ಆ್ಯಪ್ನಗರ

ವರಮಹಾಲಕ್ಷ್ಮೇ ಹಬ್ಬಕ್ಕೆ ಖರೀದಿ ಜೋರು

ರುದ್ರಗೌಡ ಪಾಟೀಲ ಗದಗ: ಶ್ರಾವಣ ಮಾಸದ ಎರಡನೇ ಶುಕ್ರವಾರ ಜಿಲ್ಲಾದ್ಯಂತ ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ವರಮಹಾಲಕ್ಷ್ಮಿ ಪೂಜೆಗಾಗಿ ನಗರದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

Vijaya Karnataka 9 Aug 2019, 5:00 am
ರುದ್ರಗೌಡ ಪಾಟೀಲ ಗದಗ: ಶ್ರಾವಣ ಮಾಸದ ಎರಡನೇ ಶುಕ್ರವಾರ ಜಿಲ್ಲಾದ್ಯಂತ ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ವರಮಹಾಲಕ್ಷ್ಮಿ ಪೂಜೆಗಾಗಿ ನಗರದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.
Vijaya Karnataka Web GDG-8RUDRAGOUD7A


ಹಬ್ಬದ ಅಂಗವಾಗಿ ನಗರದ ಟಾಂಗಾಕೂಟ, ಗ್ರೀನ್‌ ಮಾರುಕಟ್ಟೆ, ಜೆಟಿ ಮಠದ ರಸ್ತೆ, ಬೆಟಗೇರಿ ಬಸ್‌ ನಿಲ್ದಾಣ ಹಾಗೂ ಮಾರುಕಟ್ಟೆಯಲ್ಲಿ ಅಂಗಡಿ ಮುಂಗಟ್ಟು ಅಲ್ಲದೇ, ತಳ್ಳುಗಾಡಿಗಳಲ್ಲೂ ವ್ಯಾಪಾರ ಭರಾಟೆಯಿಂದ ಕೂಡಿತ್ತು. ಉಭಯ ಮಾರುಕಟ್ಟೆ ಗಳಲ್ಲಿ ಹಬ್ಬದ ನಿಮಿತ್ತ ಬಾಳೆದಿಂಡು, ಮಾವಿನಸೊಪ್ಪು, ವಿವಿಧ ಹಣ್ಣು ಹಾಗೂ ಹೂವಿನ ಖರೀದಿಗೆ ಜನರು ಮುಗಿಬಿದ್ದಿದ್ದರು.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವರಮಹಾಲಕ್ಷ್ಮಿಹಬ್ಬವನ್ನು ಜೋರಾಗಿ ಆಚರಣೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಮಳೆ ಇತ್ತು. ಆದರೆ ಗುರುವಾರ ಜಿಲ್ಲೆಯಲ್ಲಿ ಮಳೆರಾಯ ಸ್ವಲ್ಪ ಬಿಡುವು ನೀಡಿದ ಹಿನ್ನೆಲೆಯಲ್ಲಿ ಹಬ್ಬದ ಖರೀದಿಗೆ ಅನೂಕುಲವಾಗಿದೆ. ಅವಳಿ ನಗರ ಹಾಗೂ ಗ್ರಾಮೀಣ ಭಾಗದ ಜನರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಖರೀದಿ ಭರಾಟೆ ಜೋರಾಗಿತ್ತು.

ದರ ಏರಿಕೆ ಬಿಸಿ: ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಿಂದ ಅಗತ್ಯ ವಸ್ತುಗಳ ಬೆಲೆ ಸ್ವಲ್ಪ ಏರಿಕೆ ಕಂಡಿದೆ. ಆದರೂ ವರ್ಷಕ್ಕೆ ಒಂದು ಸಾರಿ ಬರುವ ವರಮಹಾಲಕ್ಷ್ಮಿ ಹಬ್ಬಕ್ಕೆ ಎಷ್ಟೇ ದುಬಾರಿ ಆದರೂ ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ. ಪ್ರತಿ ಕೆಜಿ ಕನಕಾಂಬರ ಹೂವಿಗೆ 1,500 ರೂ, ಸೇವಂತಿಗೆ 200 ರೂ, ಚಂಡು ಹೂವಿಗೆ 120 ರೂ., ಸುಂಗಧಿ 200, ಸೂಜಿ ಮಲ್ಲಿಗೆ 400-500, ಗಲಾಟೆ ಮಲ್ಲಿಗೆ 150, ಕಾಕಡ್‌ 400, ಒಂದು ಗುಲಾಬಿ ಹವಿಗೆ ಹತ್ತು ರೂಪಾಯಿ ವರೆಗೆ ದರವಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ