ಆ್ಯಪ್ನಗರ

ಪ್ರಾಚಾರ್ಯರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಬಳಿಯ ಜವಾಹರ ನವೋದಯ ವಿದ್ಯಾಲಯ ಪ್ರಾಚಾರ್ಯರ ವಿರುದ್ಧ ಪಾಲಕರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯಲ್ಲಿಶೈಕ್ಷಣಿಕ ಮಟ್ಟ ಕುಸಿತ ಸೇರಿದಂತೆ ಅವ್ಯವಸ್ಥೆಯ ಆಗರಕ್ಕೆ ಮತ್ತು ಕರ್ತವ್ಯಲೋಪಕ್ಕೆ ಕಾರಣರಾಗಿದ್ದಾರೆ ಎಂದು ಪಾಲಕರು ಆರೋಪಿಸಿದರು. ಸಾವಿರಾರು

Vijaya Karnataka 15 Sep 2019, 5:00 am
ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಬಳಿಯ ಜವಾಹರ ನವೋದಯ ವಿದ್ಯಾಲಯ ಪ್ರಾಚಾರ್ಯರ ವಿರುದ್ಧ ಪಾಲಕರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web protest demanding transfer of principal
ಪ್ರಾಚಾರ್ಯರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

ಶಾಲೆಯಲ್ಲಿಶೈಕ್ಷಣಿಕ ಮಟ್ಟ ಕುಸಿತ ಸೇರಿದಂತೆ ಅವ್ಯವಸ್ಥೆಯ ಆಗರಕ್ಕೆ ಮತ್ತು ಕರ್ತವ್ಯಲೋಪಕ್ಕೆ ಕಾರಣರಾಗಿದ್ದಾರೆ ಎಂದು ಪಾಲಕರು ಆರೋಪಿಸಿದರು. ಸಾವಿರಾರು ವಿದ್ಯಾರ್ಥಿಗಳಲ್ಲಿನವೋದಯ ಪರೀಕ್ಷೆ ಬರೆದು ಆಯ್ಕೆಯಾಗಿ ಈ ಶಾಲೆಗೆ ಬಂದವರಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಅರ್ಹತೆ ಇಲ್ಲದ ಅತಿಥಿ ಶಿಕ್ಷಕರನ್ನು ಪ್ರಾಚಾರ್ಯರು ನೇಮಕ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಶೆಡ್ಯೂಲ್‌ ಪ್ರಕಾರ ಇನ್ನು ಸಿಲೇಬಸ್‌ ಪೂರ್ಣಗೊಳಿಸಿಲ್ಲಎಂದು ಆರೋಪಿಸಿದರು.

ಪಾಲಕ ಪತ್ರಯ್ಯ ಹಿರೇಮಠ, ಬಸವರಾಜ ಅರಹುಣಸಿ ಮತ್ತು ಇತರರು 6ರಿಂದ ಪಿಯುಸಿ ವರೆಗೆ ಓದುತ್ತಿರುವ ಈ ವಿದ್ಯಾಲಯಕ್ಕೆ ವಾಚಮನ್‌ ಇಲ್ಲವಿದ್ಯಾರ್ಥಿಗಳು ಎಲ್ಲೆಂದರಲ್ಲಿಹೋಗುತ್ತಾರೆ ಎಂದು ದೂರಿದರು.

ಪ್ರಾಚಾರ್ಯೆ ಸುಭಾಷಿಣಿ ಮಾತನಾಡಿ, ಕೆಲವು ಶಿಕ್ಷಕರು ರಾಜೀನಾಮೆ ನೀಡಿದ್ದಾರೆ, ಉಳಿದ ಶಿಕ್ಷಕರ ಕೊರತೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಉಳಿದಂತೆ ಯಾವ ಸಮಸ್ಯೆಗಳಿಲ್ಲಎಂದು ಸಮರ್ಥಿಸಿಕೊಳ್ಳುತ್ತಿದ್ದಾಗ, ಆಕ್ರೋಶಗೊಂಡ ಪಾಲಕರು ಈಚೆಗೆ ಊಟಕ್ಕೆ ಕೇವಲ ಅನ್ನಸಾರು ಮಾತ್ರ ಕೊಡಲಾಗುತ್ತಿದೆ. ಮೆನು ಪ್ರಕಾರ ಊಟವನ್ನೇ ಕೊಡುತ್ತಿಲ್ಲ, ದಿನಾಂಕ ಮುಗಿದ ಮಾತ್ರೆಗಳನ್ನು ಕೊಡಲಾಗುತ್ತಿದೆ. ಶೌಚಾಲಯ ಸ್ವಚ್ಛತೆ ಇಲ್ಲಎಂದು ಆರೋಪಿಸಿದರು.

ವಿದ್ಯಾರ್ಥಿಯೊಬ್ಬ ಪಾಲಕರು ತಮ್ಮ ಮಗನಿಗೆ ಆರಾಮ ಇಲ್ಲದಾಗ ಅವಧಿ ಮುಗಿದ ಮಾತ್ರೆಗಳನ್ನು ಕೊಟ್ಟಿದ್ದಾರೆ ಎಂದು ದೂರಿದರು.

ಹಲ್ಲೆದೂರು :
ತಮ್ಮ ಮಗನಿಗೆ ಹರ್ನಿಯಾ ಆಗಿದೆ. ಸಿಬ್ಬಂದಿಯೊಬ್ಬರು ಶೌಚಾಲಯ ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ. ಸ್ವಲ್ಪ ವಿಳಂಬವಾದಾಗ ಹೊಟ್ಟೆಗೆ ಒದಿದ್ದಾರೆ ಎಂದು ಚನ್ನಮ್ಮ ಚೌಕಿಮಠ ಆರೋಪಿಸಿ, ಮಕ್ಕಳ ಹಲ್ಲೆದೌರ್ಜನ್ಯ ನಡೆಯುತ್ತಿದೆ ಎಂದು ದೂರಿದರು.

ಶಕುಂತಲಾ ಕೌತಾಳೆ, ಜಿ.ಎಚ್‌.ವಡ್ಡರ, ಸಿ.ಎಸ್‌.ಹಿರೇಮಠ, ಡಿ.ಎಂ.ದ್ಯಾಮಣ್ಣವರ, ಬಸವರಾಜ ಗಾಮನಕಟ್ಟಿ ,ಶೋಭಾ ಯಲಿಗಾರ ಸೇರಿದಂತೆ ನೂರಾರು ಪಾಲಕರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ