ಆ್ಯಪ್ನಗರ

ಮೌಲ್ಯಾಧಾರಿತ ಶಿಕ್ಷಣ ನೀಡಿ

ನರಗುಂದ: ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿಗಳು ಹೇಳಿದರು. ಇಲ್ಲಿನ ಜ್ಞಾನ ಮುದ್ರಾ ಪಬ್ಲಿಕ್‌ ಶಾಲೆ ವಾರ್ಷಿಕೋತ್ಸವ ಇಂಚರ-2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆ ಜ್ಞಾನ

Vijaya Karnataka 23 Feb 2020, 5:27 pm
ನರಗುಂದ: ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿಗಳು ಹೇಳಿದರು.
Vijaya Karnataka Web provide value added education
ಮೌಲ್ಯಾಧಾರಿತ ಶಿಕ್ಷಣ ನೀಡಿ

ಇಲ್ಲಿನ ಜ್ಞಾನ ಮುದ್ರಾ ಪಬ್ಲಿಕ್‌ ಶಾಲೆ ವಾರ್ಷಿಕೋತ್ಸವ ಇಂಚರ-2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆ ಜ್ಞಾನ ಮುದ್ರಾ ಶಾಲೆ ಶ್ರಮಿಸುತ್ತಿದೆ ಎಂದರು.

ಜ್ಞಾನ ಮುದ್ರಾ ಸ್ಕೂಲ್‌ ಅಧ್ಯಕ್ಷ ವಿ.ಜಿ.ಮಮಟಗೇರಿ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಿಂದ ಬರುವ ವರ್ಷದಲ್ಲಿಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ಸೌಲಭ್ಯ ಒದಗಿಸಲು ಮುಂದಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಸಂಸ್ಥೆ ಉಪಾಧ್ಯಕ್ಷ ಸಿ.ಎನ್‌. ಮಂಟೂರ, ಕಾರ್ಯದರ್ಶಿ ಜಿ.ಎನ್‌.ಕಲ್ಮಠ, ಎಂ.ಡಿ.ಚವ್ಹಾಣ, ಎ.ಸಿ.ವಿರಕ್ತಮಠ, ಎಸ್‌.ಎಸ್‌. ಹೊಸಕೇರಿಮಠ, ಸೋಫಿಯಾ ಫರ್ನಾಂಡಿಸ್‌, ವಿಜಯಲಕ್ಷಿತ್ರ್ಮೕ ಹುಂಬಿ, ಪುಷ್ಪಾ ಪಾವಲಿ, ನಯನಾ ನಾಯ್ಕ, ಸುನಿತಾ ಬಸನ್ನವರ, ರಜೀಯಾ ಶೇಖ್‌, ರುಕ್ಮಿಣಿ ಜತ್ತಿ, ಮಹಾಲಕ್ಷಿತ್ರ್ಮೕ ಚಲವಾದಿ ಉಪಸ್ಥಿತರಿದ್ದರು. ಜಿ.ಎಸ್‌.ಕಲ್ಮಠ ಸ್ವಾಗತಿಸಿರು. ಸುನೀತಾ ಪಾಟೀಲ ನಿರೂಪಿಸಿದರು.

ನಂತರ ನಡೆದ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿಶಿವತಾಂಡವ, ಭರತನಾಟ್ಯ, ಹುಲಿವೇಶ ನೃತ್ಯ, ಸಾಕ್ಷರತೆ, ಪರಿಸರ ಮತ್ತು ಅರಣ್ಯ ಸಂರಕ್ಷಣೆ ಮಹತ್ವ ಸಾರುವ ನೃತ್ಯ ರೂಪಕ ನೋಡುಗರ ಮನ ಸೆಳೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ