ಆ್ಯಪ್ನಗರ

ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ, ಮನವಿ

ಗಜೇಂದ್ರಗಡ: ವ್ಯಾಪಾರ ಸಮಯ ಕಡಿತಗೊಳಿಸಿರುವ ತೀರ್ಮಾನ ಕೈಬಿಟ್ಟು ಮೊದಲಿನಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೃಷಿಕೂಲಿಕಾರ ಸಂಘದ ತಾಲೂಕು ಅಧ್ಯಕ್ಷ ಬಾಲು ರಾಠೋಡ ಒತ್ತಾಯಿಸಿದರು.

Vijaya Karnataka 15 Jul 2020, 5:00 am
ಗಜೇಂದ್ರಗಡ: ವ್ಯಾಪಾರ ಸಮಯ ಕಡಿತಗೊಳಿಸಿರುವ ತೀರ್ಮಾನ ಕೈಬಿಟ್ಟು ಮೊದಲಿನಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೃಷಿಕೂಲಿಕಾರ ಸಂಘದ ತಾಲೂಕು ಅಧ್ಯಕ್ಷ ಬಾಲು ರಾಠೋಡ ಒತ್ತಾಯಿಸಿದರು.
Vijaya Karnataka Web 14GJD-1_25
ಗಜೇಂದ್ರಗಡ ಬೀದಿಬದಿ ವ್ಯಾಪಾರಸ್ಥರ ಸಂಘ, ಸಿಐಟಿ ಹಾಗೂ ಕೃಷಿಕೂಲಿಕಾರ ಸಂಘದ ನೇತೃತ್ವದಲ್ಲಿತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.


ಇಲ್ಲಿನ ಬೀದಿ ಬದಿ ವ್ಯಾಪಾರಸ್ಥರ ಸಂಘ, ಸಿಐಟಿ ಹಾಗೂ ಕೃಷಿಕೂಲಿಕಾರ ಸಂಘದ ನೇತೃತ್ವದಲ್ಲಿವ್ಯಾಪಾರ ಅವಧಿ ಕಡಿತಗೊಳಿಸಿರುವುದನ್ನು ಖಂಡಿಸಿ ತಹಸೀಲ್ದಾರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿಮಾತನಾಡಿದರು.

ಕೋವಿಡ್‌ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿವ್ಯಾಪಾರದ ಅವಧಿ ಕಡಿಮೆ ಮಾಡಿ ರೋಗ ನಿಯಂತ್ರಿಸಲು ಸಾಧ್ಯವಿಲ್ಲ. ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೇಜರ್‌ ಸೇರಿ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬೀದಿ ವ್ಯಾಪಾರಸ್ಥರ ತಾಲೂಕು ಅಧ್ಯಕ್ಷ ಅಲ್ಲಾಭಕ್ಷಿ ಮುಚ್ಚಾಲಿ ಮಾತನಾಡಿ, ಜಿಲ್ಲಾಡಳಿತ ವ್ಯಾಪಾರಕ್ಕೆ ರಾತ್ರಿ 8ರವರೆಗೆ ಮುಕ್ತ ಅವಕಾಶ ನೀಡಬೇಕೆಂದು ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಚೌಡಮ್ಮ ಯಲ್ಪು, ಬಾಷೆಸಾಬ ಗಣಿ, ಎಂ. ವೈ. ಮ್ಯಾಗೇರಿ, ಎಸ್‌. ಎಸ್‌. ರಂಗ್ರೇಜಿ, ಎ. ಆರ್‌. ನಾಗೇಶ, ಟಾಕಪ್ಪ ಅಜಮೀರ್‌, ಸಂಗಮೇಶ ನಾತವಾಡೆ, ಉಮೇಶ ಹಳ್ಳಿಕೇರಿ, ಎಂ. ಕೆ. ಸುಂಕದ, ಕಳಕಪ್ಪ ಅಜಮೀರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ