ಆ್ಯಪ್ನಗರ

ವಿಶ್ವಕ್ಕೆ ಶ್ರೇಷ್ಠ ಸಂದೇಶ ನೀಡುವ ರಾಮಾಯಣ

ರೋಣ : ವಿಶ್ವಕ್ಕೆ ವಾಲ್ಮೀಕಿ ರಾಮಾಯಣ ಪವಿತ್ರ ಗ್ರಂಥ ನೀಡಿದ ಮಹಾನ್‌ ಚೇತನ ಮಹರ್ಷಿ ವಾಲ್ಮೀಕಿ. ರಾಮರಾಜ್ಯದ ಕನಸು ಹೊಂದಿದ್ದ ಅವರ ತತ್ವಾದಾರ್ಶಗಳನ್ನು ಜೀವನದಲ್ಲಿಮೈಗೂಡಿಸಿಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ಬಸವರಾಜ ತಳವಾರ ಹೇಳಿದರು.

Vijaya Karnataka 16 Oct 2019, 7:19 pm
ರೋಣ : ವಿಶ್ವಕ್ಕೆ ವಾಲ್ಮೀಕಿ ರಾಮಾಯಣ ಪವಿತ್ರ ಗ್ರಂಥ ನೀಡಿದ ಮಹಾನ್‌ ಚೇತನ ಮಹರ್ಷಿ ವಾಲ್ಮೀಕಿ. ರಾಮರಾಜ್ಯದ ಕನಸು ಹೊಂದಿದ್ದ ಅವರ ತತ್ವಾದಾರ್ಶಗಳನ್ನು ಜೀವನದಲ್ಲಿಮೈಗೂಡಿಸಿಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ಬಸವರಾಜ ತಳವಾರ ಹೇಳಿದರು.
Vijaya Karnataka Web ramayana is the greatest message to the world
ವಿಶ್ವಕ್ಕೆ ಶ್ರೇಷ್ಠ ಸಂದೇಶ ನೀಡುವ ರಾಮಾಯಣ


ಅವರು ತಾಲೂಕಿನ ಅಬ್ಬಿಗೇರಿ ಗ್ರಾಪಂನಲ್ಲಿಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.

ವಿಶ್ವಕ್ಕೆ ರಾಮಾಯಣದಂಥ ಮಹಾನ್‌ ಗ್ರಂಥ ನೀಡಿದ ಕೊಡುಗೆ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಹಾಗೆಯೇ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್‌ ದಾರ್ಶನಿಕ. ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಗ್ರಾಪಂ ಸದಸ್ಯ ಸುರೇಶ ನಾಯ್ಕರ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ಪ್ರಪಂಚದಲ್ಲೇ ಅತೀ ಶ್ರೇಷ್ಠವಾದ ಗ್ರಂಥಗಳಲ್ಲಿರಾಮಾಯಣ ಕೂಡ ಒಂದು ಎಂದರು

ಗ್ರಾಪಂ ಅಧ್ಯಕ್ಷ ಕಳಕಪ್ಪ ಬಿಲ್‌ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿಉಪಾಧ್ಯಕ್ಷೆ ದೇವಕ್ಕ ಮಾರೆಪ್ಪನವರ, ಯಲ್ಲಪ್ಪ ಹಿರೇಮನಿ, ಮಹಾದೇವಪ್ಪ ಕಂಬಳಿ, ಶರಣಪ್ಪ ಗುಜಮಾಗಡಿ, ಮಹಾದೇವಪ್ಪ ಕಂಬಳಿ, ಭೀಮಶಿ ಮಲ್ಲಾಪೂರ, ಸರೋಜಾ ಕಲ್ಲೇಶಾನಿ, ಮಮತಾಜ್‌ಬೇಗಂ ಹುಡೇಧ, ಶಾರದಾ ಹಡಪದ, ಮುತ್ತಕ್ಕ ನೀಡಗುಂದಿ, ಸಕ್ರಮ್ಮ ನಿರಲೋಟಿ, ಶಿವನಗೌಡ ಮೆಣಸಗಿ, ವೀರಪ್ಪ ಮ್ಯಾಗೇರಿ ಇತರರು ಉಪಸ್ಥಿತರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ