ಆ್ಯಪ್ನಗರ

ಹದವಾದ ಮಳೆ: ಬಿತ್ತನೆ ಆರಂಭ

ಬೆಳ್ಳಟ್ಟಿ : ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಬಿತ್ತನೆಗೆ ಸಿದ್ದತೆ ಜೋರಾಗಿ ನಡೆದಿದೆ. ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದೆ ಕೆಲಸ ದೊರಕಿದೆ. ಕೆಲವರು ಬಿತ್ತನೆ ಶುರು ಮಾಡಿದ್ದಾರೆ.ಈಗಾಗಲೇ ಬಹಳಷ್ಟು ರೈತರು ಹೊಲಗಳನ್ನು ಸಿದ್ದಪಡಿಸಿಕೊಂಡು ಬಿತ್ತನೆ ಮಾಡುತ್ತಿದ್ದರೆ ಕೆಲವರು ಬಳ್ಳಿ ಶೇಂಗಾಕ್ಕೆ

Vijaya Karnataka 1 Jul 2019, 5:00 am
ಬೆಳ್ಳಟ್ಟಿ : ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಬಿತ್ತನೆಗೆ ಸಿದ್ದತೆ ಜೋರಾಗಿ ನಡೆದಿದೆ. ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದೆ ಕೆಲಸ ದೊರಕಿದೆ. ಕೆಲವರು ಬಿತ್ತನೆ ಶುರು ಮಾಡಿದ್ದಾರೆ.ಈಗಾಗಲೇ ಬಹಳಷ್ಟು ರೈತರು ಹೊಲಗಳನ್ನು ಸಿದ್ದಪಡಿಸಿಕೊಂಡು ಬಿತ್ತನೆ ಮಾಡುತ್ತಿದ್ದರೆ ಕೆಲವರು ಬಳ್ಳಿ ಶೇಂಗಾಕ್ಕೆ ರೆಂಟೆ ಹೊಡೆಯುತ್ತಿದ್ದು. ಹತ್ತಿಕಾಳು ಬಿತ್ತುತ್ತಿದ್ದಾರೆ. ಗೋವಿನ ಜೋಳ ಸೇರಿದಂತೆ ವಿವಿಧ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದಾರೆ.
Vijaya Karnataka Web GDG-29 BLT 02
ಬೆಳ್ಳಟ್ಟಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ರೈತರು ಬೀಜ ಬಿತ್ತನೆ ಮಾಡುತ್ತಿದ್ದಾರೆ.


ತಾಲೂಕಿನಲ್ಲಿ 75450 ಹೆಕ್ಟೇರ್‌ ಬಿತ್ತನೆ ಪ್ರದೇಶ ಇದ್ದು ಅದರಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 69,600 ಹೆಕ್ಟೇರ್‌ನಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಈಗ ಬಿತ್ತನೆಗೆ ಬಹಳಷ್ಟು ರೈತರು ಒಮ್ಮೆಲೆ ಮುಂದಾಗಿದ್ದಾರೆ. ಇದರಿಂದ ಪಟ್ಟಣಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ನೂರಾರು ರೈತರು ಬರುತ್ತಿದ್ದು ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಬೀಜ ಖರೀದಿಗಾಗಿ ಬೆಳಗ್ಗೆ 7 ರಿಂದ ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಿದ್ದಾರೆ.

ರೈತರು ಅಲಸಂದಿ,ಬಿಟಿ ಹತ್ತಿ,ಮೆಣಸಿನಕಾಯಿ, ನವಣೆ, ಈರುಳ್ಳಿ, ಬಿತ್ತನೆ ಮಾಡುತ್ತಿದ್ದಾರೆ.ಗ್ರಾಮೀಣ ಭಾಗದ ರೈತರು ಬಿತ್ತನೆ ಕೃಷಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು. ಈಗ ಭರದಿಂದ ಸಾಗಿದ್ದು. ಅವರೆಲ್ಲ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ರಸಾಯನಿಕ ಗೊಬ್ಬರಗಳನ್ನು ಕ್ರಿಮಿನಾಶಕ ಮೊದಲಾದವುಗಳನ್ನು ಸಂಗ್ರಹ ಜತೆಗೆ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೂಲಿ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಏಕೆಂದರೆ ಇಷ್ಟೊಂದು ದಿನಗಳಲ್ಲಿ ಮನೆಯಲ್ಲಿಯೇ ಇದ್ದ ಕೂಲಿ ಕಾರ್ಮಿಕರು ಈಗ ಉತ್ತಮ ಮಳೆಯಾಗಿರುವುದರಿಂದ ಹೊಲಗಳಲ್ಲಿ ಕಸ ಆರಿಸೋಕೆ ಹಾಗೂ ಬಿತ್ತನೆ ಜತೆಯಲ್ಲಿ ಗೊಬ್ಬರ ಹಾಕಲು ಹೋಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ