ಚನ್ನಮ್ಮಾಜಿ ವೃತ್ತ ತೆರವು ಖಂಡಿಸಿ ಪ್ರತಿಭಟನೆ
ಗಜೇಂದ್ರಗಡ: ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮಾಜಿಯವರ ವೃತ್ತವನ್ನು ಸಿಂದಗಿಯಲ್ಲಿತೆರವು ಮಾಡಿದ್ದನ್ನು ಖಂಡಿಸಿ ಗಜೇಂದ್ರಗಡ-ಉಣಚಗೇರಿ ಲಿಂಗಾಯತ ಸಮಾಜದ ನೂರಾರು ಮುಖಂಡರು ಇಲ್ಲಿನ ತಹಸೀಲ್ದಾರರ ಕಾರ್ಯಾಲಯದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka 9 Jun 2020, 5:00 am
ಗಜೇಂದ್ರಗಡ: ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮಾಜಿಯವರ ವೃತ್ತವನ್ನು ಸಿಂದಗಿಯಲ್ಲಿತೆರವು ಮಾಡಿದ್ದನ್ನು ಖಂಡಿಸಿ ಗಜೇಂದ್ರಗಡ-ಉಣಚಗೇರಿ ಲಿಂಗಾಯತ ಸಮಾಜದ ನೂರಾರು ಮುಖಂಡರು ಇಲ್ಲಿನ ತಹಸೀಲ್ದಾರರ ಕಾರ್ಯಾಲಯದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ರೋಣ ರಸ್ತೆಯಲ್ಲಿರುವ ಎಪಿಎಂಸಿಯಿಂದ ಸಾಂಕೇತಿಕವಾಗಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕಾಲಕಾಲೇಶ್ವರ ವೃತ್ತದ ಮೂಲಕ ತಹಸೀಲ್ದಾರ ಕಾರ್ಯಾಲಯದ ಎದುರು ಸಮಾವೇಶಗೊಂಡಿತು.
ಟಿ.ಎಸ್. ರಾಜೂರ, ಸಿದ್ದಣ್ಣ ಬಂಡಿ, ಮಾತನಾಡಿ, ಸಿಂಧಗಿ ಪಟ್ಟಣದಲ್ಲಿದ್ದ ಭಾರತದ ಬೆಳ್ಳಿಚುಕ್ಕಿ, ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರವನಿತೆ ಕಿತ್ತೂರು ರಾಣಿ ಚನ್ನಮ್ಮಾಜಿ ವೃತ್ತವನ್ನು ರಾತ್ರೋ ರಾತ್ರಿ ತೆರವುಗೊಳಿಸಿದ್ದು, ಇಡೀ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದಂತೆ ಕೂಡಲೇ ತೆರವು ಮಾಡಿದವರನ್ನು ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಬೇಕು. ಅಂತಹ ದುಷ್ಟರನ್ನು ಸೇವೆಯಿಂದ ಅಮಾನತುಗೊಳಿಸಿ, ಅದೇ ಸ್ಥಳದಲ್ಲಿಪುನಃ ಚನ್ನಮ್ಮಾಜಿ ವೃತ್ತ ನಿರ್ಮಿಸಬೇಕು. ಇಲ್ಲವಾದಲ್ಲಿಲಿಂಗಾಯತ ಪಂಚಮಸಾಲಿ ಸಮಾಜದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಗಜೇಂದ್ರಗಡ-ಉಣಚಗೇರಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ ನೀಡಿದ ಮನವಿಯನ್ನು ತಹಸೀಲ್ದಾರ ವೀರಣ್ಣ ಅಡಗತ್ತಿ ಸ್ವೀಕರಿಸಿದರು.
ಪುರಸಭೆಯ ಸದಸ್ಯ ಸುಭಾಸ ಮ್ಯಾಗೇರಿ, ಸಿ.ಎಸ್. ವಾಲಿ, ಶರಣಪ್ಪ ಪುರ್ತಗೇರಿ, ಪ್ರಭು ಚವಡಿ, ಕಳಕಪ್ಪ ಅಬ್ಬಿಗೇರಿ, ಮಂಜುನಾಥ ಪಲ್ಲೇದ, ಈಶಣ್ಣ ಮ್ಯಾಗೇರಿ, ಚಂಬಣ್ಣ ಚವಡಿ, ಮುತ್ತಣ್ಣ ಮ್ಯಾಗೇರಿ, ಚನ್ನಪ್ಪ ಮ್ಯಾಗೇರಿ ಇತರರು ಪ್ರತಿಭಟನೆಯಲ್ಲಿದ್ದರು.
ಪಟ್ಟಣದ ರೋಣ ರಸ್ತೆಯಲ್ಲಿರುವ ಎಪಿಎಂಸಿಯಿಂದ ಸಾಂಕೇತಿಕವಾಗಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕಾಲಕಾಲೇಶ್ವರ ವೃತ್ತದ ಮೂಲಕ ತಹಸೀಲ್ದಾರ ಕಾರ್ಯಾಲಯದ ಎದುರು ಸಮಾವೇಶಗೊಂಡಿತು.
ಟಿ.ಎಸ್. ರಾಜೂರ, ಸಿದ್ದಣ್ಣ ಬಂಡಿ, ಮಾತನಾಡಿ, ಸಿಂಧಗಿ ಪಟ್ಟಣದಲ್ಲಿದ್ದ ಭಾರತದ ಬೆಳ್ಳಿಚುಕ್ಕಿ, ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರವನಿತೆ ಕಿತ್ತೂರು ರಾಣಿ ಚನ್ನಮ್ಮಾಜಿ ವೃತ್ತವನ್ನು ರಾತ್ರೋ ರಾತ್ರಿ ತೆರವುಗೊಳಿಸಿದ್ದು, ಇಡೀ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದಂತೆ ಕೂಡಲೇ ತೆರವು ಮಾಡಿದವರನ್ನು ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಬೇಕು. ಅಂತಹ ದುಷ್ಟರನ್ನು ಸೇವೆಯಿಂದ ಅಮಾನತುಗೊಳಿಸಿ, ಅದೇ ಸ್ಥಳದಲ್ಲಿಪುನಃ ಚನ್ನಮ್ಮಾಜಿ ವೃತ್ತ ನಿರ್ಮಿಸಬೇಕು. ಇಲ್ಲವಾದಲ್ಲಿಲಿಂಗಾಯತ ಪಂಚಮಸಾಲಿ ಸಮಾಜದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಗಜೇಂದ್ರಗಡ-ಉಣಚಗೇರಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ ನೀಡಿದ ಮನವಿಯನ್ನು ತಹಸೀಲ್ದಾರ ವೀರಣ್ಣ ಅಡಗತ್ತಿ ಸ್ವೀಕರಿಸಿದರು.
ಪುರಸಭೆಯ ಸದಸ್ಯ ಸುಭಾಸ ಮ್ಯಾಗೇರಿ, ಸಿ.ಎಸ್. ವಾಲಿ, ಶರಣಪ್ಪ ಪುರ್ತಗೇರಿ, ಪ್ರಭು ಚವಡಿ, ಕಳಕಪ್ಪ ಅಬ್ಬಿಗೇರಿ, ಮಂಜುನಾಥ ಪಲ್ಲೇದ, ಈಶಣ್ಣ ಮ್ಯಾಗೇರಿ, ಚಂಬಣ್ಣ ಚವಡಿ, ಮುತ್ತಣ್ಣ ಮ್ಯಾಗೇರಿ, ಚನ್ನಪ್ಪ ಮ್ಯಾಗೇರಿ ಇತರರು ಪ್ರತಿಭಟನೆಯಲ್ಲಿದ್ದರು.