್ಲಿ ಉಗ್ರರ ಅಟ್ಟಹಾಸ ಮಟ್ಟಹಾಕಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಕಾರ‍್ಯಕರ್ತರು, ಎಸ್‌.ಎಂ. ಭೂಮರೆಡ್ಡಿ ಶಾಲಾ ನೂರಾರು ವಿದ್ಯಾರ್ಥಿಗಳು ಪಟ್ಟಣದಲ್ಲಿ ಸೋಮವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

Vijaya Karnataka 19 Feb 2019, 5:00 am
ಗಜೇಂದ್ರಗಡ : ಕಾಶ್ಮಿರದಲ್ಲಿ ಉಗ್ರರ ಅಟ್ಟಹಾಸ ಮಟ್ಟಹಾಕಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಕಾರ‍್ಯಕರ್ತರು, ಎಸ್‌.ಎಂ. ಭೂಮರೆಡ್ಡಿ ಶಾಲಾ ನೂರಾರು ವಿದ್ಯಾರ್ಥಿಗಳು ಪಟ್ಟಣದಲ್ಲಿ ಸೋಮವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
Vijaya Karnataka Web GDG-16GJD1


ಮೈಸೂರ ಮಠದಲ್ಲಿ ಟಕ್ಕೇದ ದರಗಾದ ಬಾಬಾನವರು ಚಾಲನೆ ನೀಡಿದ ಮೆರವಣಿಗೆಯಲ್ಲಿ ಪ್ರತಿಭಟನಾ ನಿರತರು ಉಗ್ರರ ವಿರುದ್ಧ ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡುರಸ್ತೆ ಮಾರ್ಗವಾಗಿ ಸಂಚರಿಸಿ, ಕೆಕೆ ವೃತ್ತದಲ್ಲಿ ಭಹಿರಂಗ ಸಭೆ ನಡೆಸಿದರು.

ಪ್ರತಿಭಟನೆಯಲ್ಲಿ ಭೀಮಣ್ಣಾ ಇಂಗಳೆ, ಕಳಕಪ್ಪ ಪೋತಾ, ರಫಿಕ ತೊರಗಲ್‌ ಮಾತನಾಡಿದರು. ತಹಸೀಲ್ದಾರ ಗುರುಶಿದ್ದಯ್ಯಾ ಹಿರೇಮಠ ಅವರಿಗೆ ಮನವಿ ನೀಡಿದರು. ಮಹದೇವಪ್ಪ ಮಡಿವಾಳರ, ರಮೇಶ ಮಡಿವಾಳರ, ಜಗದೀಶ ಮಡಿವಾಳರ, ಶರಣಪ್ಪ ಚವ್ಹಾಣ, ಮಂಜುನಾಥ ಪೂಜಾರ, ಅಟೋ ಚಾಲಕರ ಸಂಘದ ಅಧ್ಯಕ್ಷ ರಾಚಪ್ಪ ನಾಲತ್ತವಾಡ, ಶಿಕ್ಷ ಕ ಎಸ್‌.ಎಸ್‌. ನರೇಗಲ್‌, ನಾಡಗೀರ, ಷಣ್ಮುಖ ಕಾತರಕಿ, ಗೋಪಾಲ ದ್ಯಾಂಪುರಿ, ಮಂಗಳಪ್ಪ ಬರಗಿ, ಬಸವರಾಜ ಪೂಜಾರ, ಸಂಗಪ್ಪ ಪತಂಗರಾಯ, ಭೀಮಪ್ಪ ಕಲ್ಗುಡಿ, ಪ್ರಭು ಭಿಕ್ಷಾವತಿಮಠ, ಭೀಮಣ್ಣಾ ಚಟಗಿ, ಅಭಿ ಮಾಳೊತ್ತರ, ಶ್ರೀಶಾಂತ ಮಾಳೋತ್ತರ, ಹೇಮಲಪ್ಪ ಹಂಪಿ ಪಾಲ್ಗೊಂಡಿದ್ದರು.

18ಜಿಜೆಡಿ1 ಗಜೇಂದ್ರಗಡ ಕೆಕೆ ವೃತ್ತದಲ್ಲಿ ಸೋಮವಾರ ಉಗ್ರರ ಅಟ್ಟಹಾಸ ಮಟ್ಟಹಾಕಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಕಾರ‍್ಯಕ ರ್ತರು, ಎಸ್‌.ಎಂ. ಭೂಮರೆಡ್ಡಿ ಶಾಲಾ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ