ಆ್ಯಪ್ನಗರ

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಮುಳಗುಂದ :ಸೊರಟೂರ ಗ್ರಾಮದ 3ನೇ ವಾರ್ಡಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಶಿರಹಟ್ಟಿ-ಗದಗ ಮುಖ್ಯರಸ್ತೆ ಬಳಿ ಪ್ರತಿಭಟನೆ ನಡೆಸಿದರು.

Vijaya Karnataka 9 Aug 2019, 5:00 am
ಮುಳಗುಂದ :ಸೊರಟೂರ ಗ್ರಾಮದ 3ನೇ ವಾರ್ಡಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಶಿರಹಟ್ಟಿ-ಗದಗ ಮುಖ್ಯರಸ್ತೆ ಬಳಿ ಪ್ರತಿಭಟನೆ ನಡೆಸಿದರು.
Vijaya Karnataka Web GDG-8MUL1


ಸಾಮಾಜಿಕ ಹೋರಾಟಗಾರ ಹರೀಶ ಮಲ್ಲಾರಿ ಮಾತನಾಡಿ, 3ನೇ ವಾರ್ಡಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಸಾಕಷ್ಟು ಭಾರಿ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಇಲ್ಲಿನ ಸಾರ್ವಜನಿಕರು ಮನೆ ಬಿಟ್ಟು ಹೊರಗಡೆ ಹೋಗದಂತಾಗಿದೆ. ಮಳೆಗಾಲ ಮುಗಿದ ತಕ್ಷ ಣ ಕಾಮಗಾರಿ ಪ್ರಾರಂಭಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಮಾಲತೇಶ ಮೆವುಂಡಿ ಮಾತನಾಡಿ, 3ನೇ ವಾರ್ಡಿನ ರಸ್ತೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಂದ ತಕ್ಷ ಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಮುಳಗುಂದ ಪಿಎಸ್‌ಐ ಶಿವರಾಜ ದರಿಗೋಳ ಗ್ರಾಮಸ್ಥರ ಮನವೊಲಿಸಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಹರೀಶ ಮಲ್ಲಾರಿ,ಹನುಮಂತ ಉಪ್ಪಾರ, ಕಿರಣ ಉಮಜಿ, ದಸ್ತಗೀರಸಾಬ ಬಡಿಗೇರ, ಸಂಜೀವ ಮಲ್ಲಾರಿ, ನಿಂಗಪ್ಪ ಗೋಡಿ, ದೇವೆಂದ್ರಪ್ಪ ಓಂಕಾರಿ, ಪಕ್ಕೀರೇಶ ಜಮಾಣಿ,ನಾಗರಾಜ ಜಮಾಣಿ, ಫಕ್ಕೀರೇಶ ತಳವಾರ, ಮೈಲಾರಪ್ಪ ಕೋರಿ, ಪ್ರವೀಣ ಓಂಕಾರಿ ಮೊದಲಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ