ಮೆಣಸಗಿ ಸಂತ್ರಸ್ತರ ಪ್ರತಿಭಟನೆ
ಹೊಳೆಆಲೂರ: ಸೂಕ್ತ ಚಿಕಿತ್ಸೆ, ಅಂಬ್ಯುಲನ್ಸ್, ವೈದ್ಯರು ಸಿಗದ ಹಿನ್ನೆಲೆಯಲ್ಲಿಅಧಿಧಿಕಾರಿಗಳ ನಿರ್ಲಕ್ಷದಿಂದ ಆಗತಾನೆ ಹುಟ್ಟಿದ ಮುತ್ತಪ್ಪ ಮಾದರ ಅವರ ನವಜಾತ ಶಿಶು ಹಾಗೂ ಪ.ಜಾತಿ ಮಹಿಳೆ ಶೆಟ್ಟೆವ್ವ ಸಾವಿಗೆ ಅಧಿಕಾರಿಗಳು ಹೊಣೆಯಾಗಿದ್ದು. ಜಿಲ್ಲಾಧಿಕಾರಿ ಭೇಟಿ ನೀಡಿ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮೆಣಸಗಿ ನೆರೆ ಸಂತ್ರಸ್ತರು ರಸ್ತೆ ತಡೆ ನಡೆಸಿದರು.
Vijaya Karnataka 31 Aug 2019, 5:00 am
ಹೊಳೆಆಲೂರ: ಸೂಕ್ತ ಚಿಕಿತ್ಸೆ, ಅಂಬ್ಯುಲನ್ಸ್, ವೈದ್ಯರು ಸಿಗದ ಹಿನ್ನೆಲೆಯಲ್ಲಿಅಧಿಧಿಕಾರಿಗಳ ನಿರ್ಲಕ್ಷದಿಂದ ಆಗತಾನೆ ಹುಟ್ಟಿದ ಮುತ್ತಪ್ಪ ಮಾದರ ಅವರ ನವಜಾತ ಶಿಶು ಹಾಗೂ ಪ.ಜಾತಿ ಮಹಿಳೆ ಶೆಟ್ಟೆವ್ವ ಸಾವಿಗೆ ಅಧಿಕಾರಿಗಳು ಹೊಣೆಯಾಗಿದ್ದು. ಜಿಲ್ಲಾಧಿಕಾರಿ ಭೇಟಿ ನೀಡಿ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮೆಣಸಗಿ ನೆರೆ ಸಂತ್ರಸ್ತರು ರಸ್ತೆ ತಡೆ ನಡೆಸಿದರು.
ನೆರೆಯ ನಂತರ ಗ್ರಾಮ ಪಂಚಾಯತಿ, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದ ನೊಂದು ಬೆಂದಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಬೆಳಗ್ಗೆಯಿಂದ ಮೆಣಸಗಿ ಬಳಿ ಇರುವ ರಾಜ್ಯ ಹೆದ್ದಾರಿ ಬಂದ್ ಮಾಡಿ ಕೊಣ್ಣೂರು, ರೋಣ ಮಾರ್ಗದಿಂದ ಬಂದ ಎಲ್ಲಬಸ್ ಹಾಗೂ ಖಾಸಗಿ ವಾಹನಗಳನ್ನು ವಾಪಸ್ ಕಳುಹಿಸಲಾಗಿತ್ತು.
ಸ್ಥಳಕ್ಕೆ ತಾಲೂಕು ಮಟ್ಟದ ಎಲ್ಲಅಧಿಧಿಕಾರಿಗಳೊಂದಿಗೆ ಆಗಮಿಸಿದ ರೋಣ ತಹಸೀಲ್ದಾರ ಶರಣಮ್ಮ ಕಾರಿ ಸಂತ್ರಸ್ತರನ್ನು ಸಮಾಧಾನಗೊಳಿಸಿ ಇನ್ನು 3 ದಿನಗಳಲ್ಲಿಎಲ್ಲತೊಂದರೆ ಸರಿಪಡಿಸಲಾಗುವುದು. ಅಲ್ಲಿಯವರೆಗೂ ಶಿಕ್ಷಣ ಇಲಾಖೆ, ಹೆಸ್ಕಾಂ, ಗ್ರಾಪಂ ಸಿಬ್ಬಂದಿ ಇಲ್ಲಿಯೇ ಇದ್ದು ಕೆಲಸ ಮಾಡಿಕೊಡುತ್ತಾರೆ. ಆದಷ್ಟು ಶೀಘ್ರ ರಸ್ತೆ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಹೇಳಿದರು. ಈ ಬಗ್ಗೆ ಜಿಲ್ಲಾಧಿಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೇರಿದ್ದ ಸಂತ್ರಸ್ತರು ಅವರನ್ನು ಆಗ್ರಹಿಸಿದರು. ಕ್ಷೇತ್ರ ಶಿಕ್ಷಣಾಧಿಧಿಕಾರಿ ಎನ್.ನಂಜುಂಡಯ್ಯ , ರೋಣ ಪಿಎಸ್ಐ ಎಲ್.ಕೆ. ಜೂಲಕಟ್ಟಿ, ಜಿಪಂ ಸದಸ್ಯ ಶಿವಕುಮಾರ ನೀಲಗುಂದ, ಅಶೋಕ ಹೆಬ್ಬಳ್ಳಿ, ಕ್ಯಾಮನಗೌಡ್ರ, ನಿಂಗಬಸಪ್ಪ ಮುದೇನೂರ, ಶರಣು ಸೂಡಿ ಮುಂತಾದವರು ಉಪಸ್ಥಿತರಿದ್ದರು.
ನೆರೆಯ ನಂತರ ಗ್ರಾಮ ಪಂಚಾಯತಿ, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದ ನೊಂದು ಬೆಂದಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಬೆಳಗ್ಗೆಯಿಂದ ಮೆಣಸಗಿ ಬಳಿ ಇರುವ ರಾಜ್ಯ ಹೆದ್ದಾರಿ ಬಂದ್ ಮಾಡಿ ಕೊಣ್ಣೂರು, ರೋಣ ಮಾರ್ಗದಿಂದ ಬಂದ ಎಲ್ಲಬಸ್ ಹಾಗೂ ಖಾಸಗಿ ವಾಹನಗಳನ್ನು ವಾಪಸ್ ಕಳುಹಿಸಲಾಗಿತ್ತು.
ಸ್ಥಳಕ್ಕೆ ತಾಲೂಕು ಮಟ್ಟದ ಎಲ್ಲಅಧಿಧಿಕಾರಿಗಳೊಂದಿಗೆ ಆಗಮಿಸಿದ ರೋಣ ತಹಸೀಲ್ದಾರ ಶರಣಮ್ಮ ಕಾರಿ ಸಂತ್ರಸ್ತರನ್ನು ಸಮಾಧಾನಗೊಳಿಸಿ ಇನ್ನು 3 ದಿನಗಳಲ್ಲಿಎಲ್ಲತೊಂದರೆ ಸರಿಪಡಿಸಲಾಗುವುದು. ಅಲ್ಲಿಯವರೆಗೂ ಶಿಕ್ಷಣ ಇಲಾಖೆ, ಹೆಸ್ಕಾಂ, ಗ್ರಾಪಂ ಸಿಬ್ಬಂದಿ ಇಲ್ಲಿಯೇ ಇದ್ದು ಕೆಲಸ ಮಾಡಿಕೊಡುತ್ತಾರೆ. ಆದಷ್ಟು ಶೀಘ್ರ ರಸ್ತೆ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಹೇಳಿದರು. ಈ ಬಗ್ಗೆ ಜಿಲ್ಲಾಧಿಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೇರಿದ್ದ ಸಂತ್ರಸ್ತರು ಅವರನ್ನು ಆಗ್ರಹಿಸಿದರು. ಕ್ಷೇತ್ರ ಶಿಕ್ಷಣಾಧಿಧಿಕಾರಿ ಎನ್.ನಂಜುಂಡಯ್ಯ , ರೋಣ ಪಿಎಸ್ಐ ಎಲ್.ಕೆ. ಜೂಲಕಟ್ಟಿ, ಜಿಪಂ ಸದಸ್ಯ ಶಿವಕುಮಾರ ನೀಲಗುಂದ, ಅಶೋಕ ಹೆಬ್ಬಳ್ಳಿ, ಕ್ಯಾಮನಗೌಡ್ರ, ನಿಂಗಬಸಪ್ಪ ಮುದೇನೂರ, ಶರಣು ಸೂಡಿ ಮುಂತಾದವರು ಉಪಸ್ಥಿತರಿದ್ದರು.