ಆ್ಯಪ್ನಗರ

24 ಗಂಟೆ ವೈದ್ಯ ಸೇವೆ ಒದಗಿಸಿ

ರೋಣ: ತಾಲೂಕು ಆಸ್ಪತ್ರೆ ಸೇರಿದಂತೆ ತಾಲೂಕಿನ ಎಲ್ಲಾಪ್ರಾಥಮಿಕ ಕೇಂದ್ರಗಳಲ್ಲಿದಿನದ 24 ಗಂಟೆ ಕಾಲ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ದೊರೆಯುವಂತಾಗಬೇಕು ಡಾ.ಸತೀಶ ಬಸರಿಗಿಡದ ಹೇಳಿದರು.

Vijaya Karnataka 6 Feb 2020, 5:00 am
ರೋಣ: ತಾಲೂಕು ಆಸ್ಪತ್ರೆ ಸೇರಿದಂತೆ ತಾಲೂಕಿನ ಎಲ್ಲಾಪ್ರಾಥಮಿಕ ಕೇಂದ್ರಗಳಲ್ಲಿದಿನದ 24 ಗಂಟೆ ಕಾಲ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ದೊರೆಯುವಂತಾಗಬೇಕು ಡಾ.ಸತೀಶ ಬಸರಿಗಿಡದ ಹೇಳಿದರು.
Vijaya Karnataka Web provide 24 hour physician service
24 ಗಂಟೆ ವೈದ್ಯ ಸೇವೆ ಒದಗಿಸಿ


ಪಟ್ಟಣದ ಡಾ.ಭೀಮಸೇನ ಜೋಷಿ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯ ಆವರಣದಲ್ಲಿಗದಗ ಜಿಲ್ಲೆಯ ನೂತನ ಜಿಲ್ಲಾಆರೋಗ್ಯ ಅಧಿಕಾರಿಗಳಾಗಿ ನೇಮಕಗೊಂಡ ನಿಮಿತ್ತ ಆಸ್ಪತ್ರೆಯ ಸಿಬ್ಬಂದಿ,ವೈದ್ಯರು ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿದರು.

ಡಾ.ಎಚ್‌.ಎಲ್‌.ಗಿರಡ್ಡಿ ಮಾತನಾಡಿ, ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ತುಂಬಾ ಪವಿತ್ರವಾಗಿದೆ. ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿಯ ಕರ್ತವ್ಯವಾಗಿದೆ ಎಂದರು.

ಡಾ.ಬಿ.ಎಸ್‌.ಭಜಂತ್ರಿ ಮಾತನಾಡಿ, ವೈದ್ಯ ವೃತ್ತಿ ವ್ಯಾಪಾರಿಕರಣದ ಕಡೆಗೆ ಹೋಗುತ್ತಿದೆ ಎಂಬ ಅಪವಾದ ಬರುತ್ತಿದೆ. ವೈದ್ಯರು ಹಣಕಾಸಿನ ಕಡೆ ಗಮನ ಕಡಿಮೆ ಮಾಡಿ, ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು ಎಂದರು.

ಕೆ.ಎ.ಹಾದಿಮನಿ,ಡಾ.ಶಾಹೀನ್‌ ಭಗವಾನ್‌, ಡಾ.ರಮೇಶ ದೇವಿಗಿಹಳ್ಳಿ, ಕುಮಾರಸ್ವಾಮಿ ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ